ʼನಿಂಗಿದು ಬೇಕಿತ್ತಾ ಮಗಳೇ, ವಾಪಸ್ ಹೊಂಟೋಗು..ʼ; ಕನ್ನಡಿಗರನ್ನು ಕೆಣಕಿದ್ದ ಸುಗಂಧ್‌ ಶರ್ಮಾ ಕೆಲಸದಿಂದಲೇ ವಜಾ!

Sugandh Sharma: ಮೊದಲು ಕರ್ನಾಟಕ ಮತ್ತು ಬೆಂಗಳೂರಿನ ಬಗ್ಗೆ ಮಾತನಾಡಿದ್ದ ಉತ್ತರ ಭಾರತ ಸುಗಂಧ್‌ ಶರ್ಮಾಗೆ ಕನ್ನಡಿಗರು ಚಳಿ ಬಿಡಿಸಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಯೂ ಟರ್ನ್‌ ಹೊಡೆದ ಆಕೆ, ʼನನಗೆ ಕನ್ನಡ ಅಂದರೆ ತುಂಬಾ ಇಷ್ಟ, ಕನ್ನಡ ಕಲಿಯಲು ಪ್ರಯತ್ನ ಮಾಡ್ತಿದ್ದೇನೆʼ ಅಂತಾ ರೀಲ್ಸ್‌ ಮಾಡಿದ್ದಳು.

Written by - Puttaraj K Alur | Last Updated : Sep 23, 2024, 07:15 PM IST
  • ನಾವು ಹೋದರೆ ಬೆಂಗಳೂರು ಖಾಲಿ ಆಗುತ್ತೆ ಅಂದವಳಿಗೆ ಏನಾಯ್ತು ಗೊತ್ತಾ..?
  • ಕನ್ನಡಿಗರನ್ನು ಕೆಣಕಿ ಕೆಲಸ ಕಳೆದುಕೊಂಡ ರೀಲ್ಸ್‌ ರಾಣಿ ಸುಗಂಧ ಶರ್ಮಾ
  • ಸುಗಂಧ ಶರ್ಮಾ ವಿರುದ್ಧ FIR, ಕೆಲಸದಿಂದ ಕಿತ್ತು ಹಾಕಿದ ಫ್ರೀಡಂ ಕಂಪನಿ
ʼನಿಂಗಿದು ಬೇಕಿತ್ತಾ ಮಗಳೇ, ವಾಪಸ್ ಹೊಂಟೋಗು..ʼ; ಕನ್ನಡಿಗರನ್ನು ಕೆಣಕಿದ್ದ ಸುಗಂಧ್‌ ಶರ್ಮಾ ಕೆಲಸದಿಂದಲೇ ವಜಾ! title=
ಕೆಲಸ ಕಳೆದುಕೊಂಡ ಸುಗಂಧ ಶರ್ಮಾ!

Sugandh Sharma: ನಾವಿದ್ದರೆ ಮಾತ್ರ ಬೆಂಗಳೂರು... ನಾವೆಲ್ಲರೂ ಬಿಟ್ಟು ಹೋದರೆ ಇಡೀ ಬೆಂಗಳೂರೇ ಖಾಲಿಯಾಗುತ್ತದೆ.. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತವೆ ಎಂದಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮಾ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸುಗಂಧ್‌ ಶರ್ಮಾ ಇದೀಗ ಬೆಂಗಳೂರನ್ನೇ ಬಿಟ್ಟು ಹೋಗುವಂತಾಗಿದೆ. 

ಸೋಶಿಯಲ್‌ ಮೀಡಿಯಾದಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಮತ್ತು ರಾಜ್ಯದ ಕುರಿತು ಕೆಟ್ಟದಾಗಿ ಮಾತನಾಡಿದ ಬೆನ್ನಲ್ಲೇ ಸುಗಂಧ್‌ ಶರ್ಮಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಅನ್ನ-ನೀರು ಪಡೆದ ನಿಮಗೆ ಇಲ್ಲಿ ಇರಲು ಜಾಗವಿಲ್ಲ. ಕೂಡಲೇ ನೀವು ಬೆಂಗಳೂರು ಬಿಟ್ಟು ತೊಲಗಿ ಅಂತಾ ಸಾಕಷ್ಟು ಮಂದಿ ಕಿಡಿಕಾರಿದ್ದರು. ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿಗೆ ಬಂದು ಬೆಂಗಳೂರಿನ ಬಗ್ಗೆಯೇ ಕೆಟ್ಟದಾಗಿ ಮಾತನಾಡುವ ಹಕ್ಕು ನಿಮಗಿಲ್ಲ. ನಿಮ್ಮ ಅವಶ್ಯಕತೆಯೂ ನಮಗಿಲ್ಲ, ಈ ಪುಣ್ಯಭೂಮಿಯಲ್ಲಿ ಇರಲು ನಿಮಗೆ ಯೋಗ್ಯತೆ ಸಹ ಇಲ್ಲವೆಂದು ಆಕ್ರೋಶ ವ್ಯಕ್ತವಾಗಿತ್ತು. ಸುಗಂಧ ಶರ್ಮಾಗೆ ಬುದ್ದಿ ಕಲಿಸಲು ಕನ್ನಡ ಪರ ಸಂಘಟನೆಗಳು ಸಹ ಪ್ರತಿಭಟನೆ ಕೈಗೊಂಡಿದ್ದವು.  

ಇದನ್ನೂ ಓದಿ: ಕೊನೆಗೂ ಬಹುದಿನದ ಪ್ರಶ್ನೆಗೆ ಸಿಕ್ತು ಉತ್ತರ..! ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತೇ?

ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುಗಂಧ್‌ ಶರ್ಮಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಸಹ ಎಚ್ಚೆತ್ತುಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯನ್ನು ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಫ್ರೀಡಂ ಕಂಪನಿ ಸುಗಂಧ್‌ ಶರ್ಮಾರನ್ನು ಟರ್ಮಿನೇಟ್‌ ಮಾಡಿದೆ. ಫ್ರೀಡಂ ಕಂಪನಿಗೆ ತೆರಳಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಆಕೆ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. 

ಮೊದಲು ಕರ್ನಾಟಕ ಮತ್ತು ಬೆಂಗಳೂರಿನ ಬಗ್ಗೆ ಮಾತನಾಡಿದ್ದ ಉತ್ತರ ಭಾರತ ಸುಗಂಧ್‌ ಶರ್ಮಾಗೆ ಕನ್ನಡಿಗರು ಚಳಿ ಬಿಡಿಸಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಯೂ ಟರ್ನ್‌ ಹೊಡೆದ ಆಕೆ, ʼನನಗೆ ಕನ್ನಡ ಅಂದರೆ ತುಂಬಾ ಇಷ್ಟ, ಕನ್ನಡ ಕಲಿಯಲು ಪ್ರಯತ್ನ ಮಾಡ್ತಿದ್ದೇನೆʼ ಅಂತಾ ರೀಲ್ಸ್‌ ಮಾಡಿದ್ದಳು. ʼನಾನು ಟ್ರಾವೆಲರ್‌, ಊರೂರು ಸುತ್ತುತ್ತೇನೆ. ಬೆಂಗಳೂರು ಅಂದ್ರೆ ನನಗೆ ತುಂಬಾ ಇಷ್ಟ. ಈ ಊರಿನ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನಲ್ಲಿ ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಯಾವುದೇ ಭೇದ-ಭಾವವಿಲ್ಲ. ನಾವೆಲ್ಲಾ ಭಾರತೀಯರುʼ ಅಂತಾ ಆಕೆ ಹೇಳಿದ್ದಳು.

ಇದನ್ನೂ ಓದಿ: 300 ವರುಷಗಳ ಇತಿಹಾಸ ಹೊಂದಿದೆ ತಿರುಪತಿ ಲಡ್ಡು! ಈ ಪ್ರಸಾದದ ಹಿನ್ನೆಲೆ ಏನು? ಮೊದಲ ಬಾರಿಗೆ ತಯಾರಿಸಿದ್ದು ಯಾರು? ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ

ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಸುಗಂದ್‌ ಶರ್ಮಾ ವಿರುದ್ಧ ಸ್ಯಾಂಡಲ್‌ವುಡ್‌ ನಟ-ನಟಿಯರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಚಂದನ್‌ ಶೆಟ್ಟಿ, ಅನುಪಮಾ ಗೌಡ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ʼಕೂಡಲೇ ನೀವು ಬೆಂಗಳೂರು ಬಿಟ್ಟು ಹೊರಡಿʼ ಅಂತಾ ಕಿಡಿಕಾರಿದ್ದರು. ಇದೀಗ ಕೆಲಸ ಕಳೆದುಕೊಂಡಿರುವ ಸುಗಂದ್‌ ಶರ್ಮಾ ಮುಂದೇನು ಮಾಡ್ತಾರೆ ಅನ್ನೋದೇ ಪ್ರಶ್ನೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News