Unlock 3.O : ರಾಜ್ಯಾದ್ಯಂತ ಜು. 5 ರಿಂದ ಅನ್ ಲಾಕ್ 3.O ಜಾರಿ : ಏನಿದೆ? ಏನಿಲ್ಲ?

ಇಂದು ಅಥವಾ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಮಹತ್ವದ ಸಭೆ

Last Updated : Jul 2, 2021, 11:43 AM IST
  • ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ
  • ರಾಜ್ಯ ಸರ್ಕಾರವು ಜುಲೈ 5 ರಿಂದ ಅನ್ ಲಾಕ್ 3.0 ಜಾರಿ ಮಾಡುತ್ತಿದೆ
  • ಇಂದು ಅಥವಾ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಮಹತ್ವದ ಸಭೆ
Unlock 3.O : ರಾಜ್ಯಾದ್ಯಂತ ಜು. 5 ರಿಂದ ಅನ್ ಲಾಕ್ 3.O ಜಾರಿ : ಏನಿದೆ? ಏನಿಲ್ಲ? title=

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಹೀಗಾಗಿ ರಾಜ್ಯ ಸರ್ಕಾರವು ಜುಲೈ 5 ರಿಂದ ಅನ್ ಲಾಕ್ 3.0 ಜಾರಿ ಮಾಡುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇಂದು ಅಥವಾ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಮಹತ್ವದ ಸಭೆ ನಡೆಸಲಿದ್ದಾರೆ, ಅನ್ ಲಾಕ್ 3.0 ಜಾರಿ ಕುರಿತಂತೆ ಏನಿದೆ? ಏನಿಲ್ಲ? ಎಂಬುವುದನ್ನ ತಿಳಿಸಲಿದ್ದಾರೆ. ಸಿಎಂ ಮತ್ತು ಹಿರಿಯ ಸಚಿವರ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದು, ಈ ಸಭೆಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಇದನ್ನೂ ಓದಿ : Heavy Rain in Karnataka : ಜುಲೈ 5ರವರೆಗೆ ರಾಜ್ಯದಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ

- ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ

- ಡೆಲ್ಟಾ + ವೈರಸ್(Delta Virus) ಹೆಚ್ಚಿರೋ ರಾಜ್ಯಗಳ ಗಡಿಯಲ್ಲಿ ಚೆಕಿಂಗ್

- ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಹೊರ ರಾಜ್ಯದಿಂದ ಎಂಟ್ರಿ

ಇದನ್ನೂ ಓದಿ : Heavy Rain : ರಾಜ್ಯಾದ್ಯಂತ ಇಂದು ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ 

- ನೈಟ್ ಕರ್ಫ್ಯೂ(Night Curfew) ಮುಂದುವರೆಸುವ ಸಾಧ್ಯತೆ

- ಕೋವಿಡ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು

ಯಾವುದಕ್ಕೆಲ್ಲಾ‌ ವಿನಾಯಿತಿ?

- ಪ್ರವಾಸಿ ತಾಣಗಳಿಗೆ ಅನುಮತಿ ಸಾಧ್ಯತೆ( ಕೋವಿಡ್ ನಿಯಮ ಪಾಲನೆ)

- ಉದ್ಯಾನವನ ಪೂರ್ಣ ಪ್ರಮಾಣದಲ್ಲಿ ಓಪನ್ ಸಾಧ್ಯತೆ

ಇದನ್ನೂ ಓದಿ : ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಸರ್ಕಾರ ತೀರ್ಮಾನ : ಸಚಿವ ಸಿ.ಪಿ.ಯೋಗೇಶ್ವರ

- ಕಾಲೇಜುಗಳ(College) ಆರಂಭಕ್ಕೆ ಅನುಮತಿ (ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)

- ವ್ಯಾಪಾರದ ಅವಧಿ ಇನ್ನಷ್ಟು ವಿಸ್ತರಣೆ ಸಾಧ್ಯತೆ

- ಮಾಲ್ (Shopping Mall)ಗಳಲ್ಲಿ ಶೇಕಡಾ 50ರಷ್ಟು ಆಧಾರದಲ್ಲಿ ಅನುಮತಿ ಸಾಧ್ಯತೆ

ಇದನ್ನೂ ಓದಿ : Mohammed Nalapad : ಡಿ.31ರ ಬಳಿಕ 'ಯುವ ಕಾಂಗ್ರೆಸ್‍ ನೂತನ ಅಧ್ಯಕ್ಷ'ರಾಗಿ ನಲಪಾಡ್ ಆಯ್ಕೆ

- ಒಳಾಂಗಣ ಶೂಟಿಂಗ್ ಗೆ ಅನುಮತಿ ಸಾಧ್ಯತೆ

- ಬಾರ್, ರೆಸ್ಟೋರೆಂಟ್‌ಗಳಿಗೆ ಅನುಮತಿ ( ಶೇ.50ರಷ್ಟು ಗ್ರಾಹಕರಿಗೆ ಅವಕಾಶ)

- ಹೊಟೇಲ್‌(Hotels)ಗಳಲ್ಲಿ ಈಗಿನ ನಿಯಮ ಮುಂದುವರಿಕೆ (ಶೇ. 50ರಷ್ಟು ಗ್ರಾಹಕರಿಗೆ ಅವಕಾಶ)

ಇದನ್ನೂ ಓದಿ : Heavy Rain in Karnataka : ಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರೀ ಮಳೆ!

- ಮದುವೆ ಅಂತ್ಯ ಸಂಸ್ಕಾರಕ್ಕೆ ಈಗಿನ ನಿಯಮವೇ ಮುಂದುವರಿಕೆ

- ವೀಕೆಂಡ್ ಕರ್ಫ್ಯೂವಿನಲ್ಲಿ ಇನ್ನಷ್ಟು ಸಡಿಲಿಕೆ

- ಸರ್ಕಾರಿ ಕಚೇರಿ(Govt Offices)ಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಗೆ ಅವಕಾಶ

ಇದನ್ನೂ ಓದಿ : Anganwadi Recruitment 2021: ಪರೀಕ್ಷೆಯಿಲ್ಲದೆಯೇ ಅಂಗನವಾಡಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

- ಕ್ಯಾಬ್, ಆಟೋಗಳಿಗೆ ವಿಧಿಸಿರೋ ನಿರ್ಬಂಧ ತೆಗೆಯುವ ಸಾಧ್ಯತೆ(ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು)

- ದೇವಸ್ಥಾನಗಳಲ್ಲಿ ಕನಿಷ್ಠ ಭಕ್ತಾಧಿಗಳಿಗೆ ಅವಕಾಶ ಸಾಧ್ಯತೆ

ಯಾವುದಕ್ಕಿಲ್ಲ ವಿನಾಯಿತಿ? 

- ಶಾಲೆಗಳು ಒಪನ್ ಆಗೋದು ಅನುಮಾನ

- ಶಾಪಿಂಗ್ ಮಾಲ್ ಒಳಗಡೆ ಇರೋ ಫುಡ್ ಕೋರ್ಟ್

- ಚಿತ್ರ ಮಂದಿರ ಓಪನ್ ಆಗೋದು ಅನುಮಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News