ಜನವರಿ 22 ರಂದು ತಾಯಂದಿರಾಗಲು ಮಹಿಳೆಯರು ಪೈಪೋಟಿ..!

January 22 Ayodhya: ಜನವರಿ 22 ರಂದು ಮಾತ್ರ ತಮ್ಮ ಶಸ್ತ್ರಚಿಕಿತ್ಸೆಯನ್ನು ಮಾಡುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ. ಈ ದಿನದಂದು ತನ್ನ ಮುಂಬರುವ ಮಗುವನ್ನು ಸ್ವಾಗತಿಸಲು ಗರ್ಭಿಣೀ ಮಹಿಳೆಯರು ಬಯಸುತ್ತಿದ್ದಾರೆ.

Written by - Zee Kannada News Desk | Last Updated : Jan 12, 2024, 12:30 PM IST
  • ಜನವರಿ 22 ರಂದು ಮಾತ್ರ ತಮ್ಮ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರಲ್ಲಿ ಮನವಿ.
  • ರಾಮ ಮಂದಿರದ ಶಂಕುಸ್ಥಾಪನೆಗೆ ಬಹುತೇಕ ಎಲ್ಲ ಸಿದ್ಧತೆಗಳು ನಡೆದಿವೆ.
  • ರಾಮಲಲ್ಲಾ ಪ್ರತಿಷ್ಠಾಪನೆಯಂದು ಹೊಸ ಅತಿಥಿಯ ಕೂಗು ಮನೆಯಲ್ಲಿ ಕೇಳಬೇಕೆಂದು ಗರ್ಭಿಣಿಯರು ಬಯಸುತ್ತಿದ್ದಾರೆ.
 ಜನವರಿ 22 ರಂದು ತಾಯಂದಿರಾಗಲು ಮಹಿಳೆಯರು ಪೈಪೋಟಿ..! title=

Uttar Pradesh: ಜನವರಿ 22 ಇಡೀ ಭಾರತಕ್ಕೆ ಬಹಳ ವಿಶೇಷವಾದ ದಿನವಾಗಿದೆ. ಬಹಳ ವರ್ಷಗಳ ಕಾದ ನಂತರ ರಾಮನು ಅಂತಿಮವಾಗಿ ಅಯೋಧ್ಯೆಗೆ ಆಗಮಿಸುತ್ತಾನೆ. ರಾಮ ಮಂದಿರದ ಶಂಕು ಸ್ಥಾಪನೆಗೆ ಬಹುತೇಕ ಎಲ್ಲ ಸಿದ್ಧತೆಗಳು ನಡೆದಿವೆ. ಜನವರಿ 22 ಯುಪಿಯ ಲಖಿಂಪುರದಲ್ಲಿ ವೈದ್ಯರ ಸಮಸ್ಯೆಗಳನ್ನು ಹೆಚ್ಚಿಸಿದೆ. ರಾಮಮಂದಿರದ ಪ್ರತಿಷ್ಠಾಪನೆಯಿಂದ ವೈದ್ಯರು ಯಾವ ರೀತಿಯ ತೊಂದರೆಗಳನ್ನು ಎದುರಿಸಬಹುದು ಎಂದು ಈಗ ನೀವು ಯೋಚಿಸುತ್ತಿರಬೇಕು?

ಯುಪಿಯ ಲಖಿಂಪುರದಲ್ಲಿ ಅನೇಕ ವೈದ್ಯರು ಈ ಬಗ್ಗೆ ಮಾತನಾಡಿದರು. ವಾಸ್ತವವಾಗಿ, ಇಲ್ಲಿನ ಅನೇಕ ಗರ್ಭಿಣಿಯರು ಜನವರಿ 22 ರಂದು ತಮ್ಮ ಹೆರಿಗೆ ಮಾಡುವಂತೆ ವೈದ್ಯರಲ್ಲಿ ವಿನಂತಿಸುತ್ತಿದ್ದಾರೆ. ಹೌದು, ಜನವರಿ ಕೊನೆಯ ವಾರದಲ್ಲಿ ಕೊನೆಯ ದಿನಾಂಕವಾಗಿರುವ ಮಹಿಳೆಯರು, ಜನವರಿ 22 ರಂದು ಮಾತ್ರ ತಮ್ಮ ಶಸ್ತ್ರಚಿಕಿತ್ಸೆಯನ್ನು ಮಾಡುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ. ಈ ದಿನದಂದು ತನ್ನ ಮುಂಬರುವ ಮಗುವನ್ನು ಸ್ವಾಗತಿಸಲು ಗರ್ಭಿಣೀ ಮಹಿಳೆಯರು ಬಯಸುತ್ತಿದ್ದಾರೆ.

ಇದನ್ನೂ ಓದಿ:  Ayodhya Ram Mandir: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಇಲ್ಲಿದೆ ಬಿಗ್ ಅಪ್ಡೇಟ್

ಅಯೋಧ್ಯಾ ಧಾಮದಲ್ಲಿ ಪ್ರತಿಷ್ಠಾಪನೆಯ ದಿನವಾದ ಜನವರಿ 22 ರಂದು ಹೊಸ ಅತಿಥಿಯ ಕೂಗು ತಮ್ಮ ಮನೆಯಲ್ಲಿ ಪ್ರತಿಧ್ವನಿಸಬೇಕೆಂದು ಬಯಸುವ ಗರ್ಭಿಣಿಯರು ಸಿಸೇರಿಯನ್ ಮಾಡಲು ಅನೇಕ ಜಿಲ್ಲೆಯ ಮಹಿಳೆಯರು ಸಿದ್ಧರಾಗಿದ್ದಾರೆ. ಇದಕ್ಕಾಗಿ ಜಿಲ್ಲಾಸ್ಪತ್ರೆಗಳಿಂದ ಹಿಡಿದು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಮಹಿಳೆಯರು ಸಂಪರ್ಕದಲ್ಲಿಯೂ ಇದ್ದಾರೆ. ಇವರಲ್ಲಿ, 20ನೇ ಮತ್ತು 24ನೇ ಜನವರಿಯ ನಡುವೆ ಹೆರಿಗೆಯ ನಿರೀಕ್ಷಿತ ದಿನಾಂಕವಿರುವ ಹೆಚ್ಚಿನ ಮಹಿಳೆಯರಿದ್ದಾರೆ. ಈ ಗರ್ಭಿಣಿಯರು ಜನವರಿ 22 ರಂದು ತಮ್ಮ ಅತಿಥಿಯನ್ನು ಪಡೆಯಲು ಸಿಸೇರಿಯನ್ ಮಾಡಲು ಸಿದ್ಧರಾಗಿದ್ದಾರೆ.

ರಾಮ್ ಎಂಬ ಹೆಸರಿಗೆ ಹೆಚ್ಚಿನ ಬೇಡಿಕೆ

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಸಾಲಿಗ್ರಾಮ ಕಲ್ಲು ಬಳಸುವುದೇಕೆ ಗೊತ್ತೇ ?

ಜಿಲ್ಲೆಯ ಗರ್ಭಿಣಿಯರು ಜನವರಿ 22 ರಂದು ತಾಯಂದಿರಾಗಲು ಬಯಸುತ್ತಿರುವುದು ಮಾತ್ರವಲ್ಲದೆ ತಮ್ಮ ಮಗುವಿಗೆ ರಾಮ್ ಎಂದು ಹೆಸರಿಸಬೇಕೆಂದು ಅಂದುಕೊಂಡಿದ್ದಾರೆ. ಈ ಸಮಯದಲ್ಲಿ, ಹೆಚ್ಚಿನ ಮಹಿಳೆಯರು ರಾಮ್ ಲಲ್ಲಾ ತಮ್ಮ ಮನೆಗೆ ಭೇಟಿ ನೀಡಬೇಕೆಂದು ಬಯಸುತ್ತಿದ್ದಾರೆ. ಎಷ್ಟೋ ವರ್ಷಗಳ ನಂತರ ರಾಮ್ ಜಿ ಅವರ ಜೀವನ ಪಾವನವಾಗುತ್ತಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆಯ ಸಿಎಂಎಸ್ ಡಾ.ಜ್ಯೋತಿ ಮೆಹರೋತ್ರಾ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತಾಯಂದಿರು ತಮ್ಮ ಮಗುವನ್ನು 22 ರಂದು ಜಗತ್ತಿಗೆ ತರಲು ಬಯಸುತಿದ್ದಾರೆ ಈ ಮೂಲಕ ರಾಮನ ಭಕ್ತಿ ಎಷ್ಟಿದೆ ಎಂದು ಊಹಿಸಿಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News