ಬಿಎಸ್‌ವೈ ಮುಂದಿನ ಸಿಎಂ ಆಗುತ್ತಿರುವುದು ಖುಷಿಯ ವಿಚಾರ: ಸಂಸದೆ ಸುಮಲತಾ

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆಗಳು ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

Last Updated : Jul 24, 2019, 06:03 PM IST
ಬಿಎಸ್‌ವೈ ಮುಂದಿನ ಸಿಎಂ ಆಗುತ್ತಿರುವುದು ಖುಷಿಯ ವಿಚಾರ: ಸಂಸದೆ ಸುಮಲತಾ title=

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತಿರುವುದು ಖುಷಿ ತಂದಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಹೇಳಿದ್ದಾರೆ. 

ಈ ಬಗ್ಗೆ ಫೇಸ್ಬುಕ್ ನಲ್ಲಿ ಯಡಿಯೂರಪ್ಪ ಅವರ ಫೋಟೋ ಹಾಕಿ ಪೋಸ್ಟ್ ಮಾಡಿರುವ ಸುಮಲತಾ, "ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆಗಳು. ನನ್ನ ಗೆಲುವಿಗೆ ಬೆನ್ನಿಗೆ ನಿಂತ ನಾಯಕ ಇಂದು ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಿದ್ದಾರೆ ಎಂಬುದು ಖುಷಿಯ ವಿಚಾರ" ಎಂದಿದ್ದಾರೆ.

ಮಂಗಳವಾರ ವಿಶ್ವಾಸ ಮತದಲ್ಲಿ 105 ಮತಗಳನ್ನು ಪಡೆಯುವ ಮೂಲಕ ದೋಸ್ತಿ ಸರ್ಕಾರವನ್ನು ಸೋಲಿಸಿದ ಬಿಜೆಪಿ, ರಾಜ್ಯದಲ್ಲಿ ಮುಂದಿನ ಸರ್ಕಾರ ರಚನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿ.ಎಸ್.ಯಡಿಯೂರಪ್ಪ ಹಲವು ನಾಯಕರು ಶುಭ ಕೋರುತ್ತಿದ್ದಾರೆ.

Trending News