ಪಾಸ್ ಪೋರ್ಟ್ , ಪ್ಯಾನ್ ಕಾರ್ಡ್ ಗಾಗಿ ಅಲೆಯಬೇಕಿಲ್ಲ, ಸಮೀಪದ ರೇಷನ್ ಅಂಗಡಿಯಲ್ಲೇ ಅರ್ಜಿ ಸಲ್ಲಿಸಬಹುದು

ಸಾಮಾನ್ಯ ಜನರಿಗೆ ಪ್ರತಿಯೊಂದು ಸೌಲಭ್ಯವನ್ನು ಸುಲಭವಾಗಿ ಒದಗಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ನಿಮ್ಮ ಪಕ್ಕದ ಪಡಿತರ ಅಂಗಡಿಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ.  

Written by - Ranjitha R K | Last Updated : Sep 21, 2021, 08:42 PM IST
  • ಪಡಿತರ ಅಂಗಡಿಗಳನ್ನು ಸಿಎಸ್‌ಸಿ ಸೇವಾ ಕೇಂದ್ರಗಳಾಗಿ ಅಭಿವೃದ್ಧಿ
  • ಪಡಿತರ ಅಂಗಡಿಗಳ ಮೂಲಕ ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗೆ ಅರ್ಜಿ
  • ಸಿಎಸ್‌ಸಿ ಕೇಂದ್ರಗಳು ಒದಗಿಸಬೇಕಾದ ಸೇವೆಗಳನ್ನು ಆಯ್ಕೆ ಮಾಡಲು ಸಾಧ್ಯ
ಪಾಸ್ ಪೋರ್ಟ್ , ಪ್ಯಾನ್ ಕಾರ್ಡ್ ಗಾಗಿ ಅಲೆಯಬೇಕಿಲ್ಲ, ಸಮೀಪದ ರೇಷನ್ ಅಂಗಡಿಯಲ್ಲೇ ಅರ್ಜಿ ಸಲ್ಲಿಸಬಹುದು  title=
ಪಡಿತರ ಅಂಗಡಿಗಳ ಮೂಲಕ ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗೆ ಅರ್ಜಿ (file photo)

ನವದೆಹಲಿ :  ಸಾಮಾನ್ಯ ಜನರಿಗೆ ಪ್ರತಿಯೊಂದು ಸೌಲಭ್ಯವನ್ನು ಸುಲಭವಾಗಿ ಒದಗಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ನಿಮ್ಮ ಪಕ್ಕದ ಪಡಿತರ ಅಂಗಡಿಗಳನ್ನು (Ration shop) ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಬರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ (CSC) ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ  ಪಡಿತರ ಅಂಗಡಿಗಳ ಆದಾಯ ಹೆಚ್ಚಲಿದೆ. ಪಡಿತರವನ್ನು ತೆಗೆದುಕೊಳ್ಳುವುದರ ಜೊತೆಗೆ, ಜನರು ಈ ಅಂಗಡಿಗಳ ಮೂಲಕ ಪ್ಯಾನ್ ಕಾರ್ಡ್ (PAN Card) ಮತ್ತು ಪಾಸ್‌ಪೋರ್ಟ್‌ಗೆ (Passport) ಅರ್ಜಿ ಕೂಡಾ ಸಲ್ಲಿಸಬಹುದು. ಇದು ಮಾತ್ರವಲ್ಲ, ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಸಹ ಇಲ್ಲಿ ಜಮಾ ಮಾಡಬಹುದಾಗಿದೆ. 

ಸಿಎಸ್‌ಸಿ ಕೇಂದ್ರಗಳು ಒದಗಿಸಬೇಕಾದ ಸೇವೆಗಳನ್ನು ಆಯ್ಕೆ ಮಾಡಲು ಸಾಧ್ಯ : 
ಆಹಾರ ಸಚಿವಾಲಯದ ಈ ಕ್ರಮದಿಂದ, ಆಸಕ್ತ ನ್ಯಾಯಬೆಲೆ ಅಂಗಡಿ ವಿತರಕರ ಮೂಲಕ ಸಿಎಸ್‌ಸಿ  (CSC) ಸೇವೆಗಳ ಪೂರೈಕೆಯು ಪಡಿತರ ಅಂಗಡಿಗಳಿಗೆ ವ್ಯಾಪಾರ ಅವಕಾಶ ಮತ್ತು ಆದಾಯವನ್ನು ಹೆಚ್ಚಿಸುತ್ತದೆ. ಪಡಿತರ ಅಂಗಡಿಗಳನ್ನು ಸಿಎಸ್‌ಸಿ ಸೇವಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬಹುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಂತಹ CSC ಕೇಂದ್ರಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಸೇವೆಗಳಿಗಾಗಿ ಆಯ್ಕೆ ಮಾಡಲು ಕೋರಲಾಗುತ್ತದೆ. 

ಇದನ್ನೂ ಓದಿ :  PAN Card ಕಳೆದು ಹೋಗಿದ್ದರೆ, ಕೆಲವೇ ನಿಮಿಷಗಳಲ್ಲಿ ಹೀಗೆ ಡೌನ್ಲೋಡ್ ಮಾಡಿ e-Pan

ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸೇವೆಗಳು :
ಸಿಎಸ್‌ಸಿ ಕೇಂದ್ರಗಳಲ್ಲಿ , ಪಡಿತರ ಅಂಗಡಿಯೊಂದಿಗೆ ಬಿಲ್ ಪಾವತಿ, ಪ್ಯಾನ್ ಅರ್ಜಿ (Pan card), ಪಾಸ್‌ಪೋರ್ಟ್ ಅರ್ಜಿ, ಚುನಾವಣಾ ಆಯೋಗಕ್ಕೆ (Election commission) ಸಂಬಂಧಿಸಿದ ಸೇವೆಗಳನ್ನು ಒದಗಿಸಬಹುದು. ಈ ಒಪ್ಪಂದಕ್ಕೆ ಉಪ ಕಾರ್ಯದರ್ಶಿ (PD) ಜ್ಯೋತ್ಸ್ನಾ ಗುಪ್ತಾ ಮತ್ತು ಸಿಎಸ್‌ಸಿ ಉಪಾಧ್ಯಕ್ಷ  ಸಾರ್ಥಿಕ್ ಸಚ್ ದೇವ್ ಸಹಿ ಹಾಕಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಮತ್ತು ಸಿಎಸ್‌ಸಿಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ತ್ಯಾಗಿ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ, ಕೇಂದ್ರವು ಪಡಿತರ ಅಂಗಡಿಗಳ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ಕೆಜಿಗೆ ಒಂದರಿಂದ ಮೂರು ರೂಪಾಯಿಯಂತೆ ಐದು ಕೆಜಿ ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಈ ಕಾನೂನಿನ ಅಡಿಯಲ್ಲಿ, 80 ಕೋಟಿಗೂ ಹೆಚ್ಚು ಜನರು ನೇರ ಪ್ರಯೋಜನಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ :  Coronavirus In India: ಭಾರತದಲ್ಲಿ ಕೊರೊನಾ ವೈರಸ್ ಅಂತ್ಯದ ಕುರಿತು ತಜ್ಞರು ನೀಡಿದ ಬೆಚ್ಚಿಬೀಳಿಸುವ ಮಾಹಿತಿ ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News