ಕಿಚ್ಚನ ಕೈ ಪಾಕ ಸವಿದ ಕುಮಾರಣ್ಣ

     

Last Updated : Dec 17, 2017, 09:43 PM IST
ಕಿಚ್ಚನ ಕೈ ಪಾಕ ಸವಿದ ಕುಮಾರಣ್ಣ title=

ಬೆಂಗಳೂರು: ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿ ತಮ್ಮ 59 ಹುಟ್ಟುಹಬ್ಬದಂದು ವಿಶೇಷ ಅತಿಥ್ಯವನ್ನು ಪಡೆದಿದ್ದಾರೆ. ಹಾಗಾದರೆ ಅದೇನಪ್ಪಾ ಅಂತೀರಾ ಅಂತಹ ಅತಿಥ್ಯ, ಕುಮಾರಸ್ವಾಮಿಗೆ ಹುಟ್ಟುಹಬ್ಬದ ಪ್ರಯುಕ್ತ ನಟ ಕಿಚ್ಚ ಸುದೀಪ  ಜೆಪಿ ನಗರದ ತಮ್ಮ ಮನೆಯಲ್ಲಿ ವಿಶೇಷ ಭೋಜನವನ್ನು  ಕೈಯಾರೆ ತಯಾರಿಸಿ  ಕುಮಾರಸ್ವಾಮಿಯವರಿಗೆ ಬಡಿಸಿದ್ದಾರೆ. 

ನಿನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಕುಮಾರಸ್ವಾಮಿ, ಇಂದು ಸುದೀಪರ ಆಮಂತ್ರಣದ ಮೇರೆಗೆ ಅವರ ಮನೆಗೆ ಹೋಗಿದ್ದಾರೆ. ಅಲ್ಲದೆ ಸುಮಾರು ಎರಡು ಗಂಟೆಗಳ ಕಾಲ ಆತ್ಮೀಯ ಮಾತುಕತೆಯನ್ನು ನಡೆಸಿದ್ದು ಬಹುತೇಕ ರಾಜಕಾರಣಿ ಮತ್ತು ಚಿತ್ರರಂಗದವರನ್ನು ಹುಬ್ಬೆರಿಸುವಂತೆ ಮಾಡಿದೆ. 

ಅಷ್ಟಕ್ಕೂ ಕುಮಾರಸ್ವಾಮಿಯವರಿಗೆ ಚಿತ್ರರಂಗದ ಸಂಪರ್ಕವೇನೂ ಹೊಸದಲ್ಲ, ಈ ಹಿಂದೆ ರಾಜಕೀಯಕ್ಕೆ ಬರುವ ಮುಂಚೆ ಚಿತ್ರ ನಿರ್ಮಾಪಕರು ಮತ್ತು ವಿತರಕರಾಗಿದ್ದ ಕುಮಾರಸ್ವಾಮಿ ನಂತರದ ದಿನಗಳಲ್ಲಿ ಚಿತ್ರರಂಗದಿಂದ ವಿರಾಮ ತೆಗೆದುಕೊಂಡಿದ್ದರು. ಆದರೆ ಮತ್ತೆ ತನ್ನ ಮಗ ನಿಖಿಲ್ ಕುಮಾರ್ನ  ಚಿತ್ರ ಜಾಗ್ವಾರ್ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಹೆಜ್ಜೆ ಇಟ್ಟಿದ್ದರು ಎನ್ನುವುದನ್ನು ನಾವು ಗಮನಿಸಬಹುದು. 

ಕರ್ನಾಟಕದಲ್ಲಿ ಚುನಾವಣೆ ಹತ್ತಿರದಲ್ಲಿರುವುದರಿಂದ ಇಂತಹ ಭೇಟಿಗಳಿಗೆ ರಾಜಕೀಯ ಬಣ್ಣ ಬಳಿಯಲಾಗುತ್ತದೆ..ಸದ್ಯಕ್ಕೆ ಈ ಭೇಟಿಯಲ್ಲಿ ಏನೇನು ಚರ್ಚೆಯಾಯಿತು ಎಂದು ಇನ್ನು ತಿಳಿದು ಬಂದಿಲ್ಲ ಎನ್ನುವುದು ಈಗಿನ ಅಪ್ ಡೇಟ್.      

Trending News