Good News: ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ, ಇನ್ಮುಂದೆ ಪೋಸ್ಟ್ ಆಫೀಸ್ ನಲ್ಲೂ ಸಿಗಲಿದೆ ಕನ್ಫರ್ಮ್ ಟಿಕೆಟ್, ಇಲ್ಲಿದೆ ವಿಧಾನ

Indian Railways Latest News: ಪ್ರಯಾಣಿಕರ ಅನುಕೂಲತೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಇದೀಗ ಅಂಚೆ ಕಚೇರಿಯಿಂದಲೂ ಟಿಕೆಟ್ ಬುಕ್ ಮಾಡುವ ಸೌಲಭ್ಯ ಆರಂಭಿಸಿದೆ. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ನಿರ್ವಹಿಸುವ ಸಂಸ್ಥೆಯಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC)  ಹೊಸ ಸೌಲಭ್ಯವನ್ನು ಆರಂಭಿಸಿದೆ.

Written by - Nitin Tabib | Last Updated : Jan 9, 2022, 02:37 PM IST
  • ಇನ್ಮುಂದೆ ಮತ್ತಷ್ಟು ಸುಲಭವಾಗಿ ಸಿಗಲಿದೆ ರೈಲು ಟಿಕೆಟ್.
  • ಇದಕ್ಕಾಗಿ ಕ್ಯೂ ನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ
  • ಏಕೆಂದರೆ ಇನ್ಮುಂದೆ ಪೋಸ್ಟ್ ಆಫೀಸ್ ನಲ್ಲೂ ಕೂಡ ಕನ್ಫರ್ಮ್ ಟಿಕೆಟ್ ಸಿಗಲಿದೆ.
Good News: ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ, ಇನ್ಮುಂದೆ ಪೋಸ್ಟ್ ಆಫೀಸ್ ನಲ್ಲೂ ಸಿಗಲಿದೆ ಕನ್ಫರ್ಮ್ ಟಿಕೆಟ್, ಇಲ್ಲಿದೆ ವಿಧಾನ title=
Indian Railways Latest News (File Photo)

Indian Railway News: ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇದೀಗ ನೀವು ರೈಲ್ವೆ ನಿಲ್ದಾಣಕ್ಕೆ ಹೋಗಿ ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲು ದೀರ್ಘ ಕ್ಯೂ ನಲ್ಲಿ ನಿಲ್ಲುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ನೀವು ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಲಭ್ಯಗಳು ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಂಚೆ ಕಚೇರಿಯಿಂದ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು (Indian Railways New Service) ಆರಂಭಿಸಿದೆ.

ಈ ವಿಶೇಷ ಸೌಲಭ್ಯಕ್ಕಾಗಿ, ರೈಲ್ವೆ ಟಿಕೆಟ್ ಬುಕಿಂಗ್ ಅನ್ನು ನಿರ್ವಹಿಸುವ ಕಂಪನಿಯಾದ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಉಪಕ್ರಮ ಆರಂಭಿಸಿದೆ. ಈ ಸೌಲಭ್ಯವು ರೈಲ್ವೆಯ ಆಧುನೀಕರಣ ಯೋಜನೆಯ ಭಾಗವಾಗಿದೆ. ಇದರ ಅಡಿಯಲ್ಲಿ ರೈಲ್ವೆಯು ಅಂಚೆ ಇಲಾಖೆಯ ಸಹಯೋಗದೊಂದಿಗೆ ಅಂಚೆ ಕಚೇರಿಯಲ್ಲಿ ರೈಲು ಕಾಯ್ದಿರಿಸುವ ಸೌಲಭ್ಯವನ್ನು ಪ್ರಾರಂಭಿಸುತ್ತಿದೆ.

ರೈಲ್ವೆಯ ಅದ್ಭುತ ಉಪಕ್ರಮ
ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ಈ ವಿಶೇಷ ಸೌಲಭ್ಯ ಉತ್ತರ ಪ್ರದೇಶದಿಂದ ಪ್ರಾರಂಭವಾಗುತ್ತಿದ್ದು, ಸುಮಾರು 9147 ಅಂಚೆ ಕಚೇರಿಗಳಲ್ಲಿ ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯವಾಗಲಿದೆ. ಇದರಿಂದ ಜನರು ತಮ್ಮ ರೈಲು ಟಿಕೆಟ್ ಕಾಯ್ದಿರಿಸಲು ನಿಲ್ದಾಣಕ್ಕೆ ಅಥವಾ ಅವರ ಏಜೆಂಟ್‌ಗಳ ಬಳಿ ಹೋಗಬೇಕಾಗಿಲ್ಲವಾದ್ದರಿಂದ ಸಾಕಷ್ಟು ಸಮಯವನ್ನು ಉಳಿಯಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ  IRCTC ಯ ಈ ಹೊಸ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. 

ಇದನ್ನೂ ಓದಿ-Indian Railways: ಈಗ ಈ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್‌ಗಳು ಮಾತ್ರ ಲಭ್ಯ

ಈ ಸೌಲಭ್ಯ ಯಾರಿಗೆ ಸಿಗಲಿದೆ? (Indian Railways New Rule)
ರೈಲ್ವೆಯ ಈ ವಿಶೇಷ ಸೇವೆಯಿಂದ ಗ್ರಾಮಸ್ಥರಿಗೆ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ದೂರದ ಹಳ್ಳಿಗಳು ಮತ್ತು ದೂರದ ಸ್ಥಳಗಳಲ್ಲಿ ವಾಸಿಸುವ ಜನರಿಗೂ ಸಹ ರಿಸರ್ವೇಶನ್ ಮಾಡುವ ಸೌಲಭ್ಯ ಸಿಗಲಿದೆ. ಇದರಿಂದ ಯಾರು ಬೇಕಾದರೂ ತಮ್ಮ ಟಿಕೆಟ್ ಅನ್ನು ಹತ್ತಿರದ ಅಂಚೆ ಕಚೇರಿಯಿಂದ ಸುಲಭವಾಗಿ ಪಡೆಯಬಹುದು. ಈ ಮೊದಲು ಆಫ್‌ಲೈನ್ ಟಿಕೆಟ್‌ಗಾಗಿ ಪ್ರಯಾಣಿಕರು ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-'ಸೌರಶಕ್ತಿ' ಬಳಸಿ 3 ಕೋಟಿ ಉಳಿಸಿದ ಭಾರತೀಯ ರೈಲ್ವೆ

ಈ ಕುರಿತು ಮಾಹಿತಿ ನೀಡಿರುವ ಉತ್ತರ ಮಧ್ಯ ರೈಲ್ವೆ (ಎನ್‌ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಂ ಶರ್ಮಾ, ರಾಜ್ಯ ರಾಜಧಾನಿಯ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ರೇಲ್ವೆ ಸಚಿವರು ಗೋಮತಿ ನಗರ ರೈಲು ನಿಲ್ದಾಣದ ಹೊಸದಾಗಿ ನಿರ್ಮಿಸಲಾದ ಎರಡನೇ ಪ್ರವೇಶ ದ್ವಾರ ಸೇರಿದಂತೆ ಟರ್ಮಿನಲ್ ಸೌಲಭ್ಯಗಳು ಮತ್ತು ಕೋಚಿಂಗ್ ಸಂಕೀರ್ಣವನ್ನು ಉದ್ಘಾಟಿಸಿದ್ದಾರೆ ಎಂದು ಹೇಳಿದ್ದಾರೆ. ಗೋಮ್ತಿ ನಗರ-ಕಾಮಾಖ್ಯ ಎಕ್ಸ್‌ಪ್ರೆಸ್, ಮೈಲಾನಿ-ಬಿಚಿಯಾ ಪ್ಯಾಸೆಂಜರ್ ರೈಲು ಮತ್ತು ಕಾನ್ಪುರ ಸೆಂಟ್ರಲ್-ಬ್ರಹ್ಮಾವರ್ಟ್ ಮೆಮು ರೈಲನ್ನು ಕೂಡ ಸಚಿವರು ಉದ್ಘಾಟಿಸಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ-120 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಚಿಂತನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News