ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಅಮಿತ್ ಶಾ

ಕುಕ್ಕೆ ಸುಬ್ರಹ್ಮಣ್ಯದಿಂದ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸುವ ಅಮಿತ್ ಶಾ.

Last Updated : Feb 20, 2018, 12:06 PM IST
ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಅಮಿತ್ ಶಾ title=
Pic: Twitter @AmitShah

ದಕ್ಷಿಣ ಕನ್ನಡ: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿದ್ದಾರೆ. ಮಂಗಳವಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯವಾದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದರು. ದೇವಾಲಯದಲ್ಲಿ ಅಮಿತ್ ಶಾ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಮವಾರ ರಾತ್ರಿ 10 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಾದ ಬಿಳಿ ಪಂಚೆ, ಶಲ್ಯ ತೊಟ್ಟು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ಆ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಶಾ ಅವರಿಗೆ ಸಾಥ್ ನೀಡಿದರು.

ಅಮಿತ್ ಶಾರ ಇಂದಿನ ಕಾರ್ಯಕಲಾಪ
* ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ನಂತರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ನಡೆಯಲಿರುವ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಅಮಿತ್ ಶಾ ಅಲ್ಲಿಂದ  ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸುವರು.
* ನಂತರ ಬಜರಂಗ ದಳ ಸಹ ಕೆಲಸಗಾರ ದೀಪಕ್ ರಾವ್ ಕುಟುಂಬವನ್ನು ಶಾ ಭೇಟಿಯಾಗಲಿದ್ದಾರೆ. ದೀಪಕ್ ರಾವ್ ಜನವರಿ ಮೊದಲ ವಾರದಲ್ಲಿ ಕೊಲೆಯಾದನು. 
* ಮೀನುಗಾರರೊಂದಿಗೆ ಅಮಿತ್ ಶಾ ಭೇಟಿ. 
* ಅಮಿತ್ ಶಾ ಅಂಕೊಲಾ ಮತ್ತು ಕುಶಾಲಂಗನರ್ದಿಂದ ಸುರತ್ಕಲ್ವರೆಗೆ ಹಾದು ಹೋಗಲಿದ್ದು, ಬಿಜೆಪಿಯ ವಿವಿಧ ರಂಗಗಳ ಜೊತೆ ಸಂವಹನ ನಡೆಸಲಿದ್ದಾರೆ.

Trending News