ಗೃಹ ಲಕ್ಷ್ಮೀ ಗ್ಯಾರಂಟಿ ಯಿಂದ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು : ಆರ್. ಅಶೋಕ್

ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಹಾಗೂ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು ಎಂದು ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

Written by - RACHAPPA SUTTUR | Edited by - Manjunath N | Last Updated : Jul 5, 2023, 02:07 PM IST
  • ಇದು ನಿಮ್ಮ ಮೋಸ ಅಲ್ವಾ? ಯುವ ನಿಧಿಯನ್ನು ರಾಹುಲ್ ಗಾಂಧಿ ಕೈಯಲ್ಲಿ ಮಾಡಿಸಿದ್ರಲ್ಲ
  • ನಿರುದ್ಯೋಗಿ ಅಂತಾ ಹೇಳಿ, ಇವಾಗ 2022-23 ಎಂದು ಷರತ್ತು ಹಾಕಿದ್ದೀರಿ
  • ಈ ಗ್ಯಾರಂಟಿಗಳಿಗೆ ಕಂಡಿಷನ್ ಹಾಕದೆ ಇದ್ರೆ ಲಕ್ಷ ಕೋಟಿ ಬೇಕು ಎಂದರು
ಗೃಹ ಲಕ್ಷ್ಮೀ ಗ್ಯಾರಂಟಿ ಯಿಂದ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು : ಆರ್. ಅಶೋಕ್ title=

ಬೆಂಗಳೂರು: ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಹಾಗೂ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು ಎಂದು ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿ, ಸಿದ್ದರಾಮಣ್ಣನವರು ಐದು ಗ್ಯಾರಂಟಿಗಳನ್ನು ಕೊಡೋದು ಶತಸಿದ್ದ ಅಂತಾರೆ. ಆದರೆ ನಾಳೆ ಅಂತಾ ಬೋರ್ಡ್ ಬರೆದುಕೊಳ್ತಾರೆ.ಚುನಾವಣೆಗೂ ಮುನ್ನ 200 ಯೂನಿಟ್ ವಿದ್ಯುತ್ ಫ್ರೀ ಅಂದ್ರಿ.ಗ್ಯಾರಂಟಿ ಕಾರ್ಡ್ ಹಂಚುವಾಗ 70 ಯೂನಿಟ್ ಅಂತಾ ಹೇಳಬೇಕಿತ್ತು. ಅದು ಬಿಟ್ಟು ಅಧಿಕಾರಕ್ಕೆ ಬಂದ ನಂತರ ಇಷ್ಟು ಯುನಿಟ್ ಅಂತಾ ಕಂಡಿಷನ್ ಹಾಕ್ತೀರಲ್ಲ ಎಂದು‌ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Ajit Agarkar: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ಇದು ನಿಮ್ಮ ಮೋಸ ಅಲ್ವಾ? ಯುವ ನಿಧಿಯನ್ನು ರಾಹುಲ್ ಗಾಂಧಿ ಕೈಯಲ್ಲಿ ಮಾಡಿಸಿದ್ರಲ್ಲ. ನಿರುದ್ಯೋಗಿ ಅಂತಾ ಹೇಳಿ, ಇವಾಗ 2022-23 ಎಂದು ಷರತ್ತು  ಹಾಕಿದ್ದೀರಿ. ಈ ಗ್ಯಾರಂಟಿಗಳಿಗೆ ಕಂಡಿಷನ್ ಹಾಕದೆ ಇದ್ರೆ ಲಕ್ಷ ಕೋಟಿ ಬೇಕು ಎಂದರು.ಅನ್ನಭಾಗ್ಯ, ಮುಖ್ಯಮಂತ್ರಿಗಳ ಫೆವರೀಟ್ ಯೋಜನೆಯಾಗಿದೆ.ಚುನಾವಣೆಗೆ ಮೊದಲು 10 ಕೆಜಿ ಅಂದು,ಇವಾಗ 5 ಅಂತಿದ್ದಾರೆ.ಇದು ಮೋಸ ಅಲ್ವಾ..? ಎಂದು ಪ್ರಶ್ನಿಸಿದರು.

ಕುಟುಂಬದ ಮಹಿಳೆಯರಿಗೆ 2000 ರೂಪಾಯಿ ಅಂದ್ರು.  ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು. ಇವಾಗ ಪೋರ್ಟಲ್ ಹ್ಯಾಕ್ ಮಾಡ್ಬಿಟ್ಡೀದ್ದೀರಂತೆ. ಮೋದಿ ಮೇಲೆ ಜವಬ್ದಾರಿಯುತ ಸಚಿವರು ಈ ರೀತಿ ಆರೋಪ ಮಾಡ್ತಾರಲ್ಲ..? ಎಂದು ಪ್ರಶ್ನಿಸಿದರು.ಇದರಿಂದ ಜನರಿಗೆ ಏನು ಸಂದೇಶ ಹೋಗುತ್ತೆ? ಜನರೇ ಈ ಗ್ಯಾರಂಟಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಬಸ್ಸು ಯೋಜನೆ ನಿಂತು ಹೋಗುತ್ತದೆ ಎಂದು ಜನರು ಹೆಚ್ಚೆಚ್ಚು ಓಡಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!

ಐದು ಗ್ಯಾರಂಟಿ ಕೊಟ್ಟರೂ ಷರತ್ತು ಹಾಕಿ ಜನರಿಗೆ ಮೋಸ ಮಾಡುತ್ತಿದೆ ಸರ್ಕಾರ. ಎಲ್ಲ ಗ್ಯಾರಂಟಿಗಳಿಗೂ ನೀವು ಚೆಕ್ ಪೋಸ್ಟ್ ಗಳನ್ನು ಇಟ್ಟೀದ್ದೀರಿ. ಅಧಿಕಾರಕ್ಕೆ‌‌ ಬಂದು 24 ಗಂಟೆಗಳಲ್ಲಿ ಗ್ಯಾರಂಟಿ ಜಾರಿ  ಮಾಡಿಲ್ಲ,ಹೀಗಾಗಿ ಈ ಸರ್ಕಾರಕ್ಕೆ ಆಡಳಿತ ನಡೆಸುವ ಅಧಿಕಾರ ಇಲ್ಲ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News