ಗೃಹಜ್ಯೋತಿ ಯೋಜನೆಗೆ ಹೆಚ್ಚು ಹಣ ವಸೂಲಿ ಮಾಡಿದರೆ ಕಠಿಣ ಕ್ರಮ

ಗೃಹಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು  ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಒಂದು ವಾರದಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಜನರು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಸ್ಕಾಂ ಮತ್ತು ಸ್ಥಳೀಯ ಎಸ್ಕಾಂ ಕಛೇರಿಗಳಿಗೆ ಬಂದು ಅರ್ಜಿ ಸಲ್ಲಿಸುತ್ತಿದ್ದಾರೆ. 

Written by - Bhavya Sunil Bangera | Edited by - Yashaswini V | Last Updated : Jun 28, 2023, 04:12 PM IST
  • ಗೃಹಜ್ಯೋತಿ ಯೋಜನೆಗೆ ಬೆಸ್ಕಾಂ ಹಾಗೂ ಸ್ಥಳೀಯ ಎಸ್ಕಾಂ ಕಛೇರಿಯಲ್ಲಿ ಯಾವುದೇ ರೀತಿಯ ಮೊತ್ತವನ್ನು ನಿಗದಿ ಮಾಡಿಲ್ಲ
  • ಬೆಸ್ಕಾಂ ಹಾಗೂ ಎಸ್ಕಾಂ ಕಛೇರಿಯಲ್ಲಿ ಅರ್ಜಿ ಸಲ್ಲಿಸುವವರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
  • ಆದರೆ ಬೆಂಗಳೂರು ಒನ್ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಹಾಗೂ ನಾಡಕಛೇರಿಯಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಲಿಸಿದರು 20 ರೂಪಾಯಿ ಮೊತ್ತವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ.
ಗೃಹಜ್ಯೋತಿ ಯೋಜನೆಗೆ ಹೆಚ್ಚು ಹಣ ವಸೂಲಿ ಮಾಡಿದರೆ ಕಠಿಣ ಕ್ರಮ  title=

Griha Jyoti Yojana: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಅರ್ಜಿ ಆರಂಭ ಆಗಿ ಇದೀಗ ಹತ್ತು ದಿನಗಳು ಕಳೆದಿವೆ. ಅರ್ಜಿ ಸಲ್ಲಿಕ್ಕೆ ಗೆ ಬೆಸ್ಕಾಂ ಕಛೇರಿಯಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿರುವ ವಿಷಯ ತಿಳಿದು ಬೆಸ್ಕಾಂ ಇದೀಗ  ಹಣ ಪಡೆಯುವವರಿಗೆ ಖಡಕ್ ಎಚ್ಚರಿಕೆ ನೀಡಿದೆ. 

ಗೃಹಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು  ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಒಂದು ವಾರದಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಜನರು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಸ್ಕಾಂ ಮತ್ತು ಸ್ಥಳೀಯ ಎಸ್ಕಾಂ ಕಛೇರಿಗಳಿಗೆ ಬಂದು ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಅರ್ಜಿ ಸಲ್ಲಿಕ್ಕೆಗೆ ರಾಜ್ಯ ಸರ್ಕಾರ ಒಂದು ಪ್ರಮಾಣದಲ್ಲಿ ಹಣವನ್ನು ನಿಗದಿ ಮಾಡಿದೆ. ಆದರೆ ಕೆಲವು ಎಸ್ಕಾಂ ಹಾಗೂ ಬೆಸ್ಕಾಂ ಕಛೇರಿಯಲ್ಲಿ ನಿಗದಿರ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ.  ಈ ದೂರುಗಳು ಕೇಳಿ ಬಂದಿದ್ದೆ ತಡ ಬೆಸ್ಕಾಂ ಹೆಚ್ಚು ಹಣ ವಸೂಲಿ ಮಾಡುವವರಿಗೆ ಶಿಕ್ಷ ತಪ್ಪಿದಲ್ಲಾ ಎಂದು ಬೆಸ್ಕಾಂ ಹೇಳಿದೆ.

ಇದನ್ನೂ ಓದಿ- ಜು. 1ರಿಂದ ಪಡಿತರರಿಗೆ ಅಕ್ಕಿ ಬದಲು ಹಣ : ತಿಂಗಳಿಗೆ ₹170 ನೀಡಲು ಸರ್ಕಾರ ತೀರ್ಮಾನ

ಇನ್ನು ಈ ಬಗ್ಗೆ ಮಾತನಾಡಿದ ಬೆಸ್ಕಾಂ ಜೆನರಲ್ ಮ್ಯಾನೇಜರ್ (ಗ್ರಾಹಕ ಸಂಬಂಧಿ),  ಗೃಹಜ್ಯೋತಿ ಯೋಜನೆಗೆ ಬೆಸ್ಕಾಂ ಹಾಗೂ ಸ್ಥಳೀಯ ಎಸ್ಕಾಂ ಕಛೇರಿಯಲ್ಲಿ ಯಾವುದೇ ರೀತಿಯ ಮೊತ್ತವನ್ನು ನಿಗದಿ ಮಾಡಿಲ್ಲ ಹಾಗೂ ಬೆಸ್ಕಾಂ ಹಾಗೂ ಎಸ್ಕಾಂ ಕಛೇರಿಯಲ್ಲಿ ಅರ್ಜಿ ಸಲ್ಲಿಸುವವರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಬೆಂಗಳೂರು ಒನ್ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಹಾಗೂ ನಾಡಕಛೇರಿಯಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಲಿಸಿದರು 20 ರೂಪಾಯಿ ಮೊತ್ತವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಈ 20 ರೂಪಾಯಿ ಸೇವಾ ಶುಲ್ಕ  ಹೊರತು  ಪಡಿಸಿ ಯಾವುದೇ ರೀತಿಯ ಹೆಚ್ಚಿನ ಹಣವನ್ನು ಪಡೆಯುವ ಹಾಗಿಲ್ಲಾ  ಎಂದು ತಿಳಿಸಿದರು. 

ಇನ್ನು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಯಾರು ಕೊಡಬಾರದು ಎಂದು ಬೆಸ್ಕಾಂ ಹೇಳಿದೆ. ಹಾಗೇನಾದರೂ ಹೆಚ್ಚಿನ ಶುಲ್ಕ ಕೇಳಿದರೆ ಕೇಳಿದವರ ವಿರುದ್ಧ ಕಠಿಣ ಕ್ರಮವನ್ನು ಬೆಸ್ಕಾಂ ತೆಗೆದುಕೊಳ್ಳುವುದಾಗಿ, ಹೆಚ್ಚಿನ ಮೊತ್ತ ಕೇಳಿದಾಗ ಬೆಸ್ಕಾಂ ನ ಸಹಾಯವಾಣಿ ಆದ 1912 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದೆ. 

ಇದನ್ನೂ ಓದಿ- ಅಧಿಕಾರಿಗಳ ಪೋಸ್ಟಿಂಗ್’ನಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಸಚಿವ ರಾಮಲಿಂಗಾರೆಡ್ಡಿ

ಅಷ್ಟೇ ಅಲ್ಲದೆ, ಮಾಹಿತಿ ಆಧರಿಸಿ  ಜನರಿಂದ ಈ ರೀತಿ ಹಣ ವಸೂಲಿ ಮಾಡುವವರಿಗೆ ಬೆಸ್ಕಾಂ  ಕಠಿಣ ಶಿಕ್ಷೆಯನ್ನು ಕೂಡ ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ.  
ಒಟ್ಟಾರೆಯಾಗಿ  ಬೆಸ್ಕಾಂ ಹಾಗೂ ಎಸ್ಕಾಂ ಕಛೇರಿಯಲ್ಲಿ ಯಾವುದೇ ರೀತಿಯ ಹಣವನ್ನು ವಸೂಲಿ ಮಾಡಬಾರದು. ಹಾಗೇನಾದರು ಹಣ ವಸೂಲಿ ಮಾಡಿದರೆ ಹಂತವರ ವಿರುದ್ದ ಕಠಿಣ ಕ್ರಮ ನಿಶ್ಚಿತ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News