ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!

Chanakya Niti: ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ರದಲ್ಲಿ ಕೆಲ ಕೆಲಸಗಳನ್ನು ಮಾಡದೆ ಇರಲು ಸಲಹೆಗಳನ್ನು ನೀಡಿದ್ದಾರೆ. ಜೀವನದ ಅನಾವಶ್ಯಕ ಸಂಕಷ್ಟಗಳಿಂದ ಪಾರಾಗುವುದೆ ಇವುಗಳ ಹಿಂದಿನ ಉದ್ದೇಶ. ಇದರ ಜೊತೆಗೆ ಕೆಟ್ಟ ಗಳಿಗೆಯೂ ಕೂಡ ಸುಲಭವಾಗಿ ಕಳೆದು ಹೋಗುತ್ತದೆ.  

Written by - Nitin Tabib | Last Updated : Sep 23, 2023, 11:15 PM IST
  • ವ್ಯಾಪಾರದಲ್ಲಿ ನಿಮಗೆ ದೊಡ್ಡ ನಷ್ಟ ಉಂಟಾದಾಗ ಎಲ್ಲರ ಮುಂದೆ ಅದನ್ನು ಹೇಳಿಕೊಳ್ಳಬೇಡಿ ಎಂದು ಚಾಣಕ್ಯ ನೀತಿ ಹೇಳುತ್ತದೆ.
  • ಬದಲಿಗೆ ಈ ನಷ್ಟದ ಬಗ್ಗೆ ಯಾರ ಮುಂದೆಯೂ ಮಾತನಾಡದಿರುವುದು ಉತ್ತಮ. ಇಲ್ಲದಿದ್ದರೆ, ಜನರು ನಿಮ್ಮೊಂದಿಗೆ ವ್ಯಾಪಾರ ಮಾಡುವುದರಿಂದ ದೂರ ಸರಿಯಲು ಪ್ರಾರಂಭಿಸುತ್ತಾರೆ,
  • ಇದು ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಅಲ್ಲದೆ ನೀವು ಗೌರವವನ್ನು ಸಹ ಕಳೆದುಕೊಳ್ಳುವಿರಿ.
ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ! title=

Chanakya Niti for Life: ಮಹಾನ್ ತತ್ವಜ್ಞಾನಿಯಾಗಿದ್ದ ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ರಾಜತಾಂತ್ರಿಕತೆಯ ಬಗ್ಗೆ ಮಾತ್ರವಲ್ಲದೆ, ವಾಸ್ತವಿಕ ಜೀವನದ ಕುರಿತು ಕೆಲ ನೀತಿಗಳನ್ನು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಈ ನೀತಿಗಳನ್ನು ಅನುಸರಿಸಿ ಒಬ್ಬ ವ್ಯಕ್ತಿ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಇದರ ಜೊತೆಗೆ ಸಂಕಷ್ಟದ ಕಾಲವನ್ನು ಕೂಡ ಆತ ಸುಲಭವಾಗಿ ಎದುರಿಸಬಹುದು. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನೆರವಾಗುವ ಆ ಪ್ರಮುಖ ನೀತಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಎಂತಹ ಪರಿಸ್ಥಿತಿ ಎದುರಾದರೂ ಕೂಡ ನಿಮ್ಮ ಈ ಗುಟ್ಟು ಯಾರಿಗೂ ಹೇಳಬೇಡಿ
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿರುತ್ತದೆ ಮತ್ತು ಸಾಕಷ್ಟು ಸವಾಲುಗಳು ಎದುರಾಗುತ್ತವೆ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಮುಂದಕ್ಕೆ ಸಾಗಬೇಕು ಹಾಗೂ ಕೆಲ ಸಂಗತಿಗಳನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬಾರದು ಎಂದು ಅವರು ಹೇಳುತ್ತಾರೆ. ನಿಮ್ಮ ದುಃಖಗಳು ಹಾಗೂ ಸಮಸ್ಯೆಗಳನ್ನು ಪ್ರತಿಯೊಬ್ಬರ ಮುಂದೆ ವ್ಯಕ್ತಪಡಿಸುವುದು ನಿಮ್ಮನ್ನು ಸಂಕಷ್ಟಕ್ಕೀಡು ಮಾಡಬಹುದು ಹಾಗೂ ನಿಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಹುದು. 

>> ವ್ಯಾಪಾರದಲ್ಲಿ ನಿಮಗೆ ದೊಡ್ಡ ನಷ್ಟ ಉಂಟಾದಾಗ ಎಲ್ಲರ ಮುಂದೆ ಅದನ್ನು ಹೇಳಿಕೊಳ್ಳಬೇಡಿ ಎಂದು ಚಾಣಕ್ಯ ನೀತಿ ಹೇಳುತ್ತದೆ. ಬದಲಿಗೆ ಈ ನಷ್ಟದ ಬಗ್ಗೆ ಯಾರ ಮುಂದೆಯೂ ಮಾತನಾಡದಿರುವುದು ಉತ್ತಮ. ಇಲ್ಲದಿದ್ದರೆ, ಜನರು ನಿಮ್ಮೊಂದಿಗೆ ವ್ಯಾಪಾರ ಮಾಡುವುದರಿಂದ ದೂರ ಸರಿಯಲು ಪ್ರಾರಂಭಿಸುತ್ತಾರೆ, ಇದು ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಅಲ್ಲದೆ ನೀವು ಗೌರವವನ್ನು ಸಹ ಕಳೆದುಕೊಳ್ಳುವಿರಿ.

ಇದನ್ನೂ ಓದಿ-ಅಪಧಮನಿಗಳಲ್ಲಿನ ಹಟಮಾರಿ ಜಿಡ್ಡು ತೊಲಗಿಸಲು ನಿಮ್ಮ ಆಹಾರದಲ್ಲಿರಲಿ ಈ ಪದಾರ್ಥಗಳು!

>> ಪತಿ ಅಥವಾ ಪತ್ನಿಯಲ್ಲಿ ದೋಷಗಳಿರುವುದು ಅಥವಾ ಪ್ರತಿದಿನ ಜಗಳವಾಡುವುದು ಒಳ್ಳೆಯದಲ್ಲ. ಇದು ಇಡೀ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುವುದು ಉತ್ತಮ. ಹಾಗೆಯೇ ಪತಿ-ಪತ್ನಿಯರ ನಡುವಿನ ಜಗಳದ ಬಗ್ಗೆ ಯಾರಿಗೂ ಹೇಳಬೇಡಿ ಎಂಬುದನ್ನು ಸದಾ ನೆನಪಿನಲ್ಲಿಡಿ. ಪರಸ್ಪರ ಕೆಟ್ಟದ್ದನ್ನು ಮಾತನಾಡಬೇಡಿ. ಇಲ್ಲದಿದ್ದರೆ ಜಗಳ ಮುಗಿದರೂ ಕೂಡ ಜನರ ದೃಷ್ಟಿಯಲ್ಲಿ ನಿಮ್ಮ ಬೆಗೆಗಿನ ಇಮೇಜ್ ಶಾಶ್ವತವಾಗಿ ಹಾಳಾಗುತ್ತದೆ. ಅಲ್ಲದೆ, ನಿಮ್ಮ ವೈವಾಹಿಕ ಜೀವನವು ಇತರರಿಗೆ ತಮಾಷೆಯ ವಿಷಯವಾಗುತ್ತದೆ.

ಇದನ್ನೂ ಓದಿ-ಶನಿಯ ಸಾಡೇಸಾತಿಯಿಂದ ಮುಕ್ತಿ ನೀಡುತ್ತೇ ಈ ಒಂದು ಚಿಕ್ಕ ಉಪಾಯ!

>> ಯಾವುದೇ ಒಂದು ವಿಷಯದ ಕಾರಣ ಅವಮಾನ ನಿಮ್ಮ ಪಾಲಿಗೆ ಬಂದಿದ್ದರೆ, ಅದನ್ನು ಯಾರಿಗೂ ಕೂಡ ಹೇಳಬೇಡಿ. ನಿಮಗಾದ ಅವಮಾನವನ್ನು ನೀವು ನಿಮ್ಮೊಳಗೆಯೇ ಇಟ್ಟುಕೊಳ್ಳುವುದು ಜಾಣತನ. ಅದನ್ನು ಎಲ್ಲರಿಗೂ ಹೇಳಿ ಅವರ ದೃಷ್ಟಿಯಲ್ಲಿರುವ ನಿಮ್ಮ ಬಗೆಗಿನ ಗೌರವವನ್ನು ಕಡಿಮೆ ಮಾಡಿಕೊಳ್ಳಬೇಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News