ಮೋದಿ ಹೋದಲೆಲ್ಲ ಬಿಜೆಪಿ ಗೆಲ್ಲುತ್ತೆ ಅನ್ನೋದನ್ನ ಉಲ್ಟಾ ಮಾಡಿದ ಉತ್ತರ ಕನ್ನಡ ಫಲಿತಾಂಶ 

ಡಬ್ಬಲ್ ಎಂಜೀನ್ ಸರಕಾರ ಇದ್ರೇ ರಾಜ್ಯ ಅಭಿವೃದ್ಧಿ ಆಗುತ್ತೆ ಅಂತ ಮತದಾರರ ಮುಂದೆ ಬೊಬ್ಬೆ ಹೊಡೆದ ಬಿಜೆಪಿ ನಾಯಕರಿಗೆ ಮತದಾರ ಮಾತ್ರ ಮಣೆ ಹಾಕಲಿಲ್ಲ. ಡಬ್ಬಲ್ ಎಂಜೀನ್ ಸರಕಾರ ಉಳಿಸಿಕೊಳ್ಳಲು ರಾಜ್ಯದ ವಿವಿದೆಡೆ ಮೋದಿಯನ್ನ ಕರೆದು ಪ್ರಚಾರ ಮಾಡಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮೋದಿ ಕರೆಸಿ ಪ್ರಚಾರ ನಡೆಸಲಾಗಿತ್ತು. ಮೋದಿ ಪ್ರಚಾರ ಸಭೆ ನಡೆಸಿದ್ದ ಕಾರವಾರ ವಿಧಾನಸಭಾ ಕ್ಷೇತ್ರದಲ್ಲೇ ಈ ಬಾರಿ ಬಿಜೆಪಿ ಅಭ್ಯರ್ಥಿ ಮಖಾಡೆ ಮಲಗಿದ್ದಾರೆ. 

Written by - Zee Kannada News Desk | Last Updated : May 13, 2023, 09:42 PM IST
  • ಇನ್ನು ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಬಿಜೆಪಿಯ ಭದ್ರ ಕೋಟೆಯನ್ನು ಕಾಂಗ್ರೆಸ್ ಈ ಬಾರಿ ಬೇಧಿಸುವ ಮೂಲಕ ಬಾರಿ ಶಾಕ್ ನೀಡಿದೆ.
  • ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಬಾಮೈದ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಕಾಗೇರಿ ಅವರನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
  • ಇನ್ನು ಡಬ್ಬಲ್ ಎಂಜೀನ್ ಸರಕಾರದ ಆಡಳಿತ ವಿರೋಧಿ ನೀತಿಗೆ ಮತದಾರ ಕಾಂಗ್ರೆಸ್ ಗೆ ಮಣೆ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕರಂತೂ ಫುಲ್ ಖುಷ್ ಆಗಿದ್ದಾರೆ.
ಮೋದಿ ಹೋದಲೆಲ್ಲ ಬಿಜೆಪಿ ಗೆಲ್ಲುತ್ತೆ ಅನ್ನೋದನ್ನ ಉಲ್ಟಾ ಮಾಡಿದ ಉತ್ತರ ಕನ್ನಡ ಫಲಿತಾಂಶ  title=
file photo

ಬೆಂಗಳೂರು: ಡಬ್ಬಲ್ ಎಂಜೀನ್ ಸರಕಾರ ಇದ್ರೇ ರಾಜ್ಯ ಅಭಿವೃದ್ಧಿ ಆಗುತ್ತೆ ಅಂತ ಮತದಾರರ ಮುಂದೆ ಬೊಬ್ಬೆ ಹೊಡೆದ ಬಿಜೆಪಿ ನಾಯಕರಿಗೆ ಮತದಾರ ಮಾತ್ರ ಮಣೆ ಹಾಕಲಿಲ್ಲ. ಡಬ್ಬಲ್ ಎಂಜೀನ್ ಸರಕಾರ ಉಳಿಸಿಕೊಳ್ಳಲು ರಾಜ್ಯದ ವಿವಿದೆಡೆ ಮೋದಿಯನ್ನ ಕರೆದು ಪ್ರಚಾರ ಮಾಡಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮೋದಿ ಕರೆಸಿ ಪ್ರಚಾರ ನಡೆಸಲಾಗಿತ್ತು. ಮೋದಿ ಪ್ರಚಾರ ಸಭೆ ನಡೆಸಿದ್ದ ಕಾರವಾರ ವಿಧಾನಸಭಾ ಕ್ಷೇತ್ರದಲ್ಲೇ ಈ ಬಾರಿ ಬಿಜೆಪಿ ಅಭ್ಯರ್ಥಿ ಮಖಾಡೆ ಮಲಗಿದ್ದಾರೆ. 

ಇದನ್ನೂ ಓದಿ: Hubli-Dharwad Assembly Election Result 2023: ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಗೆಲುವು

ಉಳಿದಂತೆ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಮೂರು ಕ್ಷೇತ್ರಗಳ ಪೈಕಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ವಿರುದ್ಧ ಬಿಜೆಪಿಯ ದಿನಕರ ಶೆಟ್ಟಿ ಕೇವಲ 675 ಮತ ಪಡೆದು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಇನ್ನು ಶಿರಸಿ ಕ್ಷೇತ್ರದಲ್ಲಿ ಸೋಲರಿಯದ ಸರದಾರ ಎಂದೇ ಬಿಂಬಿತವಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ಧ ಸೋಲು ಕಂಡಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಪಾಟೀಲ್ ವಿರುದ್ಧದ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಹಾಗಂತ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರಿಗೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಟಪ್ ಪೈಟ್ ಕೊಟ್ಟರಾದ್ರೂ ಗೆಲ್ಲುವ ಹಂತಕ್ಕೆ ಬಂದು ಸೋತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಐದು ಕ್ಷೇತ್ರವನ್ನು ಗೆದ್ದು ಬೀಗಿತ್ತು. ಆದ್ರೇ ಈ ಬಾರಿ ಕುಮಟಾ ಮತ್ತು ಯಲ್ಲಾಪುರ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಿ ಪಕ್ಷದ ಮಾನ ಉಳಿಸಿದ್ದಾರೆ.

ಇದನ್ನೂ ಓದಿ: Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು

ಇನ್ನು ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಬಿಜೆಪಿಯ ಭದ್ರ ಕೋಟೆಯನ್ನು ಕಾಂಗ್ರೆಸ್ ಈ ಬಾರಿ ಬೇಧಿಸುವ ಮೂಲಕ ಬಾರಿ ಶಾಕ್ ನೀಡಿದೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಬಾಮೈದ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಕಾಗೇರಿ ಅವರನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ಡಬ್ಬಲ್ ಎಂಜೀನ್ ಸರಕಾರದ ಆಡಳಿತ ವಿರೋಧಿ ನೀತಿಗೆ ಮತದಾರ ಕಾಂಗ್ರೆಸ್ ಗೆ ಮಣೆ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕರಂತೂ ಫುಲ್ ಖುಷ್ ಆಗಿದ್ದಾರೆ.

ಒಟ್ನಳ್ಳಿ ಉತ್ತರಕನ್ನಡ ಜಿಲ್ಲೆಯಲ್ಲಿ ಮೋದಿಗೆ ಮತದಾರ ಮಾತ್ರ ಮಣೆ ಹಾಕಲಿಲ್ಲ.ಮೋದಿ ಹೆಸರಿನಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದ ಬಿಜೆಪಿ ನಾಯಕರಿಗಂತೂ ಫಲಿತಾಂಶ ನಿರಾಸೆ ಮೂಡಿಸಿದಂತೂ ಸತ್ಯ. ಸೋಲಿನ ಪರಾಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯತೆ ಬಿಜೆಪಿ ಪಾಲಿಗೆ ಒದಗಿ ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News