ಕರಾವಳಿ ಜಿಲ್ಲೆಗಳಲ್ಲಿ ಅಮಿತ್ ಶಾ ಏನ್ ಮಾಡ್ತಾ ಇದಾರೆ? ಇಲ್ಲಿದೆ ಫೋಟೋಸ್

ಇತ್ತೀಚೆಗಷ್ಟೇ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಮಂಗಳವಾರ ಭೇಟಿ ನೀಡಿದ್ದ ಶಾ, ಹೊನ್ನಾವರದಲ್ಲಿಂದು ಪರೇಶ್ ಮೇಸ್ತ ಮನೆಗೆ ತೆರಳುವ ಸಾಧ್ಯತೆ ಇದೆ.

Last Updated : Feb 21, 2018, 03:40 PM IST
ಕರಾವಳಿ ಜಿಲ್ಲೆಗಳಲ್ಲಿ ಅಮಿತ್ ಶಾ ಏನ್ ಮಾಡ್ತಾ ಇದಾರೆ? ಇಲ್ಲಿದೆ ಫೋಟೋಸ್ title=
Pic: Twitter@AmitShah

ಉಡುಪಿ: ರಾಜ್ಯ ಪ್ರವಾಸದ ಅಂಗವಾಗಿ ಮಂಗಳವಾರ(ಫೆ.20) ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಸೇವೆ ಸಲ್ಲಿಸಿದ್ದ ಅಮಿತ್ ಶಾ, ಇಂದು(ಫೆ.21) ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ತೆರಳಿ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದರು. 

ಇದೇ ಸಮಯದಲ್ಲಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮಿಜಿ ಅಮಿತ್ ಶಾ ಅವರನ್ನು ಗೌರವಿಸಿದರು. 

ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮಿಜಿ ಆಶೀರ್ವಾದವನ್ನೂ ಅಮಿತ್ ಶಾ ಪಡೆದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶಾಗೆ ಸಾಥ್ ನೀಡಿದರು.

ಬಳಿಕ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಪ್ರಮುಖರೊಂದಿಗೆ ಅಮಿತ್ ಶಾ ಸಂವಾದ ನಡೆಸಿದರು.

ಇತ್ತೀಚೆಗಷ್ಟೇ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದ ಶಾ, ಹೊನ್ನಾವರದಲ್ಲಿಂದು ಪರೇಶ್ ಮೇಸ್ತ ಮನೆಗೆ ತೆರಳುವ ಸಾಧ್ಯತೆ ಇದೆ.

 

Trending News