ನಾಳೆ ನಡೆಯಬೇಕಿದ್ದ ಸೌಹಾರ್ದ ನಡಿಗೆ ಮುಂದೂಡಿಕೆ: ರಮಾನಾಥ ರೈ

ಮತೀಯ ಸಂಘಟನೆಗಳು ಕಾನೂನು ಭಂಗಕ್ಕೆ ಯತ್ನಿಸುತ್ತಿವೆ ಎಂದು ಸಚಿವ ರಮಾನಾಥ್ ರೈ ಹೇಳಿಕೆ ನೀಡಿದ್ದಾರೆ. 

Last Updated : Sep 11, 2017, 02:55 PM IST
ನಾಳೆ ನಡೆಯಬೇಕಿದ್ದ ಸೌಹಾರ್ದ ನಡಿಗೆ ಮುಂದೂಡಿಕೆ: ರಮಾನಾಥ ರೈ title=

ಬೆಂಗಳೂರು: ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಕೋಮುವಾದಿ ಶಕ್ತಿಗಳು ಪ್ರಯತ್ನ ನಡೆಸುತ್ತಿವೆ. ಹಾಗಾಗಿ ನಾಳೆ ನಡೆಯಬೇಕಿದ್ದ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೈ ಸದ್ಯ ಮಂಗಳೂರಿನಲ್ಲಿ ಶಾಂತಿ ನೆಲೆಸಿದೆ. ಮತೀಯ ಸಂಘಟನೆಗಳು ಕಾನೂನಿಗೆ ಭಂಗ ತರಲು ಯತ್ನಿಸುತ್ತಿವೆ. ರಾತ್ರೋ ರಾತ್ರಿ ಕೊಲೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು. 

ಬಿಜೆಪಿಯ ಜಾಥಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನೂ ಎಫೆಕ್ಟ್ ಆಗಿಲ್ಲ. ಅವರ ತಂತ್ರವನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಮಾಧ್ಯಮಗಳಿಗೆ ರೈ ತಿಳಿಸಿದರು. 

Trending News