ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು

Karnataka CM: ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನ ಗಳಿಸುವ ಮುಖಾಂತರ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಟ್ಕಾಣಿ ಹಿಡಿಯೋದು ಕನ್ಫರ್ಮ್ ಆಗಿದೆ. ಇನ್ನೇನು ಅಧಿಕಾರ ಹಿಡಿಯೋ ಭರದಲ್ಲಿರುವ ನಾಯಕರು ಒಂದು ಕಡೆಯಾದ್ರೆ, ನಮ್ಮ ನಾಯಕ ಸಿಎಂ ಆಗ್ಬೇಕು ಅನ್ನೋ ಕಾರ್ಯಕರ್ತರ ಕೂಗು ಜೋರಾಗಿ ಕೇಳಿ ಬರುತ್ತಿದೆ. 

Written by - Yashaswini V | Last Updated : May 15, 2023, 04:20 PM IST
  • ಡಿಕೆಶಿ ಸಿಎಂ ಆಗಲಿ ಎಂದು ನೆಲಮಂಗಲದ ವಾದಕುಂಟೆ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು
  • 1001 ತೆಂಗಿನಕಾಯಿ ಹೀಡುಗಾಯಿ ಹೊಡೆದ ಅಭಿಮಾನಿಗಳು
  • ಡಿಕೆ ಶಿವಕುಮಾರ್‌ಗೆ ಜೈಕಾರ ಹಾಕಿ ಕಾಯಿ ಹೊಡೆದ ಕಾರ್ಯಕರ್ತರು
  • ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆ! ಸಿಎಂ ಅಂದ್ರೆ ಸಿಎಂ ಡಿಕೆ ಶಿವಕುಮಾರ್ ಸಿಎಂ ಎಂದು ಘೋಷಣೆ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು  title=

Karnataka Chief Minister: ಇಡೀ ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಹೊರಬಿದ್ದಿದ್ದು, ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷ ಕ್ಲಿಯರ್ ಮೆಜಾರಿಟಿಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಫಲಿತಾಂಶ ಹೊರಬಿದ್ದು ಎರಡು ದಿನವಾದರೂ ಕೂಡ ಸಿಎಂ ಗದ್ದುಗೆ ಏರುವವರ್ಯಾರು ಎಂಬ ವಿಷಯ ಮಾತ್ರ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಇದೀಗ ಸಿಎಂ ರೇಸ್ ಟೆಂಷನ್ ಶುರುವಾಗಿದೆ. ಇದೀಗ ರಾಜ್ಯ ನಾಯಕರ ಬೆಂಬಲಿಗರು ನಮ್ಮ ನಾಯಕ ಸಿಎಂ ಆಗ್ಲಿ ಅಂತಾ ದೇವರ ಮೊರೆ ಹೋಗಿದ್ದಾರೆ. 

ಹೌದು, ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನ ಗಳಿಸುವ ಮುಖಾಂತರ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಟ್ಕಾಣಿ ಹಿಡಿಯೋದು ಕನ್ಫರ್ಮ್ ಆಗಿದೆ. ಇನ್ನೇನು ಅಧಿಕಾರ ಹಿಡಿಯೋ ಭರದಲ್ಲಿರುವ ನಾಯಕರು ಒಂದು ಕಡೆಯಾದ್ರೆ, ನಮ್ಮ ನಾಯಕ ಸಿಎಂ ಆಗ್ಬೇಕು ಅನ್ನೋ ಕಾರ್ಯಕರ್ತರ ಕೂಗು ಜೋರಾಗಿ ಕೇಳಿ ಬರುತ್ತಿದೆ. 

ಹೀಗಿರುವಾಗ ಡಿಕೆಶಿ ಅಭಿಮಾನಿಗಳು ನಮ್ಮ ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಒಂದು ಸಾವಿರದ ಒಂದು ಈಡುಗಾಯಿ ಹೊಡೆದು ದೇವರ ಮೊರೆ ಹೋದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ವಾದ ಕುಂಟೆ ಗ್ರಾಮದಲ್ಲಿ ನಡೆದಿದೆ. 

ಇದನ್ನೂ ಓದಿ- ಪುಟ್ಟರಾಜು ಬಹಳ ಬಲಿಷ್ಠ ರಾಜಕಾರಣಿ, ಅವರ ಸಲಹೆಯನ್ನು 100% ಸ್ವೀಕರಿಸುತ್ತೇನೆ: ನೂತನ ಶಾಸಕ ದರ್ಶನ್

ಡಿಕೆಶಿ ಬೆಂಬಲಿಗರು ಇಂದು ವಾದಕುಂಟೆ ಗ್ರಾಮದ ಪುರಾಣ ಪ್ರಸಿದ್ದ ಶ್ರೀರಾಮ ಮಂದಿರದಲ್ಲಿ ಮುಂಜಾನೆಯಿಂದ ವಿಶೇಷ ಪೂಜೆ ನೆರವೇರಿಸುವ ಮುಖಾಂತರ ದೇವರ ಮೊರೆ ಹೋದರು. 

ರಾಜ್ಯದ ಒಕ್ಕಲಿಗ ಸಮುದಾಯ ಈ ಭಾರಿ ಡಿಕೆ ಶಿವಕುಮಾರ್ ಅವರಿಗೆ ಬೆಂಬಲಿ ನೀಡಿದೆ. ಒಮ್ಮೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಸಂಪೂರ್ಣ ಒಕ್ಕಲಿಗ ಸಮುದಾಯ  ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದು ಡಿಕೆ ಶಿವಕುಮಾರ್ ಸಹ ಕಾಂಗ್ರೆಸ್ ಪಕ್ಷ ಬಹುಮತ ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಡಿಕೆ ಶಿವಕುನಾರ್ ಅವರನ್ನ ಸಿಎಂ ಮಾಡಲಿ ಎಂದು ಕಾರ್ಯಕರ್ತರು ಒಕ್ಕೊರಲ ಧ್ವನಿ ಮೊಳಗಿಸಿದರು. 

ಇದನ್ನೂ ಓದಿ- ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ: ನಿಮ್ಮ ಜಿಲ್ಲೆಯ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಒಟ್ಟಾರೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ನಾಯಕರೇ ಸಿಎಂ ಆಗಲಿ ಎಂದು ದುಂಬಾಲು ಬಿದ್ದಿದ್ರೆ, ಇತ್ತ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಗಾಧಿಗಾಗಿ ದೆಹಲಿ ಬಾಗಿಲು ತಟ್ಟಿದ್ದು ರಾಜ್ಯದ ಮುಂದಿನ ಅಧಿನಾಯಕ ಯಾರಾಗ್ತಾರೆ ಅನ್ನೋದು ಮಾತ್ರ ಇನ್ನೂ ಕುತೂಹಲವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News