ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆ

Actor Darshan : ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Jun 12, 2024, 03:34 PM IST
  • ಕೋಟೆ ನಾಡು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆ
  • ಪ್ರತಿಭಟನಾಕಾರರಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
  • ನಟ ದರ್ಶನ್ ಮಾನವೀಯತೆ ಇಲ್ಲದವರು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮೃತ ರೇಣುಕಾ ಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ
ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆ title=

Renukaswami Murder Case : ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವಿತ್ರ ಗೌಡ ಹಾಗೂ ನಟ ದರ್ಶನ್ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಮೃತ ರೇಣುಕಾ ಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಪ್ರತಿಕ್ರಿಯೆ ನೀಡಿತು ನಟ ದರ್ಶನ್ ವಿರುದ್ಧ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮೃತ ರೇಣುಕಾ ಸ್ವಾಮಿಯ ಅಂತ್ಯಕ್ರಿಯೆ ವೇಳೆ ತಂದೆ ಕಾಶಿನಾಥ್ ಶಿವನಗೌಡ ವರದಿಗಾರರೊಂದಿಗೆ ಮಾತನಾಡಿ ಮಾನವೀಯತೆ ಇಲ್ಲದ ಇವರೆಲ್ಲ ದೊಡ್ಡ ಸ್ಟಾರ್ ಗಳ? ದೊಡ್ಡ ದೊಡ್ಡ ಮನುಷ್ಯರ ತರ ಕಾಣಿಸಿಕೊಳ್ಳುವ ಇವರು ದೊಡ್ಡ ಸ್ಟಾರ್ ಗಳು ಹೇಗೆ ಆಗ್ತಾರೆ ಎಂದು ಕಣ್ಣೀರಿಡುತ್ತಾ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ  

ಇದನ್ನು ಓದಿ : 16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...! 

ಈಗಾಗಲೇ ನನ್ನ ಮಗ ಮೃತಪಟ್ಟಿದ್ದಾನೆ ಎಷ್ಟೇ ಮಾತನಾಡಿದರು ಹೋದ ಮಗ ಬರ್ತಾನ, ಯಾರಾದ್ರೂ ಅವನ ಜೀವ ಕೊಡ್ತಾರೆ ನನ್ನ ಮಗನನ್ನು ಶೆಡ್ ನಲ್ಲಿ ಹಾಕಿ ಹಿಂಸೆ ಕೊಟ್ಟು ಅವನ ದೇಹದ ವಿವಿಧ ಭಾಗಗಳಿಗೆ ಹೊಡೆದು ಸಾಯಿಸಿದ್ದಾರೆ, ಎದೆ, ಮರ್ಮಾಂಗ, ಮುಖ, ಕಾಲುಗಳಿಗೆ ಹೊಡೆದು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ

ಇಷ್ಟೇ ಅಲ್ಲದೆ ನಟ ದರ್ಶನ್ ವಿರುದ್ಧ ಲಿಂಗಾಯತ ಸಮುದಾಯ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಕಾರ್ಯ ಕರೆ ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಡಿಸಿ ಕಚೇರಿಗೆ ತೆರಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ

ರೇಣುಕಾ ಸ್ವಾಮಿ ಅವರನ್ನ ಕೊಲೆ ಮಾಡುವ ಮೂಲಕ ತಮ್ಮ ಕ್ರೂರಿತನವನ್ನು ತೋರ್ಪಡಿಸಿರುವ ನಟ ದರ್ಶನವರನ್ನು ನಟ ದರ್ಶನವರನ್ನು ಮತ್ತು ಅವರ ತಂಡಕ್ಕೆ ಕಠಿಣ ಶಿಕ್ಷೆ ಕೊಡಬೇಕು ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News