ವಿದ್ಯಾರ್ಥಿಗೆ ಆನ್‍ಲೈನ್ ಕೋರ್ಸ್ ನಡೆಸದೆ ಸೇವಾ ನ್ಯೂನ್ಯತೆ ಎಸಗಿದ ಕಂಪನಿಗೆ ದಂಡ ವಿಧಿಸಿದ ಕೋರ್ಟ್ 

ದೂರುದಾರರು ಎಲ್ಲ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದಿ:03/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Written by - Manjunath N | Last Updated : Sep 27, 2024, 05:53 PM IST
  • ಕೋರ್ಸನ್ನು ರದ್ದು ಪಡಿಸುವುದಾಗಿ ಹೇಳಿದಾಗ ದೂರುದಾರರು ರೂ.6,882/-ನ್ನು ಪಾವತಿಸಿರುತ್ತಾರೆ.
  • ಆದರೆ ಎದುರುದಾರರು ಕೋರ್ಸನ್ನು ರದ್ದುಗೊಳಿಸಿ ಆದರೆ ದೂರುದಾರರು ಪಾವತಿಸಿದ ಕಂತಿನ ಹಣವನ್ನು ಅವರಿಗೆ ವರ್ಗಾಯಿಸದೇ ಸೇವಾ ನ್ಯೂನ್ಯತೆ ಎಸಗಿದ್ದಾರೆ
  • ದಿ:03/11/2023 ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿದ್ಯಾರ್ಥಿಗೆ ಆನ್‍ಲೈನ್ ಕೋರ್ಸ್ ನಡೆಸದೆ ಸೇವಾ ನ್ಯೂನ್ಯತೆ ಎಸಗಿದ ಕಂಪನಿಗೆ ದಂಡ ವಿಧಿಸಿದ ಕೋರ್ಟ್  title=
ಸಾಂಧರ್ಭಿಕ ಚಿತ್ರ

ಧಾರವಾಡ: ಶೆಟ್ಟರ ಕಾಲನಿಯ ನಿವಾಸಿ ಕುಮಾರ ಮುತಂಜಿ ಎಚ್. ಸಿ. ಎಂಬುವವರು 1ನೇ ಎದುರುದಾರರ ಬಳಿ ಡಿಪ್ಲೋಮಾ ಕೋರ್ಸ ಆದ ಡಿಜಿಟಲ್ ಮಾರ್ಕೆಟಿಂಗ್ ಮಾಸ್ಟರ್ ಪ್ರೋಗ್ರಾಮ್ ಮತ್ತು ಪಿ.ಜಿ. ಕೋರ್ಸಗಳನ್ನು ಅವನ್ಸೆ ಪೈನಾನ್ಸ್ ಮತ್ತು ಆದಿತ್ಯ ಬಿರ್ಲಾ ಪೈನಾನ್ಸ್ ಬಳಿ ಲೋನ ಪಡೆದು ಕೋರ್ಸಿನ ಶುಲ್ಕವನ್ನು ಪಾವತಿಸಿದ್ದರು.ಆದರೆ 1ನೇ ಎದುರುದಾರರು ಕೋರ್ಸನ್ನು ನಡೆಸದೇ ಇದ್ದ ಕಾರಣ ದೂರುದಾರರು ಕೋರ್ಸನ್ನು ರದ್ದು ಪಡಿಸಲು ಎದುರುದಾರರಿಗೆ ವಿನಂತಿಸಿರುತ್ತಾರೆ. ಆದರೆ ಎದುರುದಾರರು ಅವರ ವಿನಂತಿಯನ್ನು ಕಡೆಗಣಿಸಿ ಮೊದಲ ತಿಂಗಳ ಕಂತನ್ನು ಪಾವತಿಸಿದರೆ ಮಾತ್ರ ಕೋರ್ಸನ್ನು ರದ್ದು ಪಡಿಸುವುದಾಗಿ ಹೇಳಿದಾಗ ದೂರುದಾರರು ರೂ.6,882/-ನ್ನು ಪಾವತಿಸಿರುತ್ತಾರೆ. ಆದರೆ ಎದುರುದಾರರು ಕೋರ್ಸನ್ನು ರದ್ದುಗೊಳಿಸಿ ಆದರೆ ದೂರುದಾರರು ಪಾವತಿಸಿದ ಕಂತಿನ ಹಣವನ್ನು ಅವರಿಗೆ ವರ್ಗಾಯಿಸದೇ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ದೂರುದಾರರು ಎಲ್ಲ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದಿ:03/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು.ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರು ಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ದೂರುದಾರರು ತಮ್ಮ ಅಧ್ಯಯನಕ್ಕೆ ಆನ್‍ಲೈನ ಮುಖಾಂತರ ಡಿಜಿಟಲ್ ಮಾರ್ಕೇಟಿಂಗ್ ಮತ್ತು ಪಿ.ಜಿ.ಕೋರ್ಸಗೆ ಲೋನ ಪಡೆದಿರುವುದು ದಾಖಲೆಗಳ ಮುಖಾಂತರ ಕಂಡು ಬಂದಿರುತ್ತದೆ. ಮತ್ತು 1ನೇ ಎದುರುದಾರರು ಕೋರ್ಸನ್ನು ಪ್ರಾರಂಭ ಮಾಡದೇ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ.

ಅಲ್ಲದೇ ಕೋರ್ಸಗೆ ಲೋನ್ ನೀಡಿದ ಎದುರುದಾರರಿಬ್ಬರೂ ದೂರುದಾರರು ವಿನಂತಿಯ ಮೇರೆಗೆ ಎರಡೂ ಕೋರ್ಸಗಳನ್ನು ರದ್ದುಪಡಿಸಿ ತಾವು ಕೊಟ್ಟಂತಹ ಹಣವನ್ನು 1ನೇ ಎದುರುದಾರರಿಂದ ಮರಳಿ ಪಡೆದಿರುತ್ತಾರೆ. ಆದರೆ ದೂರುದಾರರು ಕೋರ್ಸನ್ನು ಪಡೆಯದೇ ಕಂತಿನ ಹಣವನ್ನು 1ನೇ ಎದುರುದಾರರು ಮರಳಿ ಪಾವತಿಸಿರುವುದಿಲ್ಲದಿರುವುದು ಸೇವಾ ನ್ಯೂನ್ಯತೆ ಅಂತಾ ಪರಿಗಣಿಸಿ ಆಯೋಗ ದೂರುದಾರರಿಂದ ಪಡೆದ ಕಂತಿನ ಹಣ ರೂ.6,882/- ಮತ್ತು ರೂ.5,308/- ಗಳನ್ನು ಪಾವತಿಸಿದ ದಿನಾಂಕದಿಂದ ಶೇ10% ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯವಾಗುವವರೆಗೆ ಕೊಡುವಂತೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗೆ ರೂ. 50,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/- ಗಳನ್ನು ಕೊಡುವಂತೆ 1ನೇ ಎದುರುದಾರರಾದ ಬೆಂಗಳೂರಿನ ಸಿಂಪ್ಲಿ ಲರ್ನ ಸಲ್ಯೂಷೆನ್‍ಗೆ ಆಯೋಗ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News