Horoscope Today: ಈ ರಾಶಿಯ ಜನರಿಗೆ ಲಾಭದ ಜೊತೆಗೆ ಯಶಸ್ಸು ಸಿಗುತ್ತದೆ

Astrological prediction (22-10-2022): ವೃಷಭ ರಾಶಿಯವರಿಗೆ ನಿರೀಕ್ಷೆಗೆ ತಕ್ಕ ಯಶಸ್ಸು ಸಿಗುವುದರಲ್ಲಿ ಸಂಶಯವಿದೆ. ಕರ್ಕಾಟಕ ರಾಶಿಯವರಿಗೆ ನೀಡಿದ ಗುರಿ ಪೂರೈಸಲ ನಿರಂತರ ಪ್ರಯತ್ನ ಮಾಡುತ್ತಿರಿ. ಶನಿವಾರದ ನಿಮ್ಮ ದಿನಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Oct 22, 2022, 06:05 AM IST
  • ವೃಷಭ ರಾಶಿಯವರಿಗೆ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಸಿಗುವುದರಲ್ಲಿ ಸಂಶಯವಿರುತ್ತದೆ
  • ಮಿಥುನ ರಾಶಿಯವರು ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು
  • ಕರ್ಕ ರಾಶಿಯ ಜನರು ಕುಟುಂಬದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು
Horoscope Today: ಈ ರಾಶಿಯ ಜನರಿಗೆ ಲಾಭದ ಜೊತೆಗೆ ಯಶಸ್ಸು ಸಿಗುತ್ತದೆ  title=
ಶನಿವಾರದ ರಾಶಿ ಭವಿಷ್ಯ

Horoscope Today (22-10-2022): ಶನಿವಾರದಂದು ಕನ್ಯಾ ರಾಶಿಯ ಜನರಿಗೆ ಪ್ರಗತಿಯ ಬಾಗಿಲು ತೆರೆಯಲಿದೆ. ಅದೇ ರೀತಿ ಮೀನ ರಾಶಿಯ ಯುವಕರು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.

ಮೇಷ ರಾಶಿ: ಈ ರಾಶಿಯ ಜನರು ಕಚೇರಿ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಧೀನ ಅಧಿಕಾರಿಗಳ ಕೆಲಸದ ಮೇಲೆ ನಿಗಾ ಇರಿಸಿ ಅಡಚಣೆಗಳನ್ನು ತಡೆಯಬಹುದು. ಚಿಲ್ಲರೆ ವ್ಯಾಪಾರಿಗಳು ಸಾಲ ನೀಡುವುದನ್ನು ತಪ್ಪಿಸಬೇಕು. ಯುವಕರು ಉತ್ತಮವಾಗಿ ಅಧ್ಯಯನ ಮಾಡಬೇಕು. ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಅಸಮಾಧಾನ ಹೊಂದಿದ್ದರೆ, ಅವರ ಮನವೊಲಿಸುವ ಕೆಲಸ ಮಾಡಿ. ಪ್ರಯಾಣದ ವೇಳೆ ವಿಶೇಷ ಕಾಳಜಿ ವಹಿಸುವುದು ಸೂಕ್ತ.

ವೃಷಭ ರಾಶಿ: ವೃಷಭ ರಾಶಿಯವರಿಗೆ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಸಿಗುವುದರಲ್ಲಿ ಸಂಶಯವಿರುತ್ತದೆ, ಇದರಿಂದ ಮನಸ್ಸಿನಲ್ಲಿ ಹತಾಶೆಯ ಭಾವನೆಗಳು ಮೂಡುತ್ತವೆ. ವ್ಯವಹಾರದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು. ಕೆಲವು ವಿಷಯಗಳಲ್ಲಿ ಗ್ರಾಹಕರೊಂದಿಗೆ ವಿವಾದ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿದೆ. ಆರೋಗ್ಯದ ವಿಷಯದಲ್ಲಿ ದೈಹಿಕ ಆಯಾಸದಂತಹ ಪರಿಸ್ಥಿತಿ ಬರಬಹುದು, ಕೆಲಸ ಜಾಸ್ತಿಯಾದರೆ ಸ್ವಲ್ಪ ವಿಶ್ರಾಂತಿ ಪಡೆದು ಕೆಲಸ ಮಾಡಿ.

ಮಿಥುನ ರಾಶಿ: ಈ ರಾಶಿಯ ಜನರು ಉತ್ತಮವಾಗಿ ಕೆಲಸ ಮಾಡಬೇಕು. ವ್ಯವಹಾರದ ಬಗ್ಗೆ ಭವಿಷ್ಯ ಹೇಗಿರುತ್ತದೆಂದು ಊಹಿಸಬೇಡಿ. ಪೀಠೋಪಕರಣಗಳ ವ್ಯಾಪಾರಸ್ಥರಿಗೆ ದೊಡ್ಡ ಲಾಭವಾಗಲಿದೆ. ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಸೂಚನೆಗಳನ್ನು ಅನುಸರಿಸಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ನೀವು ಸಾಮಾಜಿಕ ಕ್ಷೇತ್ರದಲ್ಲಿ ಸ್ನೇಹಿತರ ಬೆಂಬಲ ಪಡೆಯುತ್ತೀರಿ.

ಕರ್ಕ ರಾಶಿ: ಕರ್ಕಾಟಕ ರಾಶಿಯವರಿಗೆ ನೀಡಿದ ಗುರಿ ಪೂರೈಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರಿ. ಉದ್ಯಮಿಗಳು ಹೆಚ್ಚು ಉತ್ಸಾಹಿಗಳಾಗಿದ್ದರೆ ಹೆಚ್ಚು ಯಶಸ್ಸನ್ನು ಸಿಗುತ್ತದೆ. ಸೋಮಾರಿತನವು ಯುವಕರ ಭವಿಷ್ಯಕ್ಕೆ ಮಾರಕ. ಕುಟುಂಬದ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಆದಾಯ ಹೆಚ್ಚಿಸಲು ಪ್ರಯತ್ನಿಸುವುದರ ಜೊತೆಗೆ, ಖರ್ಚುಗಳನ್ನು ನಿಯಂತ್ರಿಸಬೇಕು. ಧರ್ಮ-ಕರ್ಮವನ್ನು ಹೆಚ್ಚಿಸುವ ಅವಶ್ಯಕತೆಯಿದೆ, ಇದು ನಿಮಗೆ ಆಧ್ಯಾತ್ಮಿಕ ಶಾಂತಿ ನೀಡುತ್ತದೆ ಮತ್ತು ಮಾನಸಿಕ ಶಕ್ತಿಯೂ ಲಭ್ಯವಾಗುತ್ತದೆ.

ಇದನ್ನೂ ಓದಿ: Dhanatrayodashi 2022: ಧನತ್ರಯೋದಶಿ ದಿನ ಖಾಲಿ ಹೊಸ ಪಾತ್ರೆಯೊಂದಿಗೆ ಮನೆ ಪ್ರವೇಶಿಸುವುದು ಅಪಶಕುನ, ನಿಯಮ ಏನು ಹೇಳುತ್ತದೆ?

ಸಿಂಹ ರಾಶಿ: ಈ ರಾಶಿಯ ಜನರು ಮೇಲಧಿಕಾರಿಯ ಮಾತಿನಿಂದ ಕೋಪಗೊಳ್ಳಬಹುದು, ಯುವಕರು ತಮ್ಮ ಹಿರಿಯರೊಂದಿಗೆ ವಾದ ಮಾಡಬಾರದು. ವ್ಯಾಪಾರಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಲಾಭ ಪಡೆಯುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುತ್ತೀರಿ. ಇದರಿಂದಾಗಿ ನರಗಳಲ್ಲಿ ಒತ್ತಡ ಮತ್ತು ಸ್ನಾಯುಗಳಲ್ಲಿ ನೋವು ಇರುತ್ತದೆ. ಸ್ನೇಹಿತರ ಸಲಹೆಗಳನ್ನು ಪರಿಗಣಿಸಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಿ.

ಕನ್ಯಾ ರಾಶಿ: ಕನ್ಯಾ ರಾಶಿಯ ಜನರಿಗೆ ಪ್ರಗತಿಯ ಬಾಗಿಲು ತೆರೆಯಲಿದೆ. ಸಹೋದ್ಯೋಗಿಯ ಅಗತ್ಯಕ್ಕೆ ಸಹಾಯ ಮಾಡಬೇಕಾಗಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳು ಹೊಸ ಯೋಜನೆಗಳನ್ನು ಪಡೆಯಬಹುದು. ಯುವಕರು ಯೋಚಿಸದೆ ನಿರ್ಧಾರ ತೆಗೆದುಕೊಳ್ಳಬಾರದು. ಮಕ್ಕಳ ವಿಷಯವಾಗಿ ಕುಟುಂಬದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುತ್ತದೆ, ಬಹಳ ಬುದ್ಧಿವಂತಿಕೆಯಿಂದ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸಿ.  

ತುಲಾ ರಾಶಿ: ಈ ರಾಶಿಯವರಿಗೆ ವಿದೇಶಿ ಕಂಪನಿಗಳಿಂದ ವ್ಯಾಪಾರದಲ್ಲಿ ಲಾಭ ಸಿಗಲಿದೆ. ಉದ್ಯಮಿಗಳು ಮಾನಸಿಕ ಒತ್ತಡ ಅನುಭವಿಸಬಹುದು. ಆನ್‌ಲೈನ್ ಉದ್ಯಮಿಗಳು ಲಾಭ ಗಳಿಸಲು ಸಾಧ್ಯವಾಗುತ್ತದೆ, ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ದೊಡ್ಡ ವ್ಯವಹಾರ ಮಾಡಲು ಅವಕಾಶ ಸಿಗುತ್ತದೆ. ಮಾತೃಭಾಷೆಯ ಹೊರತಾಗಿ ಹೊಸ ಭಾಷೆ ಕಲಿಯಲು ಯುವಜನತೆಗೆ ಇದು ಸರಿಯಾದ ಸಮಯ. ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಜನರು ಬಡ್ತಿ ಪಡೆಯುವ ಸಾಧ್ಯತೆಯಿದೆ. ಉದ್ಯಮಿಗಳು ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನ ನಿಲ್ಲಿಸಬಾರದು. ನಿರಂತರ ಪ್ರಯತ್ನ ಮಾಡುವುದರಿಂದ ಮಾತ್ರ ಯಶಸ್ಸು ಸಿಗುತ್ತದೆ. ಯುವಕರು ಕಷ್ಟಪಟ್ಟು ಕೆಲಸ ಮಾಡಿದ ನಂತರವೇ ತೃಪ್ತಿದಾಯಕ ಫಲಿತಾಂಶ ಪಡೆಯುತ್ತಾರೆ. ತಾಯಿಯ ಆರೋಗ್ಯದ ವಿಷಯದಲ್ಲಿ ಎಚ್ಚರವಾಗಿರಿ.

ಇದನ್ನೂ ಓದಿ: Lucky Animal: ದೀಪಾವಳಿಯಂದು ಈ ಪ್ರಾಣಿಗಳನ್ನು ಮನೆಗೆ ತಂದರೆ ಅದೃಷ್ಟ ದೇವತೆ ಖಂಡಿತ ಒಲಿದು ಬರುತ್ತಾಳೆ!

ಧನು ರಾಶಿ: ಈ ರಾಶಿಯ ಜನರಿಗೆ ಇಂದು ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಈ ರಾಶಿಯವರಿಗೆ ಧನಲಾಭವಾಗಲಿದೆ. ಯುವಕರು ತಮ್ಮ ಪ್ರೀತಿಪಾತ್ರರ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು. ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಗಂಭೀರವಾಗಿರುತ್ತಾರೆ. ಕುಟುಂಬದಲ್ಲಿನ ಸದಸ್ಯರೊಂದಿಗೆ ಸಾಮರಸ್ಯ ಹದಗೆಡಬಹುದು. ನೀವು ತೀರ್ಥಯಾತ್ರೆಯನ್ನು ಕೈಗೊಳ್ಳಬಹುದು. ಶೀಘ್ರವೇ ನಿಮಗೆ ಶುಭ ಸುದ್ದಿಗಳು ಸಿಗಲಿವೆ.   

ಮಕರ ರಾಶಿ: ಮಕರ ರಾಶಿಯ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗೆ ಲಾಭ ಸಿಗುವ ಸಾಧ್ಯತೆ ಇದೆ. ಸ್ಥಗಿತಗೊಂಡಿರುವ ಕೆಲಸಗಳು ಇಂದಿನಿಂದ ಆರಂಭವಾಗಬಹುದು. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾರೆ, ವ್ಯಾಪಾರದಲ್ಲಿ ಉತ್ತಮ ಲಾಭ  ಪಡೆಯಲಿದ್ದಾರೆ. ಯುವಕರು ಸೋಲು ಕಂಡು ಎದೆಗುಂದಬೇಡಿ. ಅನೇಕ ಕಷ್ಟಗಳು ನಿಮ್ಮ ಮುಂದಿದ್ದರು ಬೇಸರಪಟ್ಟುಕೊಳ್ಳಬೇಡಿ. ನಿಮ್ಮ ಪ್ರೀತಿಪಾತ್ರರ ಬೆಂಬಲವು ನಿಮ್ಮನ್ನು ಎಲ್ಲಾ ಕಷ್ಟಗಳಿಂದ ಹೊರತರುತ್ತದೆ.  

ಕುಂಭ ರಾಶಿ: ಇಂದು ಈ ರಾಶಿಯವರ ದಿನ ಕಚೇರಿಯಲ್ಲಿ ಸಾಮಾನ್ಯವಾಗಿರುತ್ತದೆ, ವೃತ್ತಿಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಯುವಕರು ಚಿಂತನಶೀಲರಾಗಿ ಮಾತನಾಡಬೇಕು, ತಮ್ಮ ನ್ಯೂನತೆಗಳನ್ನು ಹೋಗಲಾಡಿಸಿ ಒಳ್ಳೆಯದನ್ನು ಮಾಡಲು ಪ್ರಯತ್ನಿಸಬೇಕು. ಗರ್ಭಿಣಿಯರು ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು, ಆರೋಗ್ಯದಲ್ಲಿ ದಿಢೀರ್ ಹದಗೆಡುವ ಸಂಭವವಿದ್ದು, ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸಿ. ಯಾರಾದರೂ ನಿಮಗೆ ಕೆಟ್ಟದ್ದನ್ನು ಮಾಡಿದರೂ ಕೋಪಗೊಳ್ಳಬೇಡಿ.

ಮೀನ ರಾಶಿ: ಅಗತ್ಯವಿದ್ದಾಗ ಯಾರಿಗಾದರೂ ಸಹಾಯ ಮಾಡಲು ನೀವು ಹಿಂಜರಿಯಬಾರದು. ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ಸ್ಪರ್ಧೆಯಲ್ಲಿ ಯಶಸ್ಸು ಸಿಗುವ ಸಂಭವವಿದ್ದು. ಆರೋಗ್ಯ ಸರಿಯಿಲ್ಲದಿದ್ದರೆ ಕೆಲಸದ ಒತ್ತಡ ಬೇಡ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನೀವೂ ಸಹ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News