ಶುಕ್ರವಾರದಂದು ಈ ರೀತಿ ಮಾಡಿ..! ಆರ್ಥಿಕ ಸಂಕಷ್ಟ, ದುಃಖ ದೂರವಾಗುತ್ತದೆ..

Friday lakshmi pooja : ಹಿಂದೂ ಧರ್ಮದಲ್ಲಿ ಶುಕ್ರವಾರದಂತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಶ್ರೀನಿವಾಸನ ಮಡದಿಯ ಆರಾಧನೆ ಮಾಡುವುದರಿಂದ ಹಣ ಸಂಬಂಧಿ ಸಮಸ್ಯೆಗಳು ಮತ್ತು ಶುಕ್ರ ಸಂಬಂಧಿ ಸಮಸ್ಯೆಗಳನ್ನು ದೂರವಾಗುತ್ತವೆ.. ಹಾಗಿದ್ರೆ ಶುಕ್ರವಾರದಂದು ಯಾವ ಪರಿಹಾರ ಕಾರ್ಯ ಮಾಡಿದ್ರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಇಲ್ಲಿ ನೋಡೋಣ..

Written by - Krishna N K | Last Updated : Jul 20, 2023, 08:20 PM IST
  • ಹಿಂದೂ ಧರ್ಮದಲ್ಲಿ ಶುಕ್ರವಾರದಂತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.
  • ಈ ದಿನದಂದು ಶ್ರೀನಿವಾಸನ ಮಡದಿಯ ಆರಾಧನೆ ಮಾಡುವುದರಿಂದ ಹಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
  • ಶುಕ್ರವಾರದಂದು ಯಾವ ಪರಿಹಾರ ಕಾರ್ಯ ಮಾಡಿದ್ರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಇಲ್ಲಿ ನೋಡೋಣ..
 ಶುಕ್ರವಾರದಂದು ಈ ರೀತಿ ಮಾಡಿ..! ಆರ್ಥಿಕ ಸಂಕಷ್ಟ, ದುಃಖ ದೂರವಾಗುತ್ತದೆ.. title=

Friday lakshmi pooja tips : ಶುಭ ಶುಕ್ರವಾರದಂದು ಮಹಾಲಕ್ಷ್ಮಿದೇವಿಯನ್ನು ಭಕ್ತಿಪೂರ್ವಕವಾಗಿ ಪೂಜಿಸುವುದರಿಂದ ಆರ್ಥಿಕ ಸಂಕಷ್ಟದಿಂದ ದೂರವಾಗಬಹುದು ಎಂದು ಹಿರಿಯರು ಹೇಳುತ್ತಾರೆ. ಈ ದಿನದಂದು ಲಕ್ಷ್ಮಿಯ ಆರಾಧನೆಯು ಮನೆಯಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶ ಸಿಗುತ್ತದೆ. ತಾಯಿ ಲಕ್ಷ್ಮಿಯನ್ನು ಪೂಜಿಸುವುದರ ಜೊತೆಗೆ, ಕೆಲವು ಪರಿಹಾರ ಕ್ರಮಗಳನ್ನು ಮಾಡುವುದರಿಂದ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ.

 ಶುಭ  ಶುಕ್ರವಾರದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಬಿಳಿ ಬಟ್ಟೆ ಧರಿಸಿ  ಉಪವಾಸ ಮಾಡುವ ಸಂಕಲ್ಪ ಮಾಡಿ. ಅದರ ನಂತರ ಶಾಸ್ತ್ರೋಕ್ತವಾಗಿ ಮಾತೆ ಲಕ್ಷ್ಮಿಯನ್ನು ಪೂಜಿಸುವುದು ಮತ್ತು ಕಮಲದ ಹೂವನ್ನು ಅರ್ಪಿಸುವುದರಿಂದ ಮಹಾಲಕ್ಷ್ಮಿ ಒಲಿಯುತ್ತಾಳೆ. 

ಇದನ್ನೂ ಓದಿ: ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಜನಿಸುತ್ತಾರೆ ಈ ರಾಶಿಗಳ ಜನರು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ!

ತಾಯಿ ಭಗವತಿ ಬೇವಿನ ಮರದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶುಕ್ರವಾರದಂದು ಬೇವಿನ ಎಲೆಯಲ್ಲಿ ನೀರನ್ನು ಅರ್ಪಿಸುವುದು ಒಳ್ಳೆಯದು. ಇದರಿಂದ ಗ್ರಹದೋಷವನ್ನು ಹೋಗಲಾಡಿಸುತ್ತದೆ ಎಂದು ನಂಬಲಾಗಿದೆ. 

ಶುಕ್ರವಾರದಂದು ಬಿಳಿ ವಸ್ತುಗಳನ್ನು ದಾನ ಮಾಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣವು ತಾಯಿ ಲಕ್ಷ್ಮಿಗೆ ಪ್ರಿಯವಾಗಿದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಅನ್ನ, ಸಕ್ಕರೆ, ಹಾಲು, ಮೊಸರು ಇತ್ಯಾದಿ ದಾನವನ್ನು ಈ ದಿನ ಮಾಡಿದರ ಒಳ್ಳೆಯದು. 

ಇದನ್ನೂ ಓದಿ: ಪುರುಷರ ಇಂತಹ ಗುಣಗಳಿಗೆ ಬಲು ಬೇಗ ಆಕರ್ಷಿತರಾಗ್ತಾರೆ ಹುಡುಗಿಯರು!

ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯದಿದ್ದರೆ ಶುಕ್ರವಾರ ಕಪ್ಪು ಇರುವೆಗೆ ಸಕ್ಕರೆ ತಿನ್ನುವುದು ಪ್ರಯೋಜನಕಾರಿ. ಅಲ್ಲದೆ, ಖೀರ್ ಮಾಡಿ ಐದು ಶುಕ್ರವಾರಗಳ ಕಾಲ ದೇವಸ್ಥಾನಕ್ಕೆ ದಾನ ಮಾಡುವುದರಿಂದ ಜೀವನದಲ್ಲಿ ಆಪತ್ತು ದೂರವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News