Hanuman Jayanti 2021: ಹನುಮ ಜಯಂತಿಯ ದಿನ ಸುಂದರ ಕಾಂಡ ಏಕೆ ಪಠಿಸಬೇಕು?

Hanuman Jayanti 2021 - ಈ ಬಾರಿ ಏಪ್ರಿಲ್ 27, 2021ರಂದು (Hanuman Jayanti 2021 Date) ಅಂದರೆ ಮಂಗಳವಾರ ಶ್ರೀ ಆಂಜನೇಯನ ಜನ್ಮೋತ್ಸವ ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಚೈತ್ರ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯಂದು ಅಂಜನಿ ದೇವಿಯ ಉದರದಿಂದ ಬಜರಂಗಬಲಿ ಜನಿಸಿದ (Hanuman Jayanti 2021 Muhurat)ಎನ್ನಲಾಗುತ್ತದೆ.

Written by - Nitin Tabib | Last Updated : Apr 24, 2021, 11:01 PM IST
  • ಈ ಬಾರಿ ಏಪ್ರಿಲ್ 27, 2021 ರಂದು ಹನುಮ ಜಯಂತಿ ಆಚರಿಸಲಾಗುತ್ತಿದೆ.
  • ಈ ದಿನ ಸುಂದರ ಕಾಂಡ ಪಠಿಸಲು ಮರೆಯಬೇಡಿ.
  • ಸುಂದರ ಕಾಂಡ ಪಠನೆಯಿಂದ ಹಲವಾರು ಲಾಭಗಳಿವೆ.
Hanuman Jayanti 2021: ಹನುಮ ಜಯಂತಿಯ ದಿನ ಸುಂದರ ಕಾಂಡ ಏಕೆ ಪಠಿಸಬೇಕು? title=
Hanuman Jayanti 2021 (File Photo)

Hanuman Jayanti 2021 - ಈ ಬಾರಿ ಏಪ್ರಿಲ್ 27, 2021ರಂದು (Hanuman Jayanti 2021 Date) ಅಂದರೆ ಮಂಗಳವಾರ ಶ್ರೀ ಆಂಜನೇಯನ ಜನ್ಮೋತ್ಸವ ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಚೈತ್ರ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯಂದು ಅಂಜನಿ ದೇವಿಯ ಉದರದಿಂದ ಬಜರಂಗಬಲಿ ಜನಿಸಿದ (Hanuman Jayanti 2021 Muhurat)ಎನ್ನಲಾಗುತ್ತದೆ. ಶ್ರೀ ಆಂಜನೇಯ ಕಲಿಯುಗದ ಪ್ರಧಾನ ದೇವರಾಗಿದ್ದಾರೆ ಹಾಗೂ ಅಜರಾಮರರಾಗಿದ್ದಾರೆ. ಆಂಜನೇಯ ಕೃಪೆಯಿಂದ ಎಲ್ಲಾ ರೀತಿಯ ದುಃಖ-ನೋವುಗಳನ್ನು ದೂರವಾಗುತ್ತವೆ ಎನ್ನಲಾಗುತ್ತದೆ. ಹನುಮನ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಹನುಮ ಜಯಂತಿಯ ದಿನ ಸುಂದರ ಕಾಂಡ ಪಠಿಸಬೇಕು. ಇದರಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಹಾಗಾದರೆ ಬನ್ನಿ ಸುಂದರ ಕಾಂಡ ಪಠಿಸುವುದರಿಂದ ಆಗುವ ಲಾಭಗಳನ್ನು (Benefits Of Reading Sundarkand) ತಿಳಿದುಕೊಳ್ಳೋಣ.

ಎಲ್ಲಾ ರೀತಿಯ ದೋಷಗಳಿಂದ ಮುಕ್ತಿ ಸಿಗುತ್ತದೆ (Sundarkand Importance)
ಈ ದಿನ ಸುಂದರ ಕಾಂಡ ಪಠಣಕ್ಕೆ ಹೆಚ್ಚಿನ ಮಹತ್ವವಿರುತ್ತದೆ. ಇದರಿಂದ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿ ಸಿಗುತ್ತದೆ. ಸುಂದರ ಕಾಂಡ ಪಠಿಸುವುದರಿಂದ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ. ಸುಂದರ ಕಾಂಡ ಬರದೆ ಇದ್ದವರು, ಅದನ್ನು ಆಲಿಸಬೇಕು.

ಶ್ರೀರಾಮನ ಆಶೀರ್ವಾದ ಲಭಿಸುತ್ತದೆ
ಸುಂದರಕಾಂಡ ಪಠಿಸುವ ವ್ಯಕ್ತಿಗಳಿಗೆ ಶ್ರೀರಾಮನ ವಿಶೇಷ ಆಶೀರ್ವಾದ ಲಭಿಸುತ್ತದೆ. ಶ್ರೀ ರಾಮನ ಆಶೀರ್ವಾದ ಲಭಿಸಿದವರಿಗೆ ಜೀವನದಲ್ಲಿ ಸಂಕಷ್ಟಗಳು ಎದುರಾಗುವುದಿಲ್ಲ.

ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಸುಂದರ ಕಾಂಡ ಪಠಿಸುವುದರಿಂದ ಆತ್ಮವಿಶ್ವಾಸದಲ್ಲಿ ಹೆಚ್ಚಳವಾಗುತ್ತದೆ. ಹಲವು ಬಾರಿ ಜೀವನದಲ್ಲಿ ಆತ್ಮವಿಶ್ವಾಸದ ಕೊರತೆಯ ಕಾರಣ ಜನರಿಗೆ ಯಶಸ್ಸು ಲಭಿಸುವುದಿಲ್ಲ. ಶಿಕ್ಷಣದ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸುಂದರ ಕಾಂಡ ಪಠಿಸುವುದು ಆವಶ್ಯಕ.

ಇದನ್ನೂ ಓದಿ- ಧನಲಾಭವೋ ದಟ್ಟ ದಾರಿದ್ರ್ಯವೋ.? ಮನೆಯಲ್ಲಿನ ಈ ಐದು ಶಕುನ ಹೇಳುತ್ತೆ ನಿಮ್ಮ ಗ್ರಹಗತಿ

ಭಯ ನಿವಾರಣೆಯಾಗುತ್ತದೆ
ಸುಂದರ ಕಾಂಡ ಓದುವುದರಿಂದ ಭಯ ನಿವಾರಣೆಯಾಗುತ್ತದೆ. ಒಂದು ವೇಳೆ ನಿಮಗೆ ಯಾವುದೇ ರೀತಿಯ ಭಯ ಕಾಡುತ್ತಿದ್ದರೆ, ಸುಂದರ ಕಾಂಡ ಪಠಿಸಿ ಆ ಭಯದಿಂದ ಮುಕ್ತಿ ಪಡೆಯಿರಿ.

ಇದನ್ನೂ ಓದಿ- HOME REMEDIES- ಹೊಟ್ಟೆ ಸಮಸ್ಯೆಯಿಂದ ಹಿಡಿದು ಮನೆ ಕ್ಲೀನ್ ವರೆಗೆ ಉಪಯುಕ್ತ, ಬೆಲೆ ಕೇವಲ 8 ರೂ.

ಕೆಲಸ-ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತಿದ್ದರೆ ಸುಂದರ ಕಾಂಡ ಪಠಿಸಿ
ಒಂದು ವೇಳೆ ನಿಮಗೆ ಕೆಲಸ-ಕಾರ್ಯಗಳಲ್ಲಿ ವಿಘ್ನ ಎದುರಾಗುತ್ತಿದ್ದರೆ, ಸುಂದರ ಕಾಂಡ ಪಠಿಸಿ. ಸುಂದರ ಕಾಂಡ ಪಠಿಸುವುದರಿಂದ ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೆ ಪೂರ್ಣಗೊಳ್ಳುತ್ತವೆ.

ಇದನ್ನೂ ಓದಿ-Saturday Remedies: ಶನಿವಾರ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನು ಖರೀದಿಸಬೇಡಿ, ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದರ ಸತ್ಯತೆಯ ಕುರಿತು ಝೀ ಹಿಂದೂಸ್ತಾನ್ ಪುಷ್ಟೀಕರಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ತಜ್ಞರಿಂದ ಸಲಹೆ ಪಡೆಯಲು ಮರೆಯದಿರಿ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News