ನವಿಲು ನರ್ತಿಸಿದ ಸ್ಥಳದ ಮಣ್ಣನ್ನು ತೆಗೆದುಕೊಂಡು ಹೀಗೆ ಮಾಡಿದ್ರೆ, ಅದೃಷ್ಟವೇ ಬದಲಾಗುತ್ತದೆ..!

Pooja for Money Problems : ನೀವು ಎಷ್ಟೇ ಕಷ್ಟಪಟ್ಟರೂ ಬಡತನದ ಕೂಪದಿಂದ ಹೊರಬರಲಾಗುತ್ತಿಲ್ಲವೇ? ನೀವು ಹಣ ಸಂಪಾದಿಸುತ್ತೀರಿ ಆದರೆ ಆ ಹಣ ನಿಮ್ಮ ಬಳಿ ಉಳಿಯುತ್ತಿಲ್ಲವೇ? ಹೌದು ಎಂದಾದರೆ, ಈ ಸುದ್ದಿಯನ್ನು ಓದಿ

Written by - Krishna N K | Last Updated : Jan 13, 2024, 05:06 PM IST
  • ಪರಿಶ್ರಮದ ಜೊತೆ ಅದೃಷ್ಟವೂ ಕೈ ಹಿಡಿಯಬೇಕು.
  • ಈ ನಿಟ್ಟಿನಲ್ಲಿ ನಿಮಗೆ ಕೆಲವೊಂದಿಷ್ಟು ಪರಿಹಾರ ಕ್ರಮಗಳನ್ನು ಹೇಳುತ್ತೇವೆ.
  • ನವಿಲು ನರ್ತಿಸುವ ಜಾಗದಿಂದ ಮಣ್ಣನ್ನು ತನ್ನಿ.
ನವಿಲು ನರ್ತಿಸಿದ ಸ್ಥಳದ ಮಣ್ಣನ್ನು ತೆಗೆದುಕೊಂಡು ಹೀಗೆ ಮಾಡಿದ್ರೆ, ಅದೃಷ್ಟವೇ ಬದಲಾಗುತ್ತದೆ..! title=

Astrology Remedies for Money : ಕೆಲವರು ಹಗಲು-ಇರುಳು ಎನ್ನದೇ ಕಷ್ಟ ಪಟ್ಟು ದುಡಿಯುತ್ತಾರೆ. ಆದ್ರೆ, ಅವರಿಗೆ ಬಡತನದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ದುಡಿದ ಹಣ್ಣವನ್ನೂ ಸಹ ಉಳಿಸಿಕೊಳ್ಳಲು ಸಹ ಆಗುವುದಿಲ್ಲ.. ನೀವೂ ಈ ರೀತಿಯ ತೊಂದರೆಯಿಂದ ಬಳಲುತ್ತಿದ್ದೀರಾ..? ಬೇಸರ ಮಾಡಿಕೊಳ್ಳಬೇಡಿ.. ಈ ಕೆಳಗೆ ನೀಡಿರುವ ಪರಿಹಾರ ಮಾಡಿ..

ಹೌದು.. ಪರಿಶ್ರಮದ ಜೊತೆ ಅದೃಷ್ಟವೂ ಕೈ ಹಿಡಿಯಬೇಕು, ಈ ನಿಟ್ಟಿನಲ್ಲಿ ನಿಮಗೆ ಕೆಲವೊಂದಿಷ್ಟು ಪರಿಹಾರ ಕ್ರಮಗಳನ್ನು ಹೇಳುತ್ತೇವೆ.. ಕೇಳಿ.. ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನ ಎಂದು ಪರಿಗಣಿಸಲಾಗುತ್ತದೆ. ತಾಯಿ ಲಕ್ಷ್ಮಿ ಸಂಪತ್ತಿನ ದೇವತೆ. ಪಂಚಾಂಗದ ಪ್ರಕಾರ, ಈ ದಿನದಂದು ಶ್ರೀನಿವಾಸನ ಪತ್ನಿಯನ್ನು ಪ್ರಾಮಾಣಿಕವಾಗಿ ಪೂಜಿಸಿ ಅವಳನ್ನು ಸಂತೃಪ್ತಿ ಪಡಿಸಿದರೆ, ನೀವು ಬೇಡಿದ ವರಗಳನ್ನು ನೀಡುತ್ತಾಳೆ.

ಇದನ್ನೂ ಓದಿ: ಹುಣಸೆ ಇದ್ದರೆ ಸಾಕು… ಕೇವಲ 10 ನಿಮಿಷದಲ್ಲಿ ಬಿಳಿಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು!

ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯನ್ನು ದಾನ ಮಾಡಿ : ನೀವು ಶುಕ್ರವಾರದಂದು ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯಂತಹ ಬಿಳಿ ವಸ್ತುವನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ತಾಯಿಯ ಕೃಪೆ ನಿಮ್ಮ ಮೇಲಿರುತ್ತದೆ. ಶುಕ್ರವಾರದಂದು ಹಸುಗಳಿಗೆ ರೊಟ್ಟಿಯನ್ನು ತಿನ್ನಿಸುವ ಮೂಲಕ ಲಕ್ಷ್ಮೀ ಕೃಪೆಗೆ ಪಾತ್ರರಾಗಿ.

ಲಕ್ಷ್ಮಿಗೆ ಅನ್ನವನ್ನು ಅರ್ಪಿಸಿ : ಶುಕ್ರವಾರದಂದು ಲಕ್ಷ್ಮಿ ದೇವಿಗೆ ಅನ್ನವನ್ನು ಅರ್ಪಿಸಬೇಕು. ಆದರೆ, ಭತ್ತದ ಕಾಳುಗಳು ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ದಿನ ನೀವು ಅಗತ್ಯವಿರುವವರಿಗೆ ಸಹಾಯ ಮಾಡಬಹುದು. ಇದರಿಂದ ಲಕ್ಷ್ಮಿಗೆ ತುಂಬಾ ಸಂತೋಷವಾಗುತ್ತದೆ. ಶೀಘ್ರದಲ್ಲೇ ನಿಮ್ಮ ಹಣದ ತೊಂದ್ರೆ ಪರಿಹಾರವಾಗುತ್ತದೆ. 

ಇದನ್ನೂ ಓದಿ:ಮೆಹಂದಿ ರಂಗು ಬರ್ತಾ ಇಲ್ವಾ ಹಾಗಾದರೆ, ಈ ಟಿಪ್ಸ್‌ ಫಾಲೋ ಮಾಡಿ...

ನವಿಲು ನರ್ತಿಸುವ ಜಾಗದಿಂದ ಮಣ್ಣನ್ನು ತನ್ನಿ : ನೀವು ಶುಕ್ರವಾರ ಬೆಳಿಗ್ಗೆ ನವಿಲು ನರ್ತಿಸುವ ಸ್ಥಳದಿಂದ ಮಣ್ಣನ್ನು ಕೆಂಪು ಬಟ್ಟೆಯಲ್ಲಿ ತಂದು ಮನೆಯಲ್ಲಿ ಪವಿತ್ರ ಸ್ಥಳದಲ್ಲಿ ಇರಿಸಿ ಮತ್ತು ಆ ಮಣ್ಣಿನ್ನು ಪ್ರತಿದಿನ ಪೂಜೆ ಮಾಡಿ.. ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ. ಈ ಮಣ್ಣನ್ನು ಪಡೆದವರ ಹಣೆಬರಹವೇ ಬದಲಾಗುತ್ತದೆ ಎಂದೂ ಹೇಳಲಾಗುತ್ತದೆ. 

ಮನೆಯಲ್ಲಿ ಪೊರಕೆಯನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ : ಮನೆಯಲ್ಲಿ ಇಡುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ನೀವು ಪ್ರತಿದಿನ ಮನೆಯ ಹೊರಗಿನ ಧೂಳು-ಮಣ್ಣು ಮತ್ತು ನಕಾರಾತ್ಮಕತೆಯನ್ನು ಸ್ವಚ್ಛಗೊಳಿಸಿದ ಕಾರಣ ಪೊರಕೆಯನ್ನು ಕೊಳಕು ಸ್ಥಳದಲ್ಲಿ ಇಡಬೇಡಿ. ಯಾರೂ ಕಾಲಿಡದ ಜಾಗದಲ್ಲಿ ಇಡಿ. ಪೊರಕೆ ಹಳೆಯದಾದರೆ ಅದನ್ನು ಹೂಳಬೇಕು.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಗಳು ಸಾಮಾನ್ಯ ಜ್ಞಾನ ಮತ್ತು ನಂಬಿಕೆಗಳನ್ನು ಆಧರಿಸಿವೆ. Zee Kannada news ಇದನ್ನು ಖಚಿತಪಡಿಸುವುದಿಲ್ಲ) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News