ಲಿವ್ ಇನ್ ರಿಲೇಷನ್‍ ಶಿಪ್ ವೇಳೆ ಹುಟ್ಟಿತು ಅನುಮಾನ, ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸೋ ನಾಟಕ.. ಆಗಿದ್ದೇನು?

Murder in Bangalore: ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 

Edited by - Zee Kannada News Desk | Last Updated : Jan 13, 2022, 03:12 PM IST
  • ಲಿವ್ ಇನ್ ರಿಲೇಷನ್‍ ಶಿಪ್ ವೇಳೆ ಹುಟ್ಟಿತು ಅನುಮಾನ
  • ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸೋ ನಾಟಕ
  • ಆರೋಪಿಯನ್ನು ಬಂಧಿಸಿದ ಕೋಣನಕುಂಟೆ ಠಾಣೆ ಪೊಲೀಸರು
ಲಿವ್ ಇನ್ ರಿಲೇಷನ್‍ ಶಿಪ್ ವೇಳೆ ಹುಟ್ಟಿತು ಅನುಮಾನ, ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸೋ ನಾಟಕ.. ಆಗಿದ್ದೇನು? title=
ಕೊಲೆ

ಬೆಂಗಳೂರು: ಅನೈತಿಕ ಸಂಬಂಧದ ಅನುಮಾನದಲ್ಲಿ ಕೊಲೆ ಮಾಡಿ (murder) ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಮಂಜುನಾಥ್ ಬಂಧಿತ ಆರೋಪಿ‌ ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದಿದ್ದ35 ವರ್ಷದ  ಮಹಿಳೆಯ ಕೊಲೆ (Murder in Bangalore) ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಲಿವ್ ಇನ್ ರಿಲೇಷನ್‍ ಶಿಪ್ ವೇಳೆ ಹುಟ್ಟಿತು ಅನುಮಾನ:

35 ವರ್ಷದ  ಮಹಿಳೆಯೊಬ್ಬರು ಮತ್ತು ಆರೋಪಿ ಮಂಜುನಾಥ್ ಜೊತೆ ಲಿವ್ ಇನ್ ರಿಲೇಷನ್‍ ಶಿಪ್ (Live in Relationshinship) ನಲ್ಲಿದ್ದರು. ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ಇಬ್ಬರೂ ಮನೆಯೊಂದರಲ್ಲಿ ವಾಸವಿದ್ದರು. ಈ ವೇಳೆ ಮಂಜುನಾಥ್ ತಲೆಯಲ್ಲಿ ಅನುಮಾನದ ಹುಳ ಹುಟ್ಟಿಕೊಂಡಿದೆ. 

ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿದೆ ಎಂದು ಸಂಶಯಪಟ್ಟು, ಮೃತ ಮಹಿಳೆಗೆ ಥಳಿಸಿದ್ದಾರೆ. ಈ ವೇಳೆ ಮಹಿಳೆ ಮೃತಪಟ್ಟಿದ್ದಾರೆ. ನಂತರ ಅಸ್ವಸ್ಥಳಾಗಿದ್ದಾರೆ ಎಂದು ನಾಟಕವಾಡಿದ ಆರೋಪಿ, ಜಯನಗರದ ಖಾಸಗಿ ಆಸ್ಪತ್ರೆಗೆ ಶವವನ್ನ ತೆಗೆದುಕೊಂಡು ಹೋಗಿದ್ದಾನೆ.

ಆಟೋದಲ್ಲೇ ಶವ ಬಿಟ್ಟು ಆರೋಪಿ ಪರಾರಿ:

ಈ ವೇಳೆ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ತಕ್ಷಣ ಆಸ್ಪತ್ರೆ ಹೊರಗೆ ಆಟೋದಲ್ಲೇ ಶವ ಬಿಟ್ಟು ಆರೋಪಿ ಪರಾರಿಯಾಗಿದ್ದ. ವೈದ್ಯರ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೋಣನಕುಂಟೆ ಪೊಲೀಸರು (Konanakunte Police Sation) ಮಂಜುನಾಥ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ: "ಜನರ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ ಹಿಂದೆ ಪಡೆಯುತ್ತಿದ್ದೇವೆ": ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News