ಒಕ್ಖಿ ಚಂಡಮಾರುತ: ಮುಂಬೈಯಲ್ಲಿ ಉಬ್ಬರವಿಳಿತದ ಎಚ್ಚರಿಕೆ

ಭ್ರಹನ ಮುಂಬೈ ಮುನಿಸಿಪಲ್ ಕಾರ್ಪೊರೇಶನ್ನ ಮುಂಬೈ ವಿಪತ್ತು ನಿರ್ವಹಣಾ ಘಟಕವು ಹೆಚ್ಚಿನ ಉಬ್ಬರವಿಳಿತದ ಎಚ್ಚರಿಕೆಯ ದೃಷ್ಟಿಯಿಂದ ಕಡಲ ತೀರದ ಭೇಟಿಯನ್ನು ನಿಷೇಧಿಸಿದೆ.

Last Updated : Dec 5, 2017, 10:09 AM IST
ಒಕ್ಖಿ ಚಂಡಮಾರುತ: ಮುಂಬೈಯಲ್ಲಿ ಉಬ್ಬರವಿಳಿತದ ಎಚ್ಚರಿಕೆ title=

ಮುಂಬೈ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಕ್ಖಿ ಎಂಬ ಚಂಡಮಾರುತದ ಕಾರಣದಿಂದ ಉಂಟಾದ ಭಾರೀ ಹರಿವಿನ ಕೆಳಗೆ ಬೀಸುತ್ತಿದ್ದಂತೆ ಮಹಾರಾಷ್ಟ್ರ ಮತ್ತು ಗುಜರಾತ್ನ ಹಲವು ಭಾಗಗಳಲ್ಲಿ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದ್ದು, ಮಂಗಳವಾರ ಶಾಲೆಗಳಿ ರಜೆ ಘೋಷಿಸಲಾಗಿದೆ.

ಗಂಭೀರ ಹವಾಮಾನ ಭವಿಷ್ಯದ ಕಾರಣದಿಂದಾಗಿ ಮುಂಬೈ ಮಹಾನಗರದ ಪ್ರದೇಶ, ಸಿಂಧುದುರ್ಗ, ಥಾಣೆ, ರಾಯಗಡ್ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿರುವ ಶಾಲೆಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ರಜಾದಿನವನ್ನು ಘೋಷಿಸಿವೆ ಎಂದು ಮಹಾರಾಷ್ಟ್ರ ಸಚಿವ ವಿನೋದ್ ತವ್ಡೆ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಏತನ್ಮಧ್ಯೆ ಭ್ರಹನ ಮುಂಬೈ ಮುನಿಸಿಪಲ್ ಕಾರ್ಪೊರೇಶನ್ನ ಮುಂಬೈ ವಿಪತ್ತು ನಿರ್ವಹಣಾ ಘಟಕವು ಹೆಚ್ಚಿನ ಉಬ್ಬರವಿಳಿತದ ಎಚ್ಚರಿಕೆಯ ದೃಷ್ಟಿಯಿಂದ ಕಡಲ ತೀರದ ಭೇಟಿಯನ್ನು ನಿಷೇಧಿಸಿದೆ.

ಕೇಂದ್ರ ರೈಲ್ವೆ ಮುಂಬೈ ವಿಭಾಗವು ತುರ್ತು ಸಂಖ್ಯೆಯನ್ನು ನವೀಕರಿಸಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಕಲ್ಯಾನ್ನಲ್ಲಿ ತುರ್ತು ಸೆಲ್ ಅನ್ನು ತೆರೆಯಲಾಗಿದೆ. 

250 ಕ್ಕೂ ಹೆಚ್ಚು ರೈಲ್ವೇ ಪೋಲೀಸ್ ಮತ್ತು ಮಹಾರಾಷ್ಟ್ರ ರಾಜ್ಯ ಭದ್ರತಾ ಪಡೆ ಸಿಬ್ಬಂದಿಗಳು ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಲು ಸಜ್ಜಾಗಿದ್ದಾರೆ.

Trending News