ರಾಜಧಾನಿಯಲ್ಲಿ ನೈಜೀರಿಯಾ ಪ್ರಜೆಗಳ ಪುಂಡಾಟ : ಸಿಸಿಬಿ ಪೊಲೀಸ್ರ ಮೇಲೆ ಹಲ್ಲೆ ಮಾಡಿ ಎಸ್ಕೇಪ್

ನೈಜೀರಿಯಾ ಪುಂಡಾಟ‌ ಮೀತಿ ಮೀರಿ ಹೋಗಿದೆ.‌ ಡ್ರಗ್‌ಕೇಸ್ ನಲ್ಲಿ ದಾಳಿಗೆ ಹೋಗಿದ್ದ ಸಿಸಿಬಿ ಪೊಲೀಸ್ರ ಮೇಲೆ ನೈಜೀರಿಯಾ ಪ್ರಜೆಗಳು ಗುಂಡಾವರ್ತನೆ ತೋರಿದ್ದಾರೆ. 

Written by - VISHWANATH HARIHARA | Edited by - Krishna N K | Last Updated : Apr 19, 2024, 05:01 PM IST
    • ಸಿಲಿಕಾನ್ ಸಿಟಿಯಲ್ಲಿ ವಿದೇಶಿಗಳ ಹಾವಳಿ ಹೆಚ್ಚಾಗುತ್ತಿದೆ.
    • ಗಾಂಜಾ ಮತ್ತಿನಲ್ಲಿ ಖಾಕಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ.
    • ಖಾಕಿ ಮೇಲೆ ಹಲ್ಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ವರದಿಯಾಗಿದೆ.
ರಾಜಧಾನಿಯಲ್ಲಿ ನೈಜೀರಿಯಾ ಪ್ರಜೆಗಳ ಪುಂಡಾಟ : ಸಿಸಿಬಿ ಪೊಲೀಸ್ರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ title=

ಬೆಂಗಳೂರು : ಇತ್ತೀಚಿಗೆ ಸಿಲಿಕಾನ್ ಸಿಟಿಯಲ್ಲಿ ವಿದೇಶಿಗಳ ಹಾವಳಿ ಹೆಚ್ಚಾಗುತ್ತಿದೆ. ಪೊಲೀಸರ ಎಷ್ಟೆ ಕಡಿವಾಣ ಹಾಕ್ತಿದ್ದರು ಕೂಡಾ ಮತ್ತೆ ಮತ್ತೆ ಗಾಂಜಾ ಮತ್ತಿನಲ್ಲಿ ಖಾಕಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಇದೀಗ ನೈಜೇರಿಯಾ ಪುಂಡರು ಖಾಕಿ ಮೇಲೆ ಹಲ್ಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ವರದಿಯಾಗಿದೆ.

ನಗರದಲ್ಲಿ ನೈಜೀರಿಯಾ ಪುಂಡಾಟ‌ ಮೀತಿ ಮೀರಿ ಹೋಗಿದೆ.‌ ಡ್ರಗ್‌ಕೇಸ್ ನಲ್ಲಿ ದಾಳಿಗೆ ಹೋಗಿದ್ದ ಸಿಸಿಬಿ ಪೊಲೀಸ್ರ ಮೇಲೆ ನೈಜೀರಿಯಾ ಪ್ರಜೆಗಳು ಗುಂಡಾವರ್ತನೆ ತೋರಿದ್ದಾರೆ. ಹೌದು.. ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ರಾತ್ರಿ ಸಿಸಿಬಿ ನಾರ್ಕೋಟಿಕ್ ವಿಂಗ್ ಪೊಲೀಸ್ರು ದಾಳಿ ನಡೆಸಿದ್ರು.

ಇದನ್ನೂ ಓದಿ:ರಾಜ್ಯಕ್ಕೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಪ್ರಜ್ವಲ್ ರೇವಣ್ಣ, ದೇವೇಗೌಡರು ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿಲ್ಲ ಏಕೆ: ಸಿ.ಎಂ.ಪ್ರಶ್ನೆ

ಇದೇ ವೇಳೆ ಹತ್ತಾರು ನೈಜೀರಿಯಾ ಪುಂಡರು ಸಿಸಿಬಿ ವಾಹನದ ಮೇಲೆ ಕಲ್ಲು ಹಾಗೂ ದೊಣ್ಣೆಯಿಂದ ಹೊಡೆದು ವಾಹನವನ್ನು ಜಕಂ‌ ಗೊಳೊಸಿ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ, ಸಿಬ್ಬಂದಿ ಹೆಚ್ ಸಿ ರಾಜು ಭಜಂತ್ರಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಮಾವಳ್ಳಿಪುರದ ಮನೆಯೊಂದರಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಸಿಸಿಬಿ ಪೊಲೀಸ್ರು ಮಾಹಿತಿ ಪಡೆದಿದ್ದರು. 

ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ನೈಜೀರಿಯಾ ಪ್ರಜೆಗಳಿದ್ದ ಮನೆ ಮೇಲೆ ದಾಳಿಗೆ ಮುಂದಾಗಿದ್ರು. ಈ ವೇಳೆ ನೈಜೀರಿಯಾ ಪ್ರಜೆಗಳು ಸಿಸಿಬಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣ ಸಿಸಿಬಿ ಪೊಲೀಸರು 112 ಗೆ ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ರಾಜಾನುಕುಂಟೆ ಹೊಯ್ಸಳ ಸಿಬ್ಬಂದಿ ಮೇಲೆ ಸಹ  ಹಲ್ಲೆ ಮಾಡಿ ನೈಜೀರಿಯ ಪ್ರಜೆಗಳು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ:ಭಾರತದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ : ಸಿಎಂ ಯೋಗಿ ಆದಿತ್ಯನಾಥ್

ಸದ್ಯ ಘಟನೆಯ ಸಿಸಿಟಿವಿ ದೃಶ್ಯ ಸೆರೆಯಾಗಿದ್ದು ಸಿಸಿಟಿವಿಯ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಘಟನೆ ಹಿನ್ನೆಲೆ ರಾಜನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳ ಆಸ್ಪತ್ರೆಗೆ ದಾಖಲಿಸಿದ್ದು, ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆರೋಗ್ಯ ವಿಚಾರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News