ಕಮಲ ನಾಯಕರ ಮೇಲೆ ಕೈ ಕಣ್ಣು! ಉಡುಪಿ-ಚಿಕ್ಕಮಗಳೂರು ಎಂಪಿ ಅಭ್ಯರ್ಥಿ ಆಗ್ತಾರ ಜಯಪ್ರಕಾಶ್ ಹೆಗ್ಡೆ?

Lokasabha 2024 : 2023ರ ವಿಧಾನಸಭಾ ಚುನಾವಣೆ ಗೆಲುವಿನ ಜೋಶ್ ನಲ್ಲಿ ಇರುವ ಕಾಂಗ್ರೆಸ್  ಲೋಕಸಭೆ ಚುನಾವನೆಯಲ್ಲೂ ರಾಜ್ಯದಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪಣ ತೊಟ್ಟಿದ್ದೆ. ಈ ಹಿನ್ನಲೆಯಲ್ಲಿ ಬಿಜೆಪಿ ಭದ್ರ ಕೋಟೆ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಭೇದಿಸಲು ಸಿದ್ಧತೆ ನಡೆಸುತ್ತಿದೆ.

Written by - Prashobh Devanahalli | Edited by - Savita M B | Last Updated : Jun 8, 2023, 03:31 PM IST
  • ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಜಯಪ್ರಕಾಶ ಹೆಗ್ಡೆ
  • ಇರುವ‌ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದೆ
  • ಈ ಮುನ್ನ ಕಾಂಗ್ರೆಸ್ ನಿಂದ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ
ಕಮಲ ನಾಯಕರ ಮೇಲೆ ಕೈ ಕಣ್ಣು! ಉಡುಪಿ-ಚಿಕ್ಕಮಗಳೂರು ಎಂಪಿ ಅಭ್ಯರ್ಥಿ ಆಗ್ತಾರ ಜಯಪ್ರಕಾಶ್ ಹೆಗ್ಡೆ? title=

ಬೆಂಗಳೂರು : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಜಯಪ್ರಕಾಶ ಹೆಗ್ಡೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.ವರ್ಚಸ್ಸು ಇರುವ‌ ಬಿಜೆಪಿ  ನಾಯಕರ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದ್ದು ಮಾಜಿ ಸಂಸಾದರಾದ ಜಯಪ್ರಕಾಶ್ ಹೆಗಡೆ ಅವರನ್ನ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದೆ. 

ಈ ಮುನ್ನ ಕಾಂಗ್ರೆಸ್ ನಿಂದ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ,ನೆನ್ನೆ ಡಿಸಿಎಂ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ ಜಯಪ್ರಕಾಶ ಹೆಗಡೆ,ಸೌಜನ್ಯ ದ ಬೇಟಿ, ಡಿಸಿಎಂಗೆ ವಿಶ್ ಮಾಡಲು ಬಂದಿದ್ದಾಗಿ ಹೇಳಿದರು. ಅದೇನೇ ಇದ್ದರೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಗೆ ಶಿವಕುಮಾರ್ ಹುಡುಕಾಟ ನಡೆಸುತ್ತಿದ್ದು,ಜಯಪ್ರಕಾಶ ಹೆಗಡೆ ಕಾಂಗ್ರೆಸ್ ಸೇರ್ಪಡೆ ಆಗ್ತಾರ ಎಂಬ ಚರ್ಚೆ ಪ್ರಾರಂಭವಾಗಿದೆ.

ಇದನ್ನೂ ಓದಿ-ಗೃಹ ಜ್ಯೋತಿ ಯೋಜನೆ : ಬಾಡಿಗೆ ದಾರರ ಸ್ಥಿತಿ ಶೋಚನೀಯ: ಆರ್ ಅಶೋಕ್

ಈ ಚರ್ಚೆಗೆ ಜೀ ಕನ್ನಡ ನ್ಯೂಸ್ ಪ್ರತಿನಿಧಿ ಜನಾರ್ಧನ್ ಹೆಬ್ಬಾರ್ ಅವರಿಗೆ ದೂರವಾಣಿ ಮೂಲಕ ಸ್ಪಷ್ಟಿಕರಣ ನೀಡಿದ ಜಯಪ್ರಕಾಶ್ ಹೆಗಡೆ ಅವರು,ಚುನಾವಣಾ ರಾಜಕೀಯಕ್ಕೆ ಈಗ ಬರಲ್ಲ. ಈಗ ಯಾವುದೇ ಪಕ್ಷದಲ್ಲಿ ನಾನಿಲ್ಲ.ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ.ಸರ್ಕಾರ ನನಗೆ ಅನುಮತಿ ನೀಡಿದೆ,ನವೆಂಬರ್ ಅಂತ್ಯದ ವರೆಗೆ ಅಧಿಕಾರಾವಧಿ ಇದೆ.ಆ ಬಳಿಕ ರಾಜಕೀಯದ ಚಿಂತನೆ ಮಾಡುತ್ತೇನೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಇತ್ತು, ಆದರೆ ಸದ್ಯ ಯಾವುದೇ ಪಕ್ಷದ ಜೊತೆ ನಾನು ಇಲ್ಲ,ಎಲ್ಲ ಪಕ್ಷದ ಮುಖಂಡರ ಜೊತೆ ಒಳ್ಳೆ ಸಂಬಂಧವಿದೆ, ಎಂದರು.

ಇದನ್ನೂ ಓದಿ-ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ : ಸಾವರ್ಕರ್ ಹಾಗೂ ಹೆಡ್ಗೆವಾರ್ ಪಠ್ಯಕ್ಕೆ ಕೊಕ್?!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News