Mohan Bhagvat On Veer Savarkar: 'Savarkar ಕುರಿತು ದೇಶದಲ್ಲಿ ಮಾಹಿತಿಯ ಕೊರತೆ ಇದೆ, ಅವರನ್ನು ಅವಹೇಳನ ಮಾಡುವ ಅಭಿಯಾನ ಸಾಗಿತ್ತು'

Mohan Bhagvat On Veer Savarkar - ಸರ್ ಸಯ್ಯದ್ ಅಹ್ಮದ್ ಖಾನ್ (Sir Sayed Ahmed Khan) ಅವರನ್ನು ಹಿಂದೂ ಮಹಾಸಭಾ  (Muslim Mahasabha) ಮೂಲಕ ಸ್ವಾಗತಿಸಲಾಗಿತ್ತು ಮತ್ತು ಆಗ ಅವರನ್ನು ಮೊದಲ ಮುಸ್ಲಿಂ ಬ್ಯಾರಿಸ್ಟರ್ ಎಂದು ಉಲ್ಲೇಖಿಸಿದಾಗ ಅವರು ನಾನು ಇತರರಿಗಿಂತ ಭಿನ್ನವಾಗಿದ್ದೆನೆಯೇ? ಎಂದು ಪ್ರಶ್ನಿಸಿದ್ದರು ಎಂದು ಭಾಗವತ್ ಹೇಳಿದ್ದಾರೆ. 

Written by - Nitin Tabib | Last Updated : Oct 12, 2021, 08:31 PM IST
  • ಭಾರತದಲ್ಲಿ ಸಾವರ್ಕರ್ ಕುರಿತು ಮಾಹಿತಿಯ ಅಭಾವ ಇದೆ.
  • ಹೀಗಾಗಿ ಅವರನ್ನು ಅವಹೇಳನ ಮಾಡುವ ಅಭಿಯಾನ ಸಾಗಿತ್ತು
  • ಸಾವರ್ಕರ್ ಕುರಿತು RSS ಮುಖ್ಯಸ್ಥರು ಇನ್ನೇನು ಹೇಳಿದ್ದು?
Mohan Bhagvat On Veer Savarkar: 'Savarkar ಕುರಿತು ದೇಶದಲ್ಲಿ ಮಾಹಿತಿಯ ಕೊರತೆ ಇದೆ, ಅವರನ್ನು ಅವಹೇಳನ ಮಾಡುವ ಅಭಿಯಾನ ಸಾಗಿತ್ತು' title=
Mohan Bhagvat On Veer Savarkar (File Photo)

Mohan Bhagvat On Veer Savarkar - ವೀರ ಸಾವರ್ಕರ್ (Veer Savarkar) ಅವರ ಬಗ್ಗೆ ದೇಶದಲ್ಲಿ ಸರಿಯಾದ ಮಾಹಿತಿಯ ಕೊರತೆ ಇದೆ ಎಂದು Rashtriya Swayam Sevak Sangh (RSS) ಸರಸಂಘಚಾಲಕ್  ಮೋಹನ್ ಭಾಗವತ್ (Mohan Bhagwat) ಅವರು ಮಂಗಳವಾರ ಹೇಳಿದ್ದಾರೆ. ಸಾವರ್ಕರ್ ಅವರ ಚಿಂತನೆಗಳು ದೇಶಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಸಾವರ್ಕರ್‌ರನ್ನು ಅವಹೇಳನ ಮಾಡುವ ಅಭಿಯಾನ ನಡೆಯುತ್ತಿದೆ ಎಂದು ಭಾಗವತ್ ಹೇಳಿದರು. ಸ್ವಾಮಿ ವಿವೇಕಾನಂದ (Swami Vivekanand) ಮತ್ತು ಸ್ವಾಮಿ ಅರಬಿಂದೋ (Swami Arabindo) ಅವರ ಕಲ್ಪನೆಯಿಂದಾಗಿ ಸಾವರ್ಕರ್ ಈ ರೀತಿಯಾದರು. ಸಾವರ್ಕರ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಭಾರತೀಯ ಸಂಪ್ರದಾಯದಲ್ಲಿ, ಧರ್ಮದ ಅರ್ಥವು ಜೋಡಿಸುವುದು ಎಂದಾಗುತ್ತದೆ ಮತ್ತು ಅದನ್ನು ಪೂಜೆಯೊಂದಿಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇಂದಿನ ಭಾಷೆಯಲ್ಲಿ ಮಾನವೀಯತೆ ಇದೆ. ಅವರು ಹಿಂದುತ್ವ ಪದವನ್ನು ಬಳಸುತ್ತಿದ್ದರು ಆದರೆ ಅದು ಹಾಗೆ ಅರ್ಥವಾಗಲಿಲ್ಲ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಮಂಗಳವಾರ ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar)ಕುರಿತು ಬರೆದ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಈ ವಿಷಯಗಳನ್ನು ಹೇಳಿದ್ದಾರೆ. 

ಸರ್ ಸಯ್ಯದ್ ಅಹ್ಮದ್ ಖಾನ್ ಅವರನ್ನು ಹಿಂದೂ ಮಹಾಸಭಾ  ಮೂಲಕ ಸ್ವಾಗತಿಸಲಾಗಿತ್ತು ಮತ್ತು ಆಗ ಅವರನ್ನು ಮೊದಲ ಮುಸ್ಲಿಂ ಬ್ಯಾರಿಸ್ಟರ್ ಎಂದು ಉಲ್ಲೇಖಿಸಿದಾಗ ಅವರು ನಾನು ಇತರರಿಗಿಂತ ಭಿನ್ನವಾಗಿದ್ದೆನೆಯೇ? ಎಂದು ಪ್ರಶ್ನಿಸಿದ್ದರು. ಇನ್ನೊಂದೆಡೆ ನನಗೆ ಒಂದು ವೇಳೆ ಮರುಜನ್ಮವಿದ್ದರೆ ಅದು ಭಾರತದಲ್ಲಿರಬೇಕು ಎಂದು ಬಿಸ್ಮಿಲ್ (Bismil) ಹೇಳಿದ್ದರು. ಭಾರತದಿಂದ ಹೋದ ಮುಸ್ಲಿಮರ ಪ್ರತಿಷ್ಠೆ ಪಾಕಿಸ್ತಾನದಲ್ಲಿಯೂ ಇಲ್ಲ. ಭಾರತದಲ್ಲಿ, ಪ್ರತಿಯೊಬ್ಬರ ಪೂರ್ವಜರು ಒಂದೇ ಆಗಿದ್ದರೆ. ತಮ್ಮ ಲೂಟಿಯನ್ನು ಮುಂದುವರಿಸಲು ಬ್ರಿಟಿಷರು ವಿಭಜನೆಯಲ್ಲಿ ನಂಬಿಕೆ ಇಟ್ಟಿದ್ದರು ಎಂದು ಆರ್ ಎಸ್ ಎಸ್ ಮುಖ್ಯಸ್ಥರು ಹೇಳಿದ್ದರು. ನಾವು ಒಂದಲ್ಲ  ನಾವು ಬೇರೆ ಬೇರೆಯಾಗಿದ್ದೇವೆ ಎಂಬ ಗಲಾಟೆ ನಡೆದಾಗ, ನಾವು ಪೂಜೆಯ ಹೆಸರಿನಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಮತ್ತು ಅದಕ್ಕಾಗಿಯೇ ಅವರು ಕಟುವಾಗಿ ಮಾತನಾಡಿದರು ಎಂದು ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ-Indian Economy: ಆರ್ಥಿಕತೆಯ ವಿಷಯದಲ್ಲಿ ಡ್ರ್ಯಾಗನ್ ಹಿಂದಿಕ್ಕಿದ ಭಾರತ

ಎಲ್ಲರ ಹಿಂದುತ್ವ ಒಂದೇ ಆಗಿದೆ
ಸಂಸತ್ತಿನಲ್ಲಿ ಏನು ನಡೆಯುತ್ತದೆ, ಅಲ್ಲಿ ಹೊಡೆದಾಟ ನಡೆಯುವುದಿಲ್ಲವೆ. ಎಲ್ಲವು ನಡೆಯುತ್ತದೆ ಆದರೆ, ಹೊರಗೆ ಬಂದಾಗ ಎಲ್ಲರು ಒಂದೇ. ಎಲ್ಲರ ಹಿಂದುತ್ವ ಒಂದೇ ಆಗಿದೆ ಮತ್ತು ಅದು ಸನಾತನವಾಗಿದೆ. ಭಾರತಕ್ಕೆ ಬಂದವರೆಲ್ಲರು ಭಾರತೀಯರು ಹೀಗಾಗಿ ವಿಭಜನೆಯ ಮಾತುಗಳನ್ನು ಆಡಬೇಡಿ ಎಂದು ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ-ಪ್ರತಿ ಭಾರತೀಯರಿಗೂ ಸಿಗಲಿದೆ ವೈದ್ಯಕೀಯ ವಿಮಾ ರಕ್ಷಣೆ, ಈ ಯೋಜನೆಯ ವಿಸ್ತಾರಕ್ಕೆ ಸರ್ಕಾರದ ಸಿದ್ಧತೆ!

ನಾಗಪುರ್ ನಲ್ಲಿ ಆಯೋಜಿಸಲಾಗಿದ್ದ ಮುಸ್ಲಿಂ ಸಭೆಯಲ್ಲಿ ನಾವು ರಾಮ ಮಂದಿರದವರಾಗಿದ್ದೇವೆ ಹಾಗೂ ನಾವು ನಿಮ್ಮನ್ನು ಮತದಾರರು ಎಂದು ಪರಿಗಣಿಸುವುದಿಲ್ಲ. ನಾವು ಒಂದು ರೊಟ್ಟಿಯನ್ನು ತಂದರೆ ಅದರಲ್ಲಿನ ಅರ್ಧ ರೊಟ್ಟಿಯನ್ನು ನಿಮಗೂ ನೀಡುತ್ತೇವೆ. ಆದರೆ, ಅದರಲ್ಲಿ ನಿಮ್ಮ ಕರ್ತವ್ಯವು ಇದೆ. ನಾವು ಓಲೈಕೆಯನ್ನು ಮಾಡುವುದಿಲ್ಲ ಎಂದು ಪ್ರಮೋದ್ ಮಹಾಜನ್ ಹೇಳಿದ್ದರು ಎಂದು ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ-ಈಗ 2 ರಿಂದ 18 ವರ್ಷದ ಮಕ್ಕಳಿಗೂ ಭಾರತದಲ್ಲಿ ಕರೋನಾ ಲಸಿಕೆ, ಅನುಮೋದನೆ ನೀಡಿದ ಡಿಸಿಜಿಐ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News