ನಾವು ಬಾಬ್ರಿ ಮಸೀದಿಯನ್ನು 17 ನಿಮಿಷಗಳಲ್ಲಿ ಕೆಡವಿದ್ದೆವು, ಆದ್ರೆ ರಾಮಮಂದಿರ ಸಂಬಂಧ ಕಾನೂನು ರಚಿಸಲು ಇನ್ನೆಷ್ಟು ಸಮಯ ಬೇಕು? ಶಿವಸೇನೆ ಪ್ರಶ್ನೆ

ಸರ್ಕಾರ ಶೀಘ್ರಗತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರಚಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

Last Updated : Nov 23, 2018, 05:48 PM IST
ನಾವು ಬಾಬ್ರಿ ಮಸೀದಿಯನ್ನು 17 ನಿಮಿಷಗಳಲ್ಲಿ ಕೆಡವಿದ್ದೆವು, ಆದ್ರೆ ರಾಮಮಂದಿರ ಸಂಬಂಧ ಕಾನೂನು   ರಚಿಸಲು ಇನ್ನೆಷ್ಟು ಸಮಯ ಬೇಕು? ಶಿವಸೇನೆ ಪ್ರಶ್ನೆ title=

ಮುಂಬೈ: ಬಾಬ್ರಿ ಮಸಿದಿಯನ್ನು ನಾವು ಕೇವಲ 17 ನಿಮಿಷಗಳಲ್ಲಿ ಕೆಡವಿದ್ದೆವು. ಆದರೆ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಎಷ್ಟು ಸಮಯ ಬೇಕು ಎಂದು ಶಿವಸೇನೆ ಪ್ರಶ್ನಿಸಿದೆ.

ದೇಶದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಮ ಮಂದಿರ ನಿರ್ಮಾಣ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಈ ಬೆನ್ನಲೇ ಶಿವಸೇನೆ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು, ರಾಮಮಂದಿರ ನಿರ್ಮಾಣ ಸಂಬಂಧ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಉತ್ತರಪ್ರದೇಶದಲ್ಲಿ, ಕೇಂದ್ರದಲ್ಲಿ ಹಾಗೂ ರಾಷ್ಟ್ರಪತಿ ಭವನದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತಾರೂಢ ಸರ್ಕಾರ ಶೀಘ್ರಗತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರಚಿಸಬೇಕು. ರಾಮ ಮಂದಿರ ನಿರ್ಮಾಣದ ಪರವಾಗಿ ರಾಜ್ಯಸಭೆಯಲ್ಲಿ ಹಲವಾರು ಸದಸ್ಯರಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇವರು ಇನ್ನು ಮುಂದೆ ದೇಶದಲ್ಲಿ ಓಡಾಡಬೇಕಾದರೆ, ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

Trending News