ಪ್ರೇಮ ನಿವೇದನೆಗೆ ಪೆಟ್ರೋಲ್ ಸುರಿದುಕೊಂಡ ಯುವಕ, ಬೆಂಕಿ ಹಚ್ಚಿದಳು ಅಪ್ರಾಪ್ತ ಸಖಿ..!

ಯುವಕನ್ನೊಬ್ಬ ತನ್ನ ಪ್ರೇಮ ನಿವೇದನೆಗಾಗಿ ಪೆಟ್ರೋಲ್ ಸುರಿದಕೊಂಡ ವೇಳೆ ಅವನ ರಕ್ಷಣೆಗೆ ಧಾವಿಸುವ ಬದಲು ಅಪ್ರಾಪ್ತೆಯೊಬ್ಬಳು ಬೆಂಕಿ ಹಚ್ಚಿದ ಆಘಾತಕಾರಿ  ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Last Updated : Apr 28, 2019, 11:57 AM IST
ಪ್ರೇಮ ನಿವೇದನೆಗೆ ಪೆಟ್ರೋಲ್ ಸುರಿದುಕೊಂಡ ಯುವಕ, ಬೆಂಕಿ ಹಚ್ಚಿದಳು ಅಪ್ರಾಪ್ತ ಸಖಿ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಯುವಕನ್ನೊಬ್ಬ ತನ್ನ ಪ್ರೇಮ ನಿವೇದನೆಗಾಗಿ ಪೆಟ್ರೋಲ್ ಸುರಿದಕೊಂಡ ವೇಳೆ ಅವನ ರಕ್ಷಣೆಗೆ ಧಾವಿಸುವ ಬದಲು ಅಪ್ರಾಪ್ತೆಯೊಬ್ಬಳು ಬೆಂಕಿ ಹಚ್ಚಿದ ಆಘಾತಕಾರಿ  ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಪೆಟ್ರೋಲ್ ಸುರಿದುಕೊಂಡಿರುವ ವ್ಯಕ್ತಿಯನ್ನು ಅರವಿಂದ್ ನಿಶಾದ್ (20) ಎಂದು ಗುರುತಿಸಲಾಗಿದ್ದು, ಹಸನ್ ಗಂಜ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಖಾದ್ರಾ ನಿವಾಸಿ ಎಂದು ಹೇಳಲಾಗಿದೆ.ಇತನು 9ನೇ ಕ್ಲಾಸ್ ನಲ್ಲಿ ಓದುತ್ತಿದ್ದ 15 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿದ್ದನು.ವಯಸ್ಕರರಾದ ನಂತರ ಇಬ್ಬರಿಗೂ ಮದುವೆಯಾಗಲು ಬಾಲಕಿ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ನಿಶಾದ್ ಕಾಯದಿರುವ ಹಿನ್ನಲೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಲು ಏಪ್ರಿಲ್ 20 ರಂದು ಆತನ ಮನೆಗೆ ಬಾಲಕಿ ಮತ್ತು ಆತನ ತಾಯಿ ಬಂದಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಮುಂದೆ ಒಂದು ವೇಳೆ ತನ್ನ ಬೇಡಿಕೆಗೆ ಒಪ್ಪದ ಹಿನ್ನಲೆಯಲ್ಲಿ ಪೆಟ್ರೋಲ್ ನ್ನು ಮೈ ಮೇಲೆ ಸುರಿದುಕೊಂಡು ಬೆದರಿಕೆ ಸಾಯುವ ಬೆದರಿಕೆ ಒಡ್ಡಿದ್ದಾನೆ.

ಆದರೆ ಇದರಿಂದ ಅವನನ್ನು ರಕ್ಷಿಸುವ ಬದಲು ಆ ಬಾಲಕಿ ಆತನ ಮೇಲೆ ಕಡ್ಡಿ ಕೆರೆದು ಎಸೆದಿದ್ದಾಳೆ.ಆಗ ಅವನ ಶೇ 60 ರಷ್ಟು ದೇಹದ ಭಾಗಗಳು ಸುಟ್ಟಿದ್ದು, ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ನಡೆಸಿದ್ದಾನೆ ಎನ್ನಲಾಗಿದೆ.ಈಗ ಪೊಲೀಸರು ಪ್ರಕರಣ ವನ್ನು ದಾಖಲಿಸಿಕೊಂಡಿದ್ದು.ಆ ವ್ಯಕ್ತಿಯ ಹೇಳಿಕೆಯನ್ನು ಪಡೆಯುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Trending News