Daily Horoscope: ಸೋಮವಾರದಂದು ಈ ರಾಶಿಯ ಜನರು ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡಿ

Horoscope March 14, 2022: ಸೋಮವಾರದಂದು ವೃಶ್ಚಿಕ ರಾಶಿಯ ಜನರು ಕೆಲವು ಅಜ್ಞಾತ ಮೂಲದಿಂದ ಹಣವನ್ನು ಪಡೆಯಬಹುದು. ಮಕರ ರಾಶಿಯ ಜನರು ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಮತ್ತೊಂದೆಡೆ, ಮೀನ ರಾಶಿಯ ಯುವಕರು ವೃತ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಪಡೆಯುವರು.

Written by - Zee Kannada News Desk | Last Updated : Mar 14, 2022, 06:15 AM IST
  • ವೃಷಭ ರಾಶಿಯವರಿಗೆ ಒಳ್ಳೆಯ ಮಾಹಿತಿ ಸಿಗಲಿದೆ
  • ಕನ್ಯಾ ರಾಶಿಯವರಿಗೆ ಲಾಭದ ಸಮಯ
  • ಕುಂಭ ರಾಶಿಯವರು ತಮ್ಮ ಆದಾಯವನ್ನು ಹೆಚ್ಚಿಸಲು ಅವಕಾಶಗಳನ್ನು ಪಡೆಯುತ್ತಾರೆ
Daily Horoscope: ಸೋಮವಾರದಂದು ಈ ರಾಶಿಯ ಜನರು ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡಿ title=
Horoscope March 14, 2022

Daily Horoscope (ದಿನಭವಿಷ್ಯ 14-03-2022) :   ಸೋಮವಾರದಂದು ಸಿಂಹ ರಾಶಿಯವರು ಯಾರ ಮಾತನ್ನೂ ಮನಸ್ಸಿಗೆ ತೆಗೆದುಕೊಳ್ಳದಿದ್ದರೆ ಒಳಿತು. ಮತ್ತೊಂದೆಡೆ, ತುಲಾ ರಾಶಿಯ ಜನರು ಕೆಲಸದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಉಳಿದ ರಾಶಿಯವರಿಂದ ಇಂದಿನ ಭವಿಷ್ಯ ಹೇಗಿದೆ ತಿಳಿಯೋಣ.

ಮೇಷ ರಾಶಿ: ಸೋಮವಾರ ನಿಮಗೆ ಪ್ರಮುಖವಾಗಿರುತ್ತದೆ. ಜವಳಿ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹುದು. ಸಹೋದರ ಸಂಬಂಧಿಯೊಂದಿಗೆ ಉತ್ತಮ ಮಾತುಕತೆ ನಡೆಸುತ್ತೀರಿ. ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ಯಾವುದೇ ಜವಾಬ್ದಾರಿಯುತ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. 

ವೃಷಭ ರಾಶಿ: ಈ ಸೋಮವಾರ ನೀವು ಉತ್ತಮ ಮಾಹಿತಿಯನ್ನು ಪಡೆಯಬಹುದು. ಮನೆಯ ಜವಾಬ್ದಾರಿಗಳನ್ನು ಪೂರೈಸುವ ದಿಕ್ಕಿನಲ್ಲಿ ನೀವು ಕೆಲವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ, ವ್ಯಾಪಾರ ಮತ್ತು ಉದ್ಯೋಗವು ಉತ್ತಮವಾಗಿ ನಡೆಯುತ್ತದೆ. ತಂದೆಯ ಕೆಲಸದಲ್ಲಿ ನಿಮ್ಮ ಸಹಕಾರ ಶ್ಲಾಘನೀಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆ ಪಡಬಹುದು.  

ಮಿಥುನ ರಾಶಿ: ಸೋಮವಾರ ನಿಮಗೆ ವಿಶೇಷ ದಿನವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ವ್ಯಕ್ತಪಡಿಸಿ. ಪ್ರಗತಿಯ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಮಹಿಳೆಯರು ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಆಳವಾಗಿ ಯೋಚಿಸಬೇಕು. ಆಸ್ತಿ ಖರೀದಿಗೆ ನಿಮ್ಮ ದಿನ ತುಂಬಾ ಒಳ್ಳೆಯದು. ಇದಲ್ಲದೇ ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. 

ಕರ್ಕಾಟಕ ರಾಶಿ: ಈ ಸೋಮವಾರ, ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆಯನ್ನು ತುಂಬಿಸಲಾಗುತ್ತದೆ. ನಿಮ್ಮ ಕೌಶಲ್ಯ ಮತ್ತು ತಿಳುವಳಿಕೆಯಿಂದ, ನೀವು ಕಾರ್ಯಗಳನ್ನು ಉತ್ತಮವಾಗಿ ಪೂರ್ಣಗೊಳಿಸುತ್ತೀರಿ. ವ್ಯವಹಾರದಲ್ಲಿ ನೀವು ಇದ್ದಕ್ಕಿದ್ದಂತೆ ಒಳ್ಳೆಯ ಸುದ್ದಿ ಪಡೆಯಬಹುದು. ನಿಮ್ಮ ವಿಚಾರವನ್ನು ಅಧಿಕಾರಿಗಳ ಮುಂದೆ ಇಡಲು ಇದು ಸರಿಯಾದ ಸಮಯ.   

ಇದನ್ನೂ ಓದಿ- Tulsi Vastu Tips: ತುಳಸಿ ಗಿಡ ಪದೇ ಪದೇ ಏಕೆ ಒಣಗುತ್ತೆ? ಇಲ್ಲಿದೆ ಕಾರಣ

ಸಿಂಹ ರಾಶಿ: ಸೋಮವಾರದಂದು ಯಾರ ಮಾತನ್ನೂ ನಿಮ್ಮ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಉದ್ಯೋಗಸ್ಥರು ಆರ್ಥಿಕವಾಗಿ ಸಬಲರಾಗಲು ಕಷ್ಟಪಟ್ಟು ದುಡಿಯಬೇಕು. ಇದರೊಂದಿಗೆ, ನೀವು ವ್ಯವಹಾರದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಮಾಡುವ ಪ್ರಯತ್ನಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.  

ಕನ್ಯಾ ರಾಶಿ: ಈ ಸೋಮವಾರ ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಸಕಾರಾತ್ಮಕ ಆಲೋಚನೆಗಳಿಂದ ಸಂತೋಷಪಡುತ್ತಾರೆ. ಉದ್ಯೋಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದವರಿಗೆ ಲಾಭದ ಸಮಯ ಇದಾಗಿದೆ. ಬಾಕಿ ಉಳಿದಿರುವ ಯಾವುದೇ ಆಸ್ತಿ ವ್ಯವಹಾರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಮಕ್ಕಳಿಂದ ನಿಮ್ಮ ಮನಸ್ಸಿಗೆ ತೃಪ್ತಿ ಸಿಗುತ್ತದೆ.

ತುಲಾ ರಾಶಿ: ಸೋಮವಾರ, ನೀವು ಕೆಲಸದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಕುಟುಂಬ ವ್ಯವಹಾರದಲ್ಲಿ ನಿಮ್ಮ ಜೀವನ ಸಂಗಾತಿಯ ಸಲಹೆಗಳನ್ನು ಪಡೆಯುವುದು ಒಳಿತು. ಸರ್ಕಾರದ ನಿಯಮಗಳಿಂದ ವ್ಯಾಪಾರಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಿರಿ. 

ವೃಶ್ಚಿಕ ರಾಶಿ: ಈ ಸೋಮವಾರ ನೀವು ಕೆಲವು ಅಜ್ಞಾತ ಮೂಲದಿಂದ ಹಣವನ್ನು ಪಡೆಯಬಹುದು. ಹೊಸ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ನೀವು ಬಹಳಷ್ಟು ಕಲಿಯುವಿರಿ. ಯುವಕರಿಗೆ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶಗಳಿವೆ. ನೀವು ಪೋಷಕರೊಂದಿಗೆ ಶಾಪಿಂಗ್‌ಗೆ ಹೋಗಬಹುದು.  

ಇದನ್ನೂ ಓದಿ- Weekly Horoscope : ಮುಂದಿನ ವಾರ ಈ ರಾಶಿಯವರಿಗೆ ಆರ್ಥಿಕ ಪ್ರಗತಿ : ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ

ಧನು ರಾಶಿ: ಸೋಮವಾರದಂದು ನಿಮ್ಮನ್ನು ನೀವು ನಂಬಿರಿ. ಹೆಚ್ಚಿನ ಲಾಭ ಗಳಿಸಲು ವ್ಯಾಪಾರದಲ್ಲಿ ಸಹೋದರ ಸಹೋದರಿಯರ ಸಹಕಾರವನ್ನು ಸಹ ಪಡೆಯಬಹುದು. ಸ್ನೇಹಿತರ ಸಹಾಯದಿಂದ ನೀವು ಕಷ್ಟಕರವಾದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ಮಹಿಳೆಯರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಯಶಸ್ಸನ್ನು ಪಡೆಯುವರು.  

ಮಕರ ರಾಶಿ: ಈ ಸೋಮವಾರ, ದೇವರ ದಯೆಯಿಂದ, ನಿಮಗೆ ಅನೇಕ ಕಾರ್ಯಗಳು ಸುಲಭವಾಗಿ ನಡೆಯುತ್ತವೆ. ಜೀವನ ಸಂಗಾತಿಯ ಸಹಾಯದಿಂದ ಆಸ್ತಿಯಲ್ಲಿ ಕೈ ಹಾಕಬಹುದು. ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ನೀವು ಪ್ರಯೋಜನ ಪಡೆಯುತ್ತೀರಿ. ಅದಾಗ್ಯೂ, ನೀವು ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. 

ಕುಂಭ ರಾಶಿ: ಸೋಮವಾರದಂದು ನೀವು ಮಾಡಿದ ಕೆಲಸದ ಬಗ್ಗೆ ನಿಮಗೇ ಮನಃ ತೃಪ್ತಿ ಇರುವುದಿಲ್ಲ. ನಿರ್ದಿಷ್ಟ ವಿಷಯದ ಬಗ್ಗೆ ನಿಮ್ಮ ಆಲೋಚನೆ ಬದಲಾಗಬಹುದು. ಇದರೊಂದಿಗೆ, ಆದಾಯವನ್ನು ಹೆಚ್ಚಿಸಲು ನೀವು ಕೆಲವು ಉತ್ತಮ ಅವಕಾಶಗಳನ್ನು ಸಹ ಪಡೆಯಬಹುದು. ಆನ್‌ಲೈನ್ ವಹಿವಾಟಿನಲ್ಲಿ ಜಾಗರೂಕರಾಗಿರಿ. ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವರು.  

ಮೀನ ರಾಶಿ: ಈ ಸೋಮವಾರ ನಿಮ್ಮ ಹೊಸ ಕೆಲಸದಲ್ಲಿ ನಿಮ್ಮ ಸ್ವಂತ ಶಕ್ತಿ ಮತ್ತು ಧೈರ್ಯದ ಬಲದಿಂದ ನೀವು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಯುವಕರು ವೃತ್ತಿಗೆ ಸಂಬಂಧಿಸಿದ ಹೊಸ ಮಾಹಿತಿಯನ್ನು ಪಡೆಯುತ್ತಾರೆ. ಹಿಂದೆ ನಡೆದ ಘಟನೆಗಳಿಂದ ವಿವಾದಗಳು ಉದ್ಭವಿಸಬಹುದು. 

ಇದನ್ನೂ ಓದಿ- Lakshmana Plant: ದೇವಿ ಲಕ್ಷ್ಮಿಗೆ ಈ ಸಸ್ಯ ತುಂಬಾ ಇಷ್ಟ, ನಿಮ್ಮ ಮನೆಯಲ್ಲಿಯೂ ಇದ್ದರೆ ಹಣದ ಹೊಳೆಯೇ ಹರಿಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News