ಮೈಸೂರು-ರಾಮೇಶ್ವರಂ ರೈಲು ಸೇವೆಗೆ ಒಪ್ಪಿಗೆ, ಏಪ್ರಿಲ್ ೧ ರಿಂದ ಸಂಚಾರ ಆರಂಭ

Mysore-Rameswaram train :  ಮೈಸೂರು-ರಾಮೇಶ್ವರಂ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ರೈಲು ಏಪ್ರಿಲ್ 1ರಿಂದ ಸಂಚಾರ ಆರಂಭಿಸಲಿದೆ. 

Written by - Zee Kannada News Desk | Last Updated : Feb 25, 2024, 11:35 PM IST
  • ಸದ್ಯದ ಮಾಹಿತಿ ಪ್ರಕಾರ ಮೈಸೂರು-ರಾಮೇಶ್ವರಂ ರೈಲು ಏಪ್ರಿಲ್ 1 ರಿಂದ ಜುಲೈ 23ರ ತನಕ ಸಂಚಾರ ನಡೆಸಲಿದೆ.
  • ಮೈಸೂರು-ರಾಮೇಶ್ವರಂ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ
  • ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಮೈಸೂರು-ರಾಮೇಶ್ವರಂ ರೈಲು ಸೇವೆಗೆ ಒಪ್ಪಿಗೆ, ಏಪ್ರಿಲ್ ೧ ರಿಂದ ಸಂಚಾರ ಆರಂಭ title=

Mysore-Rameswaram train service approved : ಬಹುದಿನದ ಬೇಡಿಕೆಯಾದ  ಮೈಸೂರು-ರಾಮೇಶ್ವರಂ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ರೈಲು ಏಪ್ರಿಲ್ 1ರಿಂದ ಸಂಚಾರ ಆರಂಭಿಸಲಿದ್ದು,ಮೈಸೂರು ಭಾಗದ ಜನರ ಬಹು ಬೇಡಿಕೆ ಈಡೇರಿದಂತಾಗಲಿದೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, "ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತರಿಸಿದ್ದೇನೆ. 2014ಕ್ಕೂ ಮೊದಲು ಒಂದು ರೈಲು ಬಂದಿಲ್ಲ. ಶೀಘ್ರದಲ್ಲೇ ಮೈಸೂರು-ರಾಮೇಶ್ವರಂ 12ನೇ ರೈಲು ಬರಲಿದೆ" ಎಂದು ಹೇಳಿದ್ದರು. 2023ರ ಡಿಸೆಂಬರ್‌ನಲ್ಲಿ ಪ್ರತಾಪ್ ಸಿಂಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ್ದರು. ಮೈಸೂರಿನಿಂದ ರಾಮೇಶ್ವರಂಗೆ ಸಾಪ್ತಾಹಿಕ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು.

ಇದೀಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ  "ಮೈಸೂರಿನಿಂದ ರಾಮೇಶ್ವರಂಗೆ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿದ್ದು, ಈ ರೈಲು ಏಪ್ರಿಲ್ 1ರಿಂದ ಸಂಚರಿಸಲಿದೆ" ಮತ್ತು "ಚುಕು ಬುಕು ಚುಕು ಬುಕು ರೈಲೇ...ಮೈಸೂರಿಂದ ರಾಮೇಶ್ವರಂಗೆ ಹೋಗೋಣ ರೆಡಿಯಾಗಿ" ಎಂದು ಹೇಳಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಇದನ್ನು ಓದಿ : Post Office Recruitment 2024 : 98,083 ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲಿನ ವೇಳಾಪಟ್ಟಿ: ಸದ್ಯದ ಮಾಹಿತಿ ಪ್ರಕಾರ ಮೈಸೂರು-ರಾಮೇಶ್ವರಂ ರೈಲು ಏಪ್ರಿಲ್ 1 ರಿಂದ ಜುಲೈ 23ರ ತನಕ ಸಂಚಾರ ನಡೆಸಲಿದೆ. ರಾಮೇಶ್ವರಂನಲ್ಲಿ ರೈಲ್ವೆ ಇಲಾಖೆಯ ವಿವಿಧ ಕಾಮಗಾರಿಗಳು ನಡೆಯುತ್ತಿವ ಕಾರಣ ರೈಲು ಮಧುರೈ ತನಕ ಸಂಚಾರ ನಡೆಸಲಿದೆ. ಬಳಿಕ ರಾಮೇಶ್ವರಂ ತನಕ ವಿಸ್ತರಣೆಯಾಗಲಿದೆ.

ಸೋಮವಾರ ಸಂಜೆ 6.35ಕ್ಕೆ ಮೈಸೂರಿನಿಂದ ಹೊರಡುವ ರೈಲು ಜೋಲಾರ್ ಪಟ್ಟಿ, ತಿರುಪತೂರ್, ಸೇಲಂ, ನಾಮಾಕಲ್, ಕರೂರ್, ತಿರುಚ್ಚಿರಾಪಲ್ಲಿ, ದಿಂಡಿಗಲ್, ಮಧುರೈ ಮೂಲಕ ಮಂಗಳವಾರ ಬೆಳಗ್ಗೆ 9.10ಕ್ಕೆ ಮಾನಾಮಧುರೈ ತಲುಪಲಿದೆ. 
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಾನಮಧುರೈನಿಂದ ಹೊರಡುವ ರೈಲು ಇದೇ ಮಾರ್ಗವಾಗಿ ಸಂಚಾರ ನಡೆಲಿದೆ. 
ಸದ್ಯ ಮೈಸೂರು ಮತ್ತು ಮಾನಮಧುರೈ ನಡುವೆ ಈ ರೈಲು ತಲಾ 17 ಟ್ರಿಪ್ ಸಂಚಾರ ನಡೆಸಲಿದೆ.

ಇದನ್ನು ಓದಿ : Deepika Padukone : ನಟಿ ದೀಪಿಕಾ ಪಡುಕೋಣೆ ಪ್ರಗ್ನೆಂಟ್‌..! ಗುಟ್ಟು ರಟ್ಟು ಮಾಡಿದ ಫೋಟೋಸ್‌

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಮೇಶ್ವರಂ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿರುವ ಕಾರಣ ಈ ರೈಲು ಮಾನಮಧುರೈ ತನಕ ಸಂಚಾರ ನಡೆಸಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ರಾಮೇಶ್ವರಂ ತನಕ ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News