ರಾಜ್ಯ ಸರ್ಕಾರಿ ನೌಕರರ ಕಿವಿ ಮೇಲೂ ಹೂವಿಟ್ಟಿರುವ ಸಿದ್ದರಾಮಯ್ಯ & ಡಿಕೆಶಿ..!

ಪೌರ ಕಾರ್ಮಿಕರಿಗೆ ಖಾಯಂಮಾತಿ ಬಗ್ಗೆ ಕಾಂಗ್ರೆಸ್‌ ಪೌರ ಕಾರ್ಮಿಕರಿಗೆ ನೀಡಿದ್ದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಅಂಗನವಾಡಿ ಸಹಾಯಕರಿಗೆ, ಆಶಾ ಕಾರ್ಯಕರ್ತರಿಗೆ, ಬಿಸಿಯೂಟ ತಯಾರಿಕರಿಗೆ ನೀಡಿದ್ದ ವೇತನ ಹೆಚ್ಚಳದ ಭರವಸೆ ಇನ್ನೂ ಸಹ ಭರವಸೆಯಾಗಿಯೇ ಉಳಿದಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Nov 9, 2023, 06:20 PM IST
  • ರಾಜ್ಯದ ಕಡುಭ್ರಷ್ಟ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರಿಗೂ ಸಹ ಇನ್ನಿಲ್ಲದಂತಹ ತೊಂದರೆ ನೀಡಿದೆ
  • ವಾಮಮಾರ್ಗದಿಂದಾದರೂ ಅಧಿಕಾರ ಹಿಡಿಯಲೇಬೇಕೆಂದು ಸುಳ್ಳುಗಳ ಮೇಲೆ ಸುಳ್ಳನ್ನು ಹೆಣೆದ ಕಾಂಗ್ರೆಸ್‌ ಸರ್ಕಾರ
  • ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರಿ ನೌಕರರಿಗೂ ಕಿವಿ ಮೇಲೆ ಹೂವಿಟ್ಟಿದ್ದಾರೆ
ರಾಜ್ಯ ಸರ್ಕಾರಿ ನೌಕರರ ಕಿವಿ ಮೇಲೂ ಹೂವಿಟ್ಟಿರುವ ಸಿದ್ದರಾಮಯ್ಯ & ಡಿಕೆಶಿ..!   title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ!

ಬೆಂಗಳೂರು: ರಾಜ್ಯದ ಕಡುಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ 6 ತಿಂಗಳ ಅರಾಜಕತೆಯ ಆಡಳಿತದಲ್ಲಿ ನಾಡಿನ ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರವಲ್ಲದೆ, ಸರ್ಕಾರದ ಪ್ರಮುಖ ಕಾರ್ಯಾಂಗವಾದ ಸರ್ಕಾರಿ ನೌಕರರಿಗೂ ಸಹ ಇನ್ನಿಲ್ಲದಂತಹ ತೊಂದರೆಯನ್ನು ನೀಡಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬಿಸಿಯೂಟದ ಸಿಬ್ಬಂದಿಗಳಿಂದ ಹಿಡಿದು, ಅತಿಥಿ ಶಿಕ್ಷಕರು ಸೇರಿದಂತೆ ಡಯಾಲಿಸಿಸ್‌ ಸಿಬ್ಬಂದಿಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯತ್‌ನ ಪಿಡಿಒಗಳು, ಕಾಂಗ್ರೆಸ್‌ ಸರ್ಕಾರದ ಈ 6 ತಿಂಗಳ ಅವಧಿಯಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಸರ್ಕಾರದ ಆಡಳಿತದ ದಯನೀಯ ವೈಫಲ್ಯಕ್ಕೆ ಸಾಕ್ಷಿ!!’ ಎಂದು ಕುಟುಕಿದೆ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿದೆ : ಹೆಚ್‌ಡಿಕೆ ಕಿಡಿ

‘ವಾಮಮಾರ್ಗದಿಂದಾದರೂ ಅಧಿಕಾರ ಹಿಡಿಯಲೇಬೇಕೆಂದು ಸುಳ್ಳುಗಳ ಮೇಲೆ ಸುಳ್ಳನ್ನು ಹೆಣೆದ ಕಾಂಗ್ರೆಸ್‌ ಮತ್ತು ಸಿಎಂ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇವಲ ರಾಜ್ಯದ ಜನಸಾಮಾನ್ಯರ ಕಿವಿಯ ಮೇಲೆ ಮಾತ್ರ ಹೂವಿಟ್ಟಿಲ್ಲ, ಬದಲಿಗೆ ರಾಜ್ಯ ಸರ್ಕಾರಿ ನೌಕರರಿಗೂ ಕಿವಿ ಮೇಲೆ ಹೂವಿಟ್ಟಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.

‘ಅಧಿಕಾರಕ್ಕೇರಿ 6 ತಿಂಗಳು ಮುಗಿದು, ಒಂದು ಬಜೆಟ್‌ ಅನ್ನು ಸಹ ಮಂಡಿಸಿದರೂ ಸಿಎಂ ಸಿದ್ದರಾಮಯ್ಯರವರಾಗಲಿ ಅಥವಾ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಾಗಲಿ 7ನೇ ವೇತನ ಆಯೋಗದ ಬಗ್ಗೆ ಹಾಗೂ ಒಪಿಎಸ್‌ ಬಗ್ಗೆ ಕೊಂಚವೂ ಬಾಯಿ ಬಿಡುತ್ತಿಲ್ಲ. ಇದು ಕಾಂಗ್ರೆಸ್‌ ಸರ್ಕಾರ,  ಸರ್ಕಾರಿ ನೌಕರರಿಗೆ ಮಾಡುತ್ತಿರುವ ಮಹಾಮೋಸ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರು & ಕಾರ್ಯಕರ್ತರ ಭೇಟಿಗೆ ಟೈಮ್ ಫಿಕ್ಸ್ ಮಾಡಿದ ಡಿಕೆಶಿ!

’ಪೌರ ಕಾರ್ಮಿಕರಿಗೆ ಖಾಯಂಮಾತಿ ಬಗ್ಗೆ ಕಾಂಗ್ರೆಸ್‌ ಪೌರ ಕಾರ್ಮಿಕರಿಗೆ ನೀಡಿದ್ದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಅಂಗನವಾಡಿ ಸಹಾಯಕರಿಗೆ, ಆಶಾ ಕಾರ್ಯಕರ್ತರಿಗೆ, ಬಿಸಿಯೂಟ ತಯಾರಿಕರಿಗೆ ನೀಡಿದ್ದ ವೇತನ ಹೆಚ್ಚಳದ ಭರವಸೆ ಇನ್ನೂ ಸಹ ಭರವಸೆಯಾಗಿಯೇ ಉಳಿದಿದೆ. ಈಗಾಗಲೇ ರಾಜ್ಯದ ಆರೂವರೆ ಕೋಟಿ ಕನ್ನಡಿಗರು ಸೇರಿದಂತೆ ಸ್ವಪಕ್ಷೀಯ ಶಾಸಕರಿಂದ ಅವಿಶ್ವಾಸ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರವರು ಈಗ ಕಾರ್ಯಾಂಗದ ಪ್ರಮುಖ ಭಾಗವಾದ ಸರ್ಕಾರಿ ನೌಕರರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಜನರ, ಶಾಸಕರ, ಸರ್ಕಾರಿ ನೌಕರರಿಂದ ಸಂಪೂರ್ಣ ಅವಿಶ್ವಾಸ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯರವರನ್ನು ಅದಿನ್ನಾವ ಪುರುಷಾರ್ಥಕ್ಕೆ ಸಿಎಂ ಕುರ್ಚಿಯಲ್ಲಿ ಕೂರಿಸಿದ್ದಾರೆ ಎಂಬ ಮರ್ಮ ಕಾಂಗ್ರೆಸ್‌ ಹೈಕಮಾಂಡ್‌ಗೆ ಮಾತ್ರವೇ ಗೊತ್ತು!!’ ಎಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News