CoronaVirus ಕುರಿತು ವೈದ್ಯರಿಂದ ಸಲಹೆ ಪಡೆದ ರಾಷ್ಟ್ರಪತಿ

ಕರೋನಾ ವೈರಸ್ ಸೋಂಕಿತ ಗಾಯಕಿ ಕನಿಕಾ ಕಪೂರ್ ಅವರ ಪಾರ್ಟಿಯಲ್ಲಿ ಪಾಲ್ಗೊಂಡ ನಂತರ ಸಂಸದ ದುಶ್ಯಂತ್ ಸಿಂಗ್ ಕೂಡ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

Last Updated : Mar 21, 2020, 09:35 AM IST
CoronaVirus ಕುರಿತು ವೈದ್ಯರಿಂದ ಸಲಹೆ ಪಡೆದ ರಾಷ್ಟ್ರಪತಿ  title=

ನವದೆಹಲಿ: ಕರೋನಾ ವೈರಸ್ ಸೋಂಕಿತ ಗಾಯಕಿ ಕನಿಕಾ ಕಪೂರ್ ಅವರ ಪಾರ್ಟಿಯಲ್ಲಿ ಪಾಲ್ಗೊಂಡ ನಂತರ ಸಂಸದ ದುಶ್ಯಂತ್ ಸಿಂಗ್ ಕೂಡ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಭವನವು ಅಗತ್ಯವಿರುವ ಎಲ್ಲ ವೈದ್ಯಕೀಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೊವಿಂದ್ (Ram Nath Kovind)ವೈದ್ಯಕೀಯ ಸಲಹೆಗಳನ್ನು ತೆಗೆದುಕೊಂಡಿದ್ದು, ರಾಷ್ಟ್ರಪತಿಯವರಿಗೆ ಜ್ವರ ಅಥವಾ ಕರೋನವೈರಸ್(coronavirus) ಗೆ ಸಂಬಂಧಿಸಿದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ರಾಜಸ್ಥಾನದ ಸಂಸದರ ನಿಯೋಗದೊಂದಿಗಿನ ಸಭೆಯಲ್ಲಿ ರಾಷ್ಟ್ರಪತಿ ಸಂಸದ ದುಶ್ಯಂತ್ ಅವರೊಂದಿಗೆ ಕೆಲವು ಸೆಕೆಂಡುಗಳ ಕಾಲ ಸಂಪರ್ಕಕ್ಕೆ ಬಂದರು. ಕರೋನಾ ವೈರಸ್‌ನಿಂದಾಗಿ ರಾಷ್ಟ್ರಪತಿಯವರು ಈಗಾಗಲೇ ನೇಮಕಾತಿ (Appointment)ಗಳನ್ನು ಕಡಿಮೆ ಮಾಡಿದ್ದರು ಮತ್ತು ಶನಿವಾರ ಮತ್ತು ಭಾನುವಾರದ ರಜಾದಿನದ ಕಾರಣ ಯಾವುದೇ ನೇಮಕಾತಿ (Appointment) ಗಳಿಲ್ಲ. ಸಂಸದ ದುಶ್ಯಂತ್ ಅವರಲ್ಲೂ ಕರೋನದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ವಿಶೇಷವೆಂದರೆ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಅವರ ತಾಯಿ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರು ಭಾನುವಾರ ಲಖನೌದಲ್ಲಿ ನಡೆದ ಕಾನಿಕಾ ಕಪೂರ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನಿಕಾ ಕರೋನಾ ವೈರಸ್‌ನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಆದರೆ, ಕಾನಿಕಾ ಅವರನ್ನು ಭೇಟಿ ಮಾಡಿದ ಜನರನ್ನು ತೀವ್ರವಾಗಿ ತನಿಖೆ ಮಾಡಲಾಗುತ್ತದೆ.

ಸೂಕ್ಷ್ಮ ಮಾಹಿತಿಯನ್ನು ಮರೆಮಾಡಿರುವ ಕಾರಣ ಕಾನಿಕಾ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯುಪಿ ಸರ್ಕಾರ ಈಗಾಗಲೇ ಘೋಷಿಸಿದೆ. ಈ ಸಂಬಂಧ ಲಖನೌದ ಸರೋಜಿನಿ ನಗರ ಪ್ರದೇಶದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪಾರ್ಟಿ ನಡೆದ ಸ್ಥಳದಲ್ಲಿ ತಾಜ್ ಹೋಟೆಲ್ ಮುಚ್ಚಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಜರಾದ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲು ಕ್ರಮ ಜರುಗಿಸಲಾಗಿದೆ.
 

Trending News