ಪಾರ್ಕ್ ಪ್ರೇಮಿಗಳಿಗೆ ಪೊಲೀಸರ ನೀತಿಪಾಠ.. ಪ್ರಣಯ ಪಕ್ಷಿಗಳಿಗೆ ಶಾಕ್ ಕೊಟ್ಟ ಕಲ್ಪತರು ಪಡೆ..!

Police on park lovers : ಮಕ್ಕಳು ತಮ್ಮ ಹಾಗೆ ಆಗೋದು ಬೇಡ, ನಾಲ್ಕಕ್ಷರ ಕಲಿತು ಒಳ್ಳೆ ಕೆಲಸ ಮಾಡಲಿ ಅಂತಾ ಪೋಷಕರು ಕಷ್ಟಪಟ್ಟು ಅವರನ್ನ ಕಾಲೇಜಿಗೆ ಕಳಿಸ್ತಾರೆ. ತಮಗೆ ಅದೇಷ್ಟೇ ಕಷ್ಟವಿದ್ದರೂ ಹೊಟ್ಟೆಬಟ್ಟೆ ಕಟ್ಟಿ ತಮ್ಮ ಮಕ್ಕಳು ಚೆನ್ನಾಗಿರಲಿ ಅಂತಾ ಅವರು ಕೇಳಿದ್ದನ್ನೆಲ್ಲಾ ಕೊಡಿಸ್ತಾರೆ.   

Written by - Savita M B | Last Updated : Aug 15, 2023, 10:13 PM IST
  • ಕಾಲೇಜಿಗೆ ಅಂತಾ ಬರುವ ಕೆಲವು ವಿದ್ಯಾರ್ಥಿಗಳು ಮಾಡೋದೇ ಬೇರೆ.
  • ಇಂತಹ ಪ್ರಣಯ ಪಕ್ಷಿಗಳಿಗೆ ಕಲ್ಪತರು ಪಡೆ ಸಖತ್ ಆಗಿಯೇ ಶಾಕ್ ನೀಡಿದೆ.
  • ತುಮಕೂರು ನಗರದ ಪಾರ್ಕುಗಳು, ಪ್ರವಾಸಿ ತಾಣಗಳು ಬರೀ ಕಾಲೇಜು ಪ್ರೇಮಿಗಳಿಂದಲೇ ತುಂಬಿ ತುಳುಕುತ್ತಿವೆ.
ಪಾರ್ಕ್ ಪ್ರೇಮಿಗಳಿಗೆ ಪೊಲೀಸರ ನೀತಿಪಾಠ.. ಪ್ರಣಯ ಪಕ್ಷಿಗಳಿಗೆ ಶಾಕ್ ಕೊಟ್ಟ ಕಲ್ಪತರು ಪಡೆ..! title=

Police Lessons for park lovers : ಆದ್ರೆ ಕಾಲೇಜಿಗೆ ಅಂತಾ ಬರುವ ಕೆಲವು ವಿದ್ಯಾರ್ಥಿಗಳು ಮಾಡೋದೇ ಬೇರೆ. ಕಾಲೇಜಿಗೆ ಚಕ್ಕರ್ ಹಾಕಿ ಪಾರ್ಕ್ಗಳಿಗೆ ಹಾಜರ್ ಆಗಿಬಿಡ್ತಾರೆ. ಪ್ರಣಯ ಪಕ್ಷಿಗಳಂತೆ ಲವ್ವಿ ಡವ್ವಿ ಮಾಡುತ್ತಾ ಕಾಲ ಕಳೆಯುತ್ತಾರೆ. ಇಂತಹ ಪ್ರಣಯ ಪಕ್ಷಿಗಳಿಗೆ ಕಲ್ಪತರು ಪಡೆ ಸಖತ್ ಆಗಿಯೇ ಶಾಕ್ ನೀಡಿದೆ.

ತುಮಕೂರು ನಗರದ ಪಾರ್ಕುಗಳು, ಪ್ರವಾಸಿ ತಾಣಗಳು ಬರೀ ಕಾಲೇಜು ಪ್ರೇಮಿಗಳಿಂದಲೇ ತುಂಬಿ ತುಳುಕುತ್ತಿವೆ. ಅಮಾನಿಕೆರೆ ಪಾರ್ಕ್, ಗಾಂಧಿ ನಗರ ಪಾರ್ಕ್, ಕುವೆಂಪು ನಗರ ಪಾರ್ಕ್, ನಾಮದ ಚಿಲುಮೆ ಹೀಗೆ ಎಲ್ಲಾಕಡೆ ಕಾಲೇಜು ಪ್ರಣಯ ಪಕ್ಷಿಗಳದ್ದೇ ಅಬ್ಬರ. ಪ್ರತಿ ಮರದ ಸಂದಿ, ಗಿಡಗಂಟಿಗಳ ಪೊದೆಯಲ್ಲಿ ಹದಿಹರೆಯದವರ ಲವ್ವಿಡವ್ವಿಗಳೇ ಗೋಚರವಾಗುತ್ತವೆ. 

ವಿಶೇಷವಾಗಿ ಮಧ್ಯಾಹ್ನದ ವೇಳೆ ಕಾಲೇಜಿಗೆ ಚಕ್ಕರ್ ಹಾಕಿ ಈ ಪ್ರಣಯ ಪಕ್ಷಿಗಳು ಪಾರ್ಕಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ.  ಇದು ಸಭ್ಯ ಪ್ರವಾಸಿಗರಲ್ಲಿ, ವಾಯು ವಿಹಾರಿಗಳ ಇರಿಸು ಮುರಿಸಿಗೆ ಕಾರಣವಾಗುತ್ತಿದೆ...

ಇದನ್ನೂ ಓದಿ-ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಓದೋ ವಯಸ್ಸಿಗೆ ಪ್ರೀತಿ ಪ್ರೇಮ ಎಂದು ಅಡ್ಡ ದಾರಿ ಹಿಡಿದು, ಲಜ್ಜೆ ಬಿಟ್ಟು ಪಾರ್ಕ್ನಲ್ಲಿ ಕೂರುವ ವಿದ್ಯಾರ್ಥಿಗಳ ಬಗ್ಗೆ ಪೊಲೀಸ್ ಇಲಾಖೆಗೆ ಪ್ರತಿನಿತ್ಯ ದೂರು ಹೋಗ್ತಿತ್ತು. ಮಹಿಳೆಯರ ಸಹಾಯಕ್ಕಾಗಿ, ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಲ್ಪತರು ಮಹಿಳಾ ಪೊಲೀಸ್ ವಿಶೇಷ ಪಡೆಯನ್ನು ರಚನೆ ಮಾಡಿದೆ. 

ಈ ಕಲ್ಪತರು ಪಡೆ ಇಂದು ಪಾರ್ಕ್ ಗಳಿ ದಾಳಿ ನಡೆಸಿದೆ. ಪೊದೆಯ ಮರೆಯಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬುದ್ದಿ ಹೇಳಿದ್ದಾರೆ. ಅಪ್ಪ ಅಮ್ಮ ನಿಮ್ಮನ್ನು ಕಷ್ಟಪಟ್ಟು ಓದಿಸೋದು ಇದಕ್ಕೆನಾ ಎಂದು ನೀತಿ ಪಾಠ ಬೋಧಿಸಿದ್ದಾರೆ

ಐದಕ್ಕೂ ಹೆಚ್ಚು ಪಾರ್ಕ್ಗಳಿಗೆ ದಾಳಿ ನಡೆಸಿದ ಕಲ್ಪತರು ಮಹಿಳಾ ಪೊಲೀಸ್ ಪಡೆ 60ಕ್ಕೂ ಹೆಚ್ಚು ಜೋಡಿ ಹಕ್ಕಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಪೊಲೀಸರ ಬಲೆಗೆ ಬಿದ್ದ ರೋಮಿಯೋ ಜೂಲಿಯೆಟ್, ಲೈಲಾ ಮಜನುಗಳು ತಲೆ ತಗ್ಗಿಸಿ ಕ್ಷಮೆ ಕೇಳಿದ್ದಾರೆ. ಬಳಿಕ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ..

ಇದನ್ನೂ ಓದಿ-ಸ್ವಾತಂತ್ರ್ಯ ಬಂದು 76 ವರ್ಷವಾದರೂ ಸಾಮಾನ್ಯ ಜನರ ಪರಿಸ್ಥಿತಿ ಹೇಳುವವರಿಲ್ಲ ಕೇಳುವವರಿಲ್ಲ: ವಾಟಾಳ್ ನಾಗರಾಜ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News