ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ಸೂಚಿಸಿದ ಕೆಸಿಆರ್

ತೆಲಂಗಾಣದ ಮುಖ್ಯಮಂತ್ರಿ  ಕೆ.ಚಂದ್ರಶೇಖರ್ ರಾವ್ ಗುರುವಾರದಂದು ರಾಜ್ಯಪಾಳರನ್ನು  ಭೇಟಿ ಮಾಡಿ ವಿಧಾನಸಭೆ ವಿಸರ್ಜನೆಗೆ ಕೋರಿದ್ದಾರೆ.

Last Updated : Sep 6, 2018, 02:15 PM IST
ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ಸೂಚಿಸಿದ ಕೆಸಿಆರ್  title=

ನವದೆಹಲಿ: ತೆಲಂಗಾಣದ ಮುಖ್ಯಮಂತ್ರಿ  ಕೆ.ಚಂದ್ರಶೇಖರ್ ರಾವ್ ಗುರುವಾರದಂದು ರಾಜ್ಯಪಾಳರನ್ನು  ಭೇಟಿ ಮಾಡಿ ವಿಧಾನಸಭೆ ವಿಸರ್ಜನೆಗೆ ಕೋರಿದ್ದಾರೆ.

ಚಂದ್ರಶೇಖರ್ ವರಿಗೆ ಜೋತಿಷ್ಯ ಶಾಸ್ತ್ರದ ಪ್ರಕಾರ 6 ಅದೃಷ್ಟದ ಸಂಖ್ಯೆ ಎಂದು ಹೇಳಲಾಗಿದೆ.ಆದ್ದರಿಂದ ಜ್ಯೋತಿಷ್ಯರ ಸಲಹೆಯ ಮೇರೆಗೆ ಈಗ ಅವರು ಈ ನಿರ್ಧಾರಕ್ಕೆ  ಬಂದಿದ್ದಾರೆ ಎನ್ನಲಾಗಿದೆ.ರಾಜಕೀಯ ವಲಯದಲ್ಲಿನ ಚರ್ಚೆಯ ಪ್ರಕಾರ ಈಗ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಒಂದೇ ವೇಳೆಗೆ ನಡೆಯುತ್ತಿರುವುದರಿಂದ ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎನ್ನುವ ಅಭಿಪ್ರಾಯದ ಹಿನ್ನಲೆಯಲ್ಲಿ ಕೆಸಿಆರ್ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಈಗ ಕೆಸಿಆರ್ ಅವರ ನಿರ್ಧಾರದಿಂದ  ಚುನಾವಣಾ ಆಯೋಗ ಮಿಜೋರಾಂ, ಚತ್ತೀಸ್ ಘಡ್, ರಾಜಸ್ಥಾನ, ಮಧ್ಯಪ್ರದೇಶಗಳ ಜೊತೆಗೆ ಚುನಾವಣೆಯ ದಿನಾಂಕವನ್ನು ನಿಗಧಿಪಡಿಸಬೇಕಾಗಿದೆ.

Trending News