ರಾಜ್ಯ ಒಡೆಯುವ ಪ್ರಯತ್ನ ಬೇಡ: ಶಿವರಾಜ್ ಕುಮಾರ್ ಕರೆ

ಅಖಂಡ ಕರ್ನಾಟಕವನ್ನು ಒಡೆಯುವ ಕೆಲಸವನ್ನು ಎಂದಿಗೂ ಮಾಡಬೇಡಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. 

Last Updated : Aug 2, 2018, 11:49 AM IST
ರಾಜ್ಯ ಒಡೆಯುವ ಪ್ರಯತ್ನ ಬೇಡ: ಶಿವರಾಜ್ ಕುಮಾರ್ ಕರೆ title=

ಬೆಂಗಳೂರು: ನಾವೆಲ್ಲರೂ ಕನ್ನಡಿಗರು. ನಾವೆಲ್ಲರೂ ಒಟ್ಟಿಗೆ ಇರಬೇಕು. ಅಖಂಡ ಕರ್ನಾಟಕವನ್ನು ಒಡೆಯುವ ಕೆಲಸವನ್ನು ಎಂದಿಗೂ ಮಾಡಬೇಡಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬುದಿರುತ್ತದೆ. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯ ಬೇಕು ಎಂಬುದ ಹೇಳುವುದು ಸರಿಯಲ್ಲ. ಖಂಡ ಖಂಡ ಕರ್ನಾಟಕದ ಬಗ್ಗೆ ನಮಗೆ ತಿಳಿದಿಲ್ಲ. ನಮಗೆ ಗೊತ್ತಿರುವುದು ಕೇವಲ ಅಖಂಡ ಕರ್ನಾಟಕ. ಹಾಗಾಗಿ ಎಲ್ಲರೂ ಒಟ್ಟಿಗೆ ಇರೋಣ ಎಂದು ಶಿವರಾಜ್ ಕುಮಾರ್ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಬೇಡಿಕೆ ಇತ್ತಿರುವವರಿಗೆ ಬುದ್ಧಿ ಹೇಳುವಷ್ಟು ದೊಡ್ಡವನು ನಾನಲ್ಲ. ಬೇರೆಯವರನ್ನು ನೋಡಿ ನಮಗೂ ಪ್ರತ್ಯೇಕ ರಾಜ್ಯ ಬೇಕು ಎಂದು ಹೇಳುವುದು ಸರಿಯಲ್ಲ. ಎಲ್ಲರೂ ಮಾತನಾಡುವುದು ಕನ್ನಡವೇ. ಅದರಲ್ಲಿ ಧಾರವಾಡ, ಮೈಸೂರು, ಬೆಂಗಳೂರು ಹುಬ್ಬಳಿ ಎಂದು ವಿಭಜಿಸುವುದು ಬೇಡ ಎಂದು ಹೇಳಿದರು.

Trending News