IRCTC Scam: ತೇಜಸ್ವಿ ಯಾದವ್ ಸಂಕಷ್ಟದಲ್ಲಿ ಹೆಚ್ಚಳ, ಬಿಹಾರ ಉಪಮುಖ್ಯಮಂತ್ರಿಯ ಜಾಮೀನು ರದ್ದುಗೊಳಿಸುವಂತೆ ಕೋರಿದ ಸಿಬಿಐ

IRCTC Scam: ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿರುವ ಸಿಬಿಐ, ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸುವಂತೆ ಕೋರಿದೆ. ಇದನ್ನು ಪರಿಗಣಿಸಿರುವ ರೌಸ್ ಅವೆನ್ಯೂನಲ್ಲಿರುವ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರ ನ್ಯಾಯಾಲಯ ತೆಜೆಸ್ವಿ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ.  

Written by - Nitin Tabib | Last Updated : Sep 17, 2022, 05:53 PM IST
  • ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
  • ಸಿಬಿಐ ಮನವಿಯ ಮೇರೆಗೆ ರೌಸ್ ಅವೆನ್ಯೂದಲ್ಲಿರುವ ವಿಶೇಷ ನ್ಯಾಯಾಧೀಶೆ
  • ಗೀತಾಂಜಲಿ ಗೋಯೆಲ್ ಅವರ ನ್ಯಾಯಾಲಯ ತೇಜಸ್ವಿ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
IRCTC Scam: ತೇಜಸ್ವಿ ಯಾದವ್ ಸಂಕಷ್ಟದಲ್ಲಿ ಹೆಚ್ಚಳ, ಬಿಹಾರ ಉಪಮುಖ್ಯಮಂತ್ರಿಯ ಜಾಮೀನು ರದ್ದುಗೊಳಿಸುವಂತೆ ಕೋರಿದ ಸಿಬಿಐ title=
IRCTC Scam

IRCTC ಹಗರಣ ಪ್ರಕರಣದಲ್ಲಿ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದೆ. ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಸಿಬಿಐ ಮನವಿಯ ಮೇರೆಗೆ ರೌಸ್ ಅವೆನ್ಯೂದಲ್ಲಿರುವ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರ ನ್ಯಾಯಾಲಯ ತೇಜಸ್ವಿ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ-Politics: ಶಿವಾಜಿ ಪುತ್ಥಳಿ ಅನಾವರಣಗೊಳಿಸಿದ ಏಕನಾಥ್ ಸಿಂಧೆ, ಶುದ್ಧೀಕರಣ ನಡೆಸಿದ ಎನ್ಸಿಪಿ

ತೇಜಸ್ವಿ ಯಾದವ್ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಹೇಳಿದೆ. ಸಿಬಿಐ ಮನವಿಯನ್ನು ಪರಿಗಣಿಸಿ ಅವರ ಜಾಮೀನು ಏಕೆ ರದ್ದುಗೊಳಿಸಬಾರದು ಎಂದು ನ್ಯಾಯಾಲಯ ತೇಜಸ್ವಿ ಯಾದವ್ ಅವರನ್ನು ಕೇಳಿದೆ. ಆದರೆ, ಇದೀಗ ನ್ಯಾಯಾಲಯ ಯಾದವ್‌ಗೆ ಸಮನ್ಸ್‌ ನೀಡಿ ಉತ್ತರಿಸುವಂತೆ ಸೂಚಿಸಿದೆ. ತೇಜಸ್ವಿ ಯಾದವ್ ಸದ್ಯ IRCTC ಹಗರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದು, ಬಿಹಾರದ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆದಿದ್ದಾರೆ.

ಇದನ್ನೂ ಓದಿ-Project Cheetah: ಚಿರತೆಯ ಜೊತೆಗಿನ ಫೋಟೋ ಹಂಚಿಕೊಂಡು, ಪ್ರಧಾನಿ ಮೋದಿ ಕಾಲೆಳೆದ ಕಾಂಗ್ರೆಸ್ ಮುಖಂಡ

ತೇಜಸ್ವಿ ಯಾದವ್ ಐಆರ್‌ಸಿಟಿಸಿ ಹಗರಣದ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಇದೀಗ ಸಿಬಿಐ ಇದು ಗಂಭೀರ ವಿಚಾರ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದೆ. ಯಾದವ್ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ, ಆದ್ದರಿಂದ ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆಯಾಗುವಂತೆ ಅವರ ಜಾಮೀನು ರದ್ದುಗೊಳಿಸಬೇಕು. ತೇಜಸ್ವಿ ಯಾದವ್ ಅವರು ಹೊರಗೆ ಉಳಿದುಕೊಂಡಿರುವುದರಿಂದ ಪ್ರಕರಣದ ಅನೇಕ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಯಾದವ್ ಅವರಿಗೆ ನೀಡಿರುವ ಪರಿಹಾರವನ್ನು ರದ್ದುಗೊಳಿಸಬೇಕು ಎಂದು ಅದು ಕೋರಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News