ಸಂಜೆಯಾದ್ರೆ ತಂಪೆರೆಯುವ ಮಳೆರಾಯ, ಇನ್ನೆಷ್ಟು ದಿನ ಮಳೆ ಗೊತ್ತಾ!

 ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಚುರುಕುಗೊಂಡಿದ್ದು, ಸಿಲಿನಾಕ್ ಸಿಟಿಯಲ್ಲೂ ನಿನ್ನೆಯಿಂದ ಗುಡುಗು ಸಹಿತ ಮಳೆಯಾಗ್ತಿದೆ.ಸಂಜೆ ವೇಳೆಗೆ ಮಳೆ ಸುರಿಯುತ್ತಿರೋದ್ರಿಂದ ಕಚೇರಿಯಿಂದ ಮನೆಗೆ ತೆರಳ್ತಿರೋ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ.ಇನ್ನೊಂದಷ್ಟು ಜನರಿಗೆ ಬಿಸಿಲಿನ ಬೇಗೆಯಿಂದ ತಂಪಾಗಿದೆ.

Written by - Sowmyashree Marnad | Edited by - Zee Kannada News Desk | Last Updated : Apr 14, 2022, 09:10 PM IST
  • ಇನ್ನೆಷ್ಟು ದಿನ ಈ ಮಳೆ ಅಂತ ನೋಡೋದಾದ್ರೆ, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ.
  • ಇನ್ನು ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದ್ದು, ಮುಂದಿನ ಐದು ದಿನ ಮಳೆಯಾಗಲಿದೆ.
ಸಂಜೆಯಾದ್ರೆ ತಂಪೆರೆಯುವ ಮಳೆರಾಯ, ಇನ್ನೆಷ್ಟು ದಿನ ಮಳೆ ಗೊತ್ತಾ!  title=
file photo

ಬೆಂಗಳೂರು: ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಚುರುಕುಗೊಂಡಿದ್ದು, ಸಿಲಿನಾಕ್ ಸಿಟಿಯಲ್ಲೂ ನಿನ್ನೆಯಿಂದ ಗುಡುಗು ಸಹಿತ ಮಳೆಯಾಗ್ತಿದೆ.ಸಂಜೆ ವೇಳೆಗೆ ಮಳೆ ಸುರಿಯುತ್ತಿರೋದ್ರಿಂದ ಕಚೇರಿಯಿಂದ ಮನೆಗೆ ತೆರಳ್ತಿರೋ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ.ಇನ್ನೊಂದಷ್ಟು ಜನರಿಗೆ ಬಿಸಿಲಿನ ಬೇಗೆಯಿಂದ ತಂಪಾಗಿದೆ.

ಇದನ್ನೂ ಓದಿ: Kantara Teaser: ಕಾಂತಾರ ಟೀಸರ್‌ ರಿಲೀಸ್‌! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?

ಇನ್ನೆಷ್ಟು ದಿನ ಈ ಮಳೆ ಅಂತ ನೋಡೋದಾದ್ರೆ, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಇನ್ನು ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದ್ದು, ಮುಂದಿನ ಐದು ದಿನ ಮಳೆಯಾಗಲಿದೆ.

ಕರಾವಳಿಯಲ್ಲಿ ನಾಳೆಯೂ ಗುಡುಗು-ಸಿಡಿಲಿನೊಂದಿಗೆ ಮಳೆಯಾಗಲಿದ್ದು, ಎಪ್ರಿಲ್ 16, 17, 18 ರಂದು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮಳೆಯಾಗಲಿದೆ.ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಸಹಿತ ಕೆಲ ಜಿಲ್ಲೆಗಳಲ್ಲಿ 5 ದಿನ ಮಳೆಯಾಗಲಿದೆ.ದಕ್ಷಿಣ ಒಳನಾಡಿನಲ್ಲಿ ಇಂದು, ನಾಳೆ ಎಲ್ಲಾ ಜಿಲ್ಲೆಗಳಿಗೆ ಗುಡುಗು ಸಿಡಿಲಿನೊಂದಿಗೆ ಮಳೆಯಾಗಲಿದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News