ರಾಜ್ಯದಲ್ಲಿ 60 ಯೋಜನೆಯ ಒಟ್ಟು ₹2465 ಕೋಟಿ ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ₹2465.94 ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಶನಿವಾರ ಸಂಜೆ ಕರ್ನಾಟಕ ಉದ್ಯೋಗ ಮಿತ್ರ ಭವನದಲ್ಲಿ ನಡೆದ 131 ನೇ ರಾಜ್ಯ ಮಟ್ಟದ ಏಕಗವಾಕ್ಷಿ‌ ಅನುಮೋದನಾ ಸಮಿತಿ ‌ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 

Written by - Prashobh Devanahalli | Edited by - Chetana Devarmani | Last Updated : May 1, 2022, 02:23 PM IST
  • 131 ನೇ ರಾಜ್ಯ ಮಟ್ಟದ ಏಕಗವಾಕ್ಷಿ‌ ಅನುಮೋದನಾ ಸಮಿತಿ ‌ಸಭೆ
  • ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆ
  • ₹2465 ಕೋಟಿ ಬಂಡವಾಳ ಹೂಡಿಕೆಯಿಂದ ಒಟ್ಟು 8575 ಉದ್ಯೋಗಗಳು ಸೃಷ್ಟಿ
  • ಹೂಡಿಕೆದಾರರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಸೌಲಭ್ಯ ಒದಗಿಸಲು ಬದ್ದ
ರಾಜ್ಯದಲ್ಲಿ 60 ಯೋಜನೆಯ ಒಟ್ಟು ₹2465 ಕೋಟಿ ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ   title=
ಮುರುಗೇಶ್ ನಿರಾಣಿ

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ₹2465.94 ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಶನಿವಾರ ಸಂಜೆ ಕರ್ನಾಟಕ ಉದ್ಯೋಗ ಮಿತ್ರ ಭವನದಲ್ಲಿ ನಡೆದ 131 ನೇ ರಾಜ್ಯ ಮಟ್ಟದ ಏಕಗವಾಕ್ಷಿ‌ ಅನುಮೋದನಾ ಸಮಿತಿ ‌ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ  ಶಿವಶಂಕರ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಭಾಗವಹಿಸಿದ್ದರು. ಒಟ್ಟು 60 ಯೋಜನೆಗಳಿಂದ ₹2465.94 ಕೋಟಿ ಬಂಡವಾಳ ‌ಹೂಡಿಕೆಯಾಗಲಿದ್ದು, ಇದರಿಂದ 8,575 ಉದ್ಯೋಗಗಳು ಸೃಜನೆಯಾಗಲಿವೆ.

ಇದನ್ನೂ ಓದಿ: ಉರ್ದು ಭಾಷೆ ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ್ದೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಇದರಲ್ಲಿ ₹50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 10 ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅಂದಾಜು ₹1522.33 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 3,190 ಜನರಿಗೆ ಉದ್ಯೋಗ ಲಭಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ‌ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

₹15 ಕೋಟೆಯಿಂದ ₹50 ಕೋಟೆಯೊಳಗಿನ 49 ಯೋಜನೆಗೆ ಇಲಾಖೆ ಒಪ್ಪಿಗೆ ಕೊಟ್ಡಿದೆ. ಒಟ್ಟು ‌₹938.61 ಕೋಟಿ ಹೂಡಿಕೆಯಾಗಲಿದ್ದು, 5,385 ಜನರಿಗೆ ಉದ್ಯೋಗ ಲಭಿಸಲಿವೆ ಎಂದು ತಿಳಿಸಿದರು. ಹೆಚ್ಚುವರಿ ಬಂಡವಾಳ ಹೂಡಿಕೆಯ 1 ಯೋಜನೆಗೆ ಸಮಿತಿಯು ಅನುಮೋದನೆ ನೀಡಿದ್ದು, ₹5 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

ರಾಜ್ಯದಲ್ಲಿ ಬಂಡವಾಳ  ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ, ನೀರು ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಾಲಮಿತಿಯೊಳಗೆ ಒಗದಿಸಲು ಇಲಾಖೆಯು ಬದ್ದವಾಗಿದೆ ಎಂದು ‌ನಿರಾಣಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮೇ 3ರಂದು ನೃಪತುಂಗ ವಿವಿ ಉದ್ಘಾಟನೆ: ಕೇಂದ್ರ ಸಚಿವ ಅಮಿತ್ ಶಾ ಆಗಮನ

ಕರ್ನಾಟಕವನ್ನು ಕೈಗಾರಿಕಾ ವಲಯ ಹಾಗೂ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ನಿರಾಣಿ ಅವರು ತಿಳಿಸಿದರು.

ಹೂಡಿಕೆ ಮಾಡುವ ಯೋಜನೆಗಳು:

  • ಸಿದ್ದಾರ್ಥ ಸೌಹಾರ್ದ ಸಹಕಾರಿ ನಿಯಮಿತ ₹361.15 ಕೋಟಿ ಹೂಡಿಕೆ, 300 ಉದ್ಯೋಗ ಸೃಷ್ಟಿ
  • ಗುಡ್ ರಿಚ್ ಏರೋಸ್ಪೇಸ್ ಸರ್ವಿಸಸ್: ಪ್ರೆ.ಲಿ. ₹255.45 ಕೋಟಿ ಹೂಡಿಕೆ, 1743 ಉದ್ಯೋಗ ‌ಸೃಜನೆ
  • ಜಿ.ಬಿ.ಪ್ರೆ.ಲಿ. ₹235 ಕೋಟಿ ‌ಹೂಡಿಕೆ, 200 ಉದ್ಯೋಗ ಸೃಷ್ಟಿ
  • ಶ್ರೀ ಸಿಮೆಂಟ್ ಲಿ. ₹156.17 ಕೋಟಿ ‌ಹೂಡಿಕೆ, 54 ಉದ್ಯೋಗ
  • ಡಿಪ್ಯಾಕ್ ವೆಂಚರ್ಚಸ್ ಎಲ್ ಎಲ್ ಪಿ ₹112 ಕೋಟಿ ಹೂಡಿಕೆ, 100 ಉದ್ಯೋಗ ‌
  • ದಾವಣಗೆರೆ  ಶುಗರ್ಸ ಕಂಪನಿ ₹99.31 ಕೋಟಿ ಹೂಡಿಕೆ, 77 ಉದ್ಯೋಗ
  • ಟೆಮಿಕೊ ಮೋಟಾರ್ ಇಂಡಿಯಾ ಪ್ರೆ.ಲಿ. ₹88 ಕೋಟಿ , 75 ಉದ್ಯೋಗ
  • ಜಯಶ್ರೀ ಎಥನಾಲ್  ಡಿಸ್ಟೀಲೇಷನ್ ಪ್ರೆ.ಲಿ. ₹80.25. ಕೋಟಿ ಹೂ., 116 ಉದ್ಯೋಗ
  • ಸ್ವಾಜಿ ನ್ಯೂಟ್ರಿಷನಲ್ಸ್ ಪ್ರೆ.ಲಿ. ₹51 ಕೋಟಿ 510 ಉದ್ಯೋಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News