ರಾಜ್ಯಾದ್ಯಂತ ತೀವ್ರಗೊಂಡ ಕಾವೇರಿ ಕಿಚ್ಚು..! ಕಾವೇರಿಗಾಗಿ ಬೀದಿಗಿಳಿದು ಪ್ರತಿಭಟಿಸಿದ ಕನ್ನಡಿಗರು

Cauvery Dispute: ಕಾವೇರಿ ಎಂದರೆ ಕರುನಾಡಿನ ಜನರಿಗೆ ಹೆತ್ತ ತಾಯಿಯಷ್ಟೇ ಪೂಜ್ಯನೀಯ. ತನ್ನ ನಂಬಿದ ರೈತರ ಕೈಹಿಡಿದು ಹರಸುವ ಕಾವೇರಿಗೆ ಇದೀಗ ಸಂಕಷ್ಟ ಶುರುವಾಗಿ ಬಿಟ್ಟಿದೆ.   

Written by - Savita M B | Last Updated : Sep 22, 2023, 06:36 PM IST
  • ಅಕಾಲಿಕ ಮಳೆಯಿಂದ ನೀರಿನ ಕೊರತೆ ಎದುರಾಗಿದೆ
  • ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ
  • ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ರಾಜ್ಯಾದ್ಯಂತ ಕನ್ನಡಿಗರ ಕಿಚ್ಚು ಸ್ಫೋಟಗೊಂಡಿದ್ದಾರೆ
ರಾಜ್ಯಾದ್ಯಂತ ತೀವ್ರಗೊಂಡ ಕಾವೇರಿ ಕಿಚ್ಚು..! ಕಾವೇರಿಗಾಗಿ ಬೀದಿಗಿಳಿದು ಪ್ರತಿಭಟಿಸಿದ ಕನ್ನಡಿಗರು title=

Cauvery Preotest: ಅಕಾಲಿಕ ಮಳೆಯಿಂದ ನೀರಿನ ಕೊರತೆ ಎದುರಾಗಿರುವ ಹೊತ್ತಲ್ಲೇ, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಕಾವೇರಿ ಕಿಚ್ಚು ಕಾವೇರುವಂತೆ ಮಾಡಿದೆ. ಅತ್ತ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ರಾಜ್ಯಾದ್ಯಂತ ಕನ್ನಡಿಗರ ಕಿಚ್ಚು ಸ್ಫೋಟಗೊಂಡಿದ್ದರೆ, ಇತ್ತ ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯಸರ್ಕಾರ ಹಾಗೂ ಕಾವೇರಿ ನೀರಾವರಿ ಪ್ರಾಧಿಕಾರದ ವಿರುದ್ಧ ರಣಕಹಳೆ ಮೊಳಗಿದ್ದಾರೆ. 

ಹೌದು.. ಕರ್ನಾಟಕಕ್ಕೆ ನೀರಿನ ವಿಚಾರದಲ್ಲಿ ಎಲ್ಲ ದಿಕ್ಕುಗಳಿಂದಲೂ ಶತ್ರುಗಳ ಕಾಟ ಶುರುವಾಗಿದೆ. ಮಳೆರಾಯ ಕಣ್ಣಾಮುಚ್ಚಾಲೆ ಆಟ ಆಡ್ತಾ ಜನರ ಮೇಲೆ ಬರೆ ಎಳೆದಿದ್ದಾನೆ. ನಮಗೆ ಸರಿಯಾಗಿ ಕುಡಿಯುವ ನೀರಿಲ್ಲದ ಸಂಕಷ್ಟದಲ್ಲಿ ಪಕ್ಕದ ತಮಿಳುನಾಡು ಕಾವೇರಿ ನೀರನ್ನ ಕೃಷಿಗೆ ಬೇಕು ಅಂತ ಪಟ್ಟು ಹಿಡಿದಿದೆ. 

ನಮಗೆ ನೀರು ಬಿಡ್ತಿಲ್ಲ ಅಂತ ಸುಪ್ರೀಕೋರ್ಟ್ ಗೆ ತಮಿಳುನಾಡು ಹೋಗಿದ್ದು ಅವರ ಪರ ಸುಪ್ರೀಂ ಕೋರ್ಟ್ ಶಾಸನ ಬರೆದಿದೆ. ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಿ ಅಂತ ತೀರ್ಪು ಕೊಟ್ಟಿದ್ದು, ಇದು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ. 

ಸದ್ಯ ಇದು ರಾಜ್ಯದಲ್ಲಿ ಹೋರಾಟದ ಕಹಳೆ ಮೊಳಗಿಸಲು ಕಾರಣವಾಗಿದೆ. ಇತ್ತ ನಿನ್ನೆ  ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದ್ದು, ರಾಜ್ಯಾದ್ಯಂತ ಕಾವೇರಿ ಕಿಚ್ಚು ಮತ್ತಷ್ಟು ಕಾವು ಪಡೆದುಕೊಂಡಿದೆ.ಇತ್ತ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪ್ರತಭಟನೆ ನಡೆಸಿದ ಕರವೇ ನಾರಾಯಣಗೌಡರ ಬಣ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ವಶಕ್ಕೆ ಸಿಲುಕಿದ್ದರು.

ಇದನ್ನೂ ಓದಿ-ಕಾವೇರಿ ನೀರು ಬಿಟ್ರೆ ಮುಂದೆ ಕರ್ನಾಟಕ ಬಂದ್: ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ

ಕರುನಾಡಿಗೆ ಸುಪ್ರೀಂ ಕೋರ್ಟ್ ಮರಣ ಶಾಸನ ನೀಡಿದೆ ಅಂತಾ ಆಕ್ರೋಶ ಹೊರಹಾಕಿರುವ ಕರವೇ, ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲು ಸಜ್ಜಾಗಿದೆ. ಅಲ್ಲದೇ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸೋದಕ್ಕೂ ಸಿದ್ಥತೆ ಮಾಡಿಕೊಳ್ಳುತ್ತಿದೆ.

ಇನ್ನು ಕರವೇ ನಾರಾಯಗೌಡ  ಬಣದಿಂದ ಇವತ್ತು ನಗರದ ವಿವಿಧೆಡೆ ಪ್ರತಿಭಟನೆ, ರ್ಯಾಲಿ ನಡೆಸಿದ್ರು. ಬೆಂಗಳೂರು- ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್  ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ನೀರಾವರಿ ನಿಗಮ ಹಾಗೂ ಸರ್ಕಾರ ನೀರು ಕೊಡಲು ಸಜ್ಜಾಗಿರೋದಕ್ಕೆ ಕರವೇ ಆಕ್ರೋಶ ಹೊರಹಾಕ್ತು. ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತಿವೆ ಎಂದು ಕರವೇ ಸರ್ಕಾರಕ್ಕೆ ಎಚ್ಚರಿಕೆ ನೀಡ್ತು. 

ಇನ್ನೂ ಕಾವೇರಿ ವಿಚಾರವಾಗಿ ನಾಳೆ ರೈತ ಮುಖಂಡರು, ಚಲಚಿತ್ರ ನಟರು, ಕನ್ನಡಪರ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಸಭೆ ನಡೆಸುತ್ತಿವೆ. ಸಭೆಯಲ್ಲಿ ಕರ್ನಾಟದ ಬಂದ್ ಮಾಡೋ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಭೆ  ಬಳಿಕ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡೋ ಸಾಧ್ಯತೆ ಇದೆ.

ಒಟ್ಟಿನಲ್ಲಿ ಕಳೆದ 2-3 ತಿಂಗಳಿನಿಂದ ಸ್ವಲ್ಪ ಸ್ವಲ್ಪವೇ ಹೊಗೆಯಾಡ್ತಿದ್ದ ಕಾವೇರಿ ಕಿಚ್ಚು, ಇದೀಗ ಜ್ವಾಲಾಮುಖಿಯಾಗಿ ಸ್ಫೋಟಗೊಳ್ಳುವ ಲಕ್ಷಣಗಳು ಕಂಡುಬರುತ್ತಿದೆ. ನೀರಿಗಾಗಿ ಪರಿತಪಿಸುತ್ತಿರುವ ರಾಜ್ಯದ ಜನರಿಗೆ ಸುಪ್ರೀಂ ಆದೇಶ ಇದೀಗ ಬರಿಸಿಡಿಲು ಬಡಿದಂತಾಗಿದ್ದು, ಸದ್ಯ ಕಾವು ಪಡೆದಿರುವ ಕಾವೇರಿ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ-ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ : ಮಾಜಿ ಸಿಎಂ ಬೊಮ್ಮಾಯಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News