Chanakya Niti: ಮಹಿಳೆಯರು ಈ ಕಾರಣಗಳಿಂದ ತಮ್ಮ ಜೀವನದಲ್ಲಿ ಅತಿಯಾದ ನಷ್ಟ ಅನುಭವಿಸುತ್ತಾರೆ

Chanakya Niti For Women: ಸ್ತ್ರೀ ಪುರುಷರ ಗುಣಗಳಿಗೆ ಸಂಬಂಧಿಸಿದಂತೆ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಕೆಲ ವಿಶೇಷ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.  ಚಾಣಕ್ಯರು ಹೇಳುವ ಪ್ರಕಾರ, 3 ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಮಹಿಳೆಯರು, ಅವರು ಜೀವನದಲ್ಲಿ ತುಂಬಾ ಹಾನಿಯನ್ನು ಎದುರಿಸುತ್ತಾರೆ ಎಂದಿದ್ದಾರೆ.  

Written by - Nitin Tabib | Last Updated : Nov 22, 2022, 03:10 PM IST
  • ಮಹಿಳೆಯರ ಕೆಲ ಅಭ್ಯಾಸಗಳು ಅವರಿಗೆ ಹಾನಿಯನ್ನು ತರುತ್ತವೆ ಎಂದು ಹೇಳಲಾಗಿದೆ.
  • ಅವರ ಈ ಅಭ್ಯಾಸಗಳಿಂದಾಗಿ ಅವರು ತಮ್ಮ ಜೀವನದುದ್ದಕ್ಕೂ ಸಾಕಷ್ಟು ಬಳಲುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.
  • ಪ್ರತಿಯೊಬ್ಬ ಮಹಿಳೆ ತಪ್ಪಿಸಬೇಕಾದ ಆ ಅಭ್ಯಾಸಗಳು ಅಥವಾ ತಪ್ಪುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Chanakya Niti: ಮಹಿಳೆಯರು ಈ ಕಾರಣಗಳಿಂದ ತಮ್ಮ ಜೀವನದಲ್ಲಿ ಅತಿಯಾದ ನಷ್ಟ ಅನುಭವಿಸುತ್ತಾರೆ title=
Chanakya Niti For Women

Chanakya Niti in Kannada: ಆಚಾರ್ಯ ಚಾಣಕ್ಯ ಓರ್ವ ವ್ಯಕ್ತಿ ತನ್ನ ಜೀವನದಲ್ಲಿ ಸಂತೋಷ ಮತ್ತು ಯಶಸ್ವಿ ಜೀವನ ನಡೆಸಲು ಹಲವು ಸಲಹೆಗಳನ್ನು ನೀಡಿದ್ದಾರೆ. ಮಹಿಳೆಯರು ಮತ್ತು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಮತ್ತು ಅವರು ಯಾವ ಅಭ್ಯಾಸಗಳಿಂದ ದೂರವಿರಬೇಕು ಎಂಬುದನ್ನು ಅವರು ಹೇಳಿದ್ದಾರೆ. ಮಹಿಳೆಯರ ಕೆಲ ಅಭ್ಯಾಸಗಳು ಅವರಿಗೆ ಹಾನಿಯನ್ನು ತರುತ್ತವೆ ಎಂದು ಹೇಳಲಾಗಿದೆ. ಅವರ ಈ ಅಭ್ಯಾಸಗಳಿಂದಾಗಿ ಅವರು ತಮ್ಮ ಜೀವನದುದ್ದಕ್ಕೂ ಸಾಕಷ್ಟು ಬಳಲುತ್ತಾರೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ಮಹಿಳೆ ತಪ್ಪಿಸಬೇಕಾದ ಆ ಅಭ್ಯಾಸಗಳು ಅಥವಾ ತಪ್ಪುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಹಿಳೆಯರು ಈ ತಪ್ಪುಗಳನ್ನು ಎಂದಿಗೂ ಮಾಡಬಾರದು
ರೋಗಗಳನ್ನು ನಿರ್ಲಕ್ಷಿಸುವುದು:
ಮಹಿಳೆಯರು ತಮ್ಮ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳನ್ನು ಮರೆಮಾಚುವುದು ಸಾಮಾನ್ಯ ಅಭ್ಯಾಸವಾಗಿದೆ. ಅವರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ ಮತ್ತು ನಂತರ ರೋಗವು ಮುಂದುವರೆದಾಗ ಅವರು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಾರೆ. ಮನೆಯ ಚುಕ್ಕಾಣಿ ಎಂದು ಕರೆಯಲ್ಪಡುವ ಮಹಿಳೆಯ ಅನಾರೋಗ್ಯವು ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ಈಡು ಮಾಡುತ್ತದೆ. ಹೀಗಾಗಿ ಮಹಿಳೆಯರು ತಮ್ಮ ಚಿಕಿತ್ಸೆಯಲ್ಲಿ ಎಂದಿಗೂ ವಿಳಂಬ ಮಾಡಬಾರದು.

ಸುಳ್ಳು: ಕೆಲವೊಮ್ಮೆ ಸುಳ್ಳು ಸಹ ಪ್ರಯೋಜನಗಳನ್ನು ನೀಡುತ್ತದೆ, ಆದರೆ ಮಹಿಳೆ ಎಲ್ಲದರಲ್ಲೂ ಸುಳ್ಳು ಹೇಳುವುದು ಆಕೆಯ ಪಾಲಿಗೆ ಮಾತ್ರವಲ್ಲದೆ ಇಡೀ ಕುಟುಂಬಕ್ಕೆ ತೊಂದರೆ ತಂದೊಡ್ಡುತ್ತದೆ. ಇಂತಹ ಮಹಿಳೆ ತನ್ನ ಗೌರವವನ್ನು ಕಳೆದುಕೊಳ್ಳುತ್ತಾಳೆ ಮತ್ತು ಕುಟುಂಬವು ಮಾನನಷ್ಟವನ್ನು ಅನುಭವಿಸುತ್ತದೆ. ಹೀಗಾಗಿ ಮಹಿಳೆಯರು ಯಾವಾಗಲೂ ಉತ್ತಮ ವ್ಯವಹಾರ ಮತ್ತು ನಡವಳಿಕೆಯನ್ನು ಹೊಂದಿರಬೇಕು.

ಇದನ್ನೂ ಓದಿ-Good Luck Signs: ಮನೆಯ ಬಾಲ್ಕನಿಯಲ್ಲಿ ಈ ಪಕ್ಷಿ ಕಾಣಿಸಿಕೊಂಡರೆ ಸುವರ್ಣ ದಿನಗಳು ಆರಂಭ ಎಂದೇ ಅರ್ಥ

ಒಪ್ಪಿಗೆಯಿಲ್ಲದೆ ಪ್ರತಿ ನಿರ್ಧಾರವನ್ನು ಒಪ್ಪಿಕೊಳ್ಳುವುದು: ಕುಟುಂಬದ ಒಳಿತಿಗಾಗಿ ಅನೇಕ ಬಾರಿ ಮಹಿಳೆಯರು ತಮ್ಮ ಒಪ್ಪಿಗೆಯಿಲ್ಲದೆ ಪ್ರತಿ ನಿರ್ಧಾರವನ್ನು ಸ್ವೀಕರಿಸುತ್ತಾರೆ. ಪ್ರತಿಯೊಂದು ವಿಷಯದಲ್ಲೂ, ಮಹಿಳೆಯರು ತಮ್ಮ ಮನಸ್ಸನ್ನು ಹೇಳುವುದನ್ನು ಕೇಳುವುದಿಲ್ಲ, ಹಾಗೆ ಮಾಡುವುದರಿಂದ ಅವರು ಬಹಳಷ್ಟು ತೊಂದರೆಗೆ ಸಿಲುಕುತ್ತಾರೆ. ಮಹಿಳೆಯರು ತಮ್ಮ ಆಶಯವನ್ನು ವ್ಯಕ್ತಪಡಿಸಬೇಕು ಮತ್ತು ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಸ್ವಾಭಿಮಾನವಿಲ್ಲದೆ ಬದುಕುವುದು ಪ್ರಾಣಿಯಂತೆ ಬದುಕಿದಂತಾಗುತ್ತದೆ.

ಇದನ್ನೂ ಓದಿ-ತಮ್ಮ ವಿಶೇಷ ಪ್ರತಿಭೆ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುತ್ತಾರೆ ಈ ರಾಶಿಯವರು .!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News