ಮೋದಿ ನೇತೃತ್ವದ ಸರ್ಕಾರ ನಮಗೆ ಅನ್ಯಾಯವೆಸಗಿದೆ-ಚಂದ್ರಬಾಬು ನಾಯ್ಡು

      

Last Updated : Mar 18, 2018, 03:55 PM IST
ಮೋದಿ ನೇತೃತ್ವದ ಸರ್ಕಾರ ನಮಗೆ ಅನ್ಯಾಯವೆಸಗಿದೆ-ಚಂದ್ರಬಾಬು ನಾಯ್ಡು  title=

ವಿಜಯವಾಡ: ಆಂದ್ರ ಪ್ರದೇಶಕ್ಕೆ ಆಗಿರುವ ಅನ್ಯಾಯದಿಂದ ಬೇಸತ್ತು ಸರ್ಕಾರ ಮತ್ತು ಮೈತ್ರಿಕೂಟದಿಂದ ಹೊರ ಬಂದಿರುವ ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತೆ ರಾಜ್ಯಕ್ಕಾಗಿರುವ ಅನ್ಯಾಯವನ್ನು ಕುರಿತು ಪುನರುಚ್ಚಿಸಿದ್ದಾರೆ. 

ಇಲ್ಲಿನ ಉಗಾದಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು "ನಾನು ಕೂಡ ದೇಶದ ಹಿರಿಯ ನಾಯಕ ಆದರೆ, ನಾನೆಂದು ಅಹಂಕಾರವನ್ನು ತೋರಿಲ್ಲ. ನಾನು ಕೇಳಿದ್ದಿಷ್ಟೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ ಅಷ್ಟೇ ಎಂದು ತಿಳಿಸಿದರು.

ಈ ಮೊದಲು ಟಿಡಿಪಿ ಪಕ್ಷವು ಆಂದ್ರ ಪ್ರದೇಶಕ್ಕೆ ವಿಶೇಷ ಆರ್ಥಿಕ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಕಡಿದುಕೊಂಡಿತ್ತು. 

Trending News