ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಡೈರಿ ಉದ್ಘಾಟಿಸದ ಸಿಎಂ ಸಿದ್ಧರಾಮಯ್ಯ

ನೀತಿ ಸಂಹಿತೆ ಜಾರಿ ಹಿನ್ನೆಲೆ ಸರ್ಕಾರಿ ವಾಹನ ಬಿಟ್ಟು, ಖಾಸಗಿ ವಾಹನದಲ್ಲಿ ವಾಪಸ್ ತೆರಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ.  

Last Updated : Mar 27, 2018, 12:17 PM IST
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಡೈರಿ ಉದ್ಘಾಟಿಸದ ಸಿಎಂ ಸಿದ್ಧರಾಮಯ್ಯ title=

ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೆಗಾ ಡೈರಿ ಉದ್ಘಾಟಿಸದೆ, ಸರ್ಕಾರಿ ವಾಹನ ಬಿಟ್ಟು, ಖಾಸಗಿ ವಾಹನದಲ್ಲಿ ವಾಪಸ್ ತೆರಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಕ್ರಾಸ್ ಬಳಿಯ ಮೆಗಾ ಡೈರಿ ಉದ್ಘಾಟನೆಗೆಂದು ತೆರಳಿದ್ದ ಸಿದ್ದರಾಮಯ್ಯ, ಡೈರಿ ಉದ್ಘಾಟಿಸದೆ ಡೈರಿಯನ್ನು ವೀಕ್ಷಿಸಿ ಹಿಂದಿರುಗಿದರು. ಈ ವೇಳೆ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಸರ್ಕಾರಿ ಕಾರು ಬಳಕೆ ಬಿಟ್ಟು ಖಾಸಗಿ ಕಾರು ಹತ್ತಿ ತೆರಳಿದರು.

ಚುನಾವಣೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಏನು ಹೇಳಿದರೆ ನೀವೇ ನೋಡಿ...

 

Trending News