ಚಂದದ ನರ್ಸ್‍ಗಳು ನನಗೆ ಅಜ್ಜಾ ಅನ್ನುತ್ತಾರೆ!: ಶಾಸಕ ರಾಜು ಕಾಗೆ ಬೇಸರ

Congress MLA Raju Kage: ನಾವಂತೂ ಬದುಕಿರುವವರೆಗೆ ಬಿಜೆಪಿಗೆ ಹೋಗುವುದಿಲ್ಲ. ಸತ್ತ ಮೇಲೆ ನಮ್ಮ ಹೆಣಗಳು ಕೂಡ ಬಿಜೆಪಿ ಹೋಗುವುದಿಲ್ಲ ಅಂತಾ ಶಾಸಕ ರಾಜು ಕಾಗೆ ಹೇಳಿದ್ದಾರೆ.

Written by - Puttaraj K Alur | Last Updated : Oct 22, 2023, 07:59 PM IST
  • ಚಂದದ ನರ್ಸ್‍ಗಳು ನನಗೆ ಅಜ್ಜಾ ಎನ್ನುತ್ತಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಬೇಸರ
  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನಗೆ ನರ್ಸ್‍ಗಳು ಅಜ್ಜಾ ಎನ್ನುತ್ತಿದ್ದರು
  • ಚೆಂದ ಚೆಂದದ ಹುಡುಗಿಯರು ಅಜ್ಜಾ ಅನ್ನುವುದಕ್ಕೆ ನಾನು ಮಾನಸಿಕವಾಗಿದ್ದೆ ಎಂದ ಕಾಂಗ್ರೆಸ್ ಶಾಸಕ
ಚಂದದ ನರ್ಸ್‍ಗಳು ನನಗೆ ಅಜ್ಜಾ ಅನ್ನುತ್ತಾರೆ!: ಶಾಸಕ ರಾಜು ಕಾಗೆ ಬೇಸರ title=
ನರ್ಸ್‍ಗಳು ನನಗೆ ಅಜ್ಜಾ ಎನ್ನುತ್ತಿದ್ದರು!

ಚಿಕ್ಕೋಡಿ: ಚಂದದ ನರ್ಸ್‍ಗಳು ನನಗೆ ಅಜ್ಜಾ ಎನ್ನುತ್ತಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು.

‘ಕೆಲವು ಸ್ವಾರಸ್ಯಕರ ಘಟನೆಗಳನ್ನು ನೆನಪು ಮಾಡಿಕೊಂಡ ಕಾಗವಾಡದ ಶಾಸಕ ರಾಜು ಕಾಗೆ ಅವರು, ಚಂದದ ನರ್ಸ್‍ಗಳು ನನಗೆ ಅಜ್ಜಾ ಎನ್ನುತ್ತಿದ್ದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು’ ಅಂತಾ ಹೇಳಿದ್ದಾರೆ.  ‘ಕೆಲವು ವರ್ಷಗಳ ಹಿಂದೆ ನನಗೆ ಆಪರೇಷನ್ ಆಗಿತ್ತು, ಡಾಕ್ಟರ್‍ಗಳು ಏನ್ರೀ ಸರ್ ಆರಾಮಾ… ಅಂತಾ ಆರೋಗ್ಯ ವಿಚಾರಿಸುತ್ತಿದ್ದರು. ಆದರೆ ನನಗೆ ನರ್ಸ್‍ಗಳನ್ನು ನೋಡಿದ್ರೆ ತುಂಬಾ ನೋವು ಆಗಿತ್ತು. ಚಂದ ಚಂದ ಹುಡುಗಿಯರು ನನಗೆ ಅಜ್ಜಾ ಅನ್ನುತ್ತಿದ್ದರು. ಅಜ್ಜಾ ಅಂತಾ ಕರೆದಿದ್ದಕ್ಕೆ ನಾನು ಮಾನಸಿಕವಾಗಿದ್ದೆ ಎಂದು ರಾಜು ಕಾಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೀ ಕನ್ನಡ ನ್ಯೂಸ್ ಈ ದಿನದ ಪ್ರಮುಖ ಸುದ್ದಿಗಳು

ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ!

‘ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ರಮೇಶ್ ಜಾರಕಿಹೊಳಿ ಯಾವ ಉದ್ದೇಶಕ್ಕೆ ಭೇಟಿಯಾಗಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಾವಂತೂ ಬದುಕಿರುವವರೆಗೆ ಬಿಜೆಪಿಗೆ ಹೋಗುವುದಿಲ್ಲ. ಸತ್ತ ಮೇಲೆ ನಮ್ಮ ಹೆಣಗಳು ಕೂಡ ಬಿಜೆಪಿ ಹೋಗುವುದಿಲ್ಲ’ ಅಂತಾ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ವಿಚಾರ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶತ್ರು ಅಲ್ಲ, ಮಿತ್ರನೂ ಅಲ್ಲ. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ನಮ್ಮನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದೆ. ಒಂದು ಮನೆ ಎಂದರೆ ಕೆಮ್ಮು, ನೆಗಡಿ ಸಹಜ. ಅದನ್ನು ನಾವು ಸರಿ ಮಾಡಿಕೊಳ್ಳುತ್ತೇವೆ. ಜಿಲ್ಲಾ ಕಾಂಗ್ರೆಸ್‌ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಅಭ್ಯರ್ಥಿ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News