ಹೆತ್ತವರೇ ತಮ್ಮನನ್ನು ಕೊಂದಿದ್ದಾರೆ ಎಂದು ಠಾಣೆಗೆ ಕರೆ ಮಾಡಿದ ಅಣ್ಣ.. ಸತ್ಯ ತಿಳಿದು ಶಾಕ್‌ ಆದ ಪೊಲೀಸರು.!

ಹತ್ಯೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ನಿಯಂತ್ರಣ ಕೊಠಡಿಯು ಬಂಜಾರಾ ಹಿಲ್ಸ್ ಪೊಲೀಸರಿಗೆ ಎಚ್ಚರಿಕೆ ನೀಡಿದ್ದು, ರಾತ್ರಿ ಗಸ್ತು ತಂಡವು ಕೊಲೆ ವರದಿಯಾದ ಸ್ಥಳಕ್ಕೆ ಧಾವಿಸಿದೆ.

Edited by - Zee Kannada News Desk | Last Updated : Dec 21, 2021, 07:10 PM IST
  • ಹೆತ್ತವರೇ ತಮ್ಮನನ್ನು ಕೊಂದಿದ್ದಾರೆ ಎಂದು ಠಾಣೆಗೆ ಕರೆ ಮಾಡಿದ ಅಣ್ಣ
  • ಲಾಲು ಮೋಜಿಗಾಗಿ ಕರೆ ಮಾಡಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ
  • ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಸೋದರನನ್ನು ಮೂರು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ
ಹೆತ್ತವರೇ ತಮ್ಮನನ್ನು ಕೊಂದಿದ್ದಾರೆ ಎಂದು ಠಾಣೆಗೆ ಕರೆ ಮಾಡಿದ ಅಣ್ಣ..  ಸತ್ಯ ತಿಳಿದು ಶಾಕ್‌ ಆದ ಪೊಲೀಸರು.! title=

ಹೈದರಾಬಾದ್: ಬಂಜಾರಾ ಹಿಲ್ಸ್ ನ ನಂದಿನಗರದ ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿ ತನ್ನ ಸಹೋದರನನ್ನು ಹೆತ್ತವರೇ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಆದರೆ, ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಸೋದರನನ್ನು ಮೂರು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ಡಿಸೆಂಬರ್ 17 ರಂದು 36 ವರ್ಷದ ಬಾನೋತ್ ಲಾಲು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತನ್ನ ಸಹೋದರನನ್ನು ತನ್ನ ಹೆತ್ತವರು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ. ಹತ್ಯೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ನಿಯಂತ್ರಣ ಕೊಠಡಿಯು ಬಂಜಾರಾ ಹಿಲ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿ ಗಸ್ತು ತಂಡವು ಕೊಲೆ ವರದಿಯಾದ ಸ್ಥಳಕ್ಕೆ ಧಾವಿಸಿದೆ.

ಆದರೆ, ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಬಳಿಕ ರಾತ್ರಿ ಕರ್ತವ್ಯದ ಸಬ್‌ಇನ್‌ಸ್ಪೆಕ್ಟರ್ ಮತ್ತು ಇನ್ಸ್‌ಪೆಕ್ಟರ್ ಸೇರಿದಂತೆ ಇಡೀ ಪೊಲೀಸ್ ತಂಡ ಇದು ಹುಸಿ ಕರೆ ಮತ್ತು ಯಾವುದೇ ಕೊಲೆ ಘಟನೆ ನಡೆದಿಲ್ಲ ಎಂದು ತಿಳಿದು ಶಾಕ್‌ಗೆ ಒಳಗಾದರು.

ವರದಿಯ ಪ್ರಕಾರ, ಲಾಲು ಅವರು ಮೋಜಿಗಾಗಿ ಮತ್ತು ಪೊಲೀಸರ ಸನ್ನದ್ಧತೆಯನ್ನು ಪರಿಶೀಲಿಸಲು ಈ ಕರೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ನಕಲಿ ಕರೆ ಮಾಡಿದ ಆರೋಪದ ಮೇಲೆ ಲಾಲು ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ದಿಕ್ಕು ತಪ್ಪಿಸಿದ್ದಕ್ಕಾಗಿ ಮೂರು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಬಿಡಿ, ನನ್ನ ಮಕ್ಕಳ ಇನ್‌ಸ್ಟಾಗ್ರಾಮ್ ಕೂಡ ಹ್ಯಾಕ್ ಮಾಡಲಾಗಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News