India On Afghanistan Crisis: ಅಫ್ಘಾನಿಸ್ತಾನದ ಸ್ಥಿತಿಯ ಮೇಲೆ ಭಾರತ ನಿಗಾವಹಿಸಿದೆ, ತುರ್ತು ದೂರವಾಣಿ ಸಂಖ್ಯೆ ಜಾರಿಗೊಳಿಸಿದ ವಿದೇಶಾಂಗ ಇಲಾಖೆ

India On Afghanistan Crisis - ಈ ಕುರಿತು ಹೇಳಿಕೆ ನೀಡದಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಅಫ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಗಮನಿಸಲಾಗುತ್ತಿದ್ದು, ಅಲ್ಲಿನ ನಾಗರಿಕರ ಸುರಕ್ಷತೆಗಾಗಿ ಸರ್ಕಾರವು ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಗುತ್ತಿದೆ ಎಂದು ಹೇಳಿದ್ದಾರೆ. ಈ ಸೂಚನೆಯು ಅಫ್ಘಾನಿಸ್ತಾನದಿಂದ ಭಾರತಕ್ಕೆ ತಕ್ಷಣವೇ ಹಿಂದಿರುಗುವ ಕರೆಯನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ. 

Written by - Nitin Tabib | Last Updated : Aug 16, 2021, 09:38 PM IST
  • ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಮೇಲೆ ಭಾರತದ ಕಣ್ಣು.
  • ಸಂಪರ್ಕಕ್ಕಾಗಿ ತುರ್ತು ದೂರವಾಣಿ ಸಂಖ್ಯೆ ಜಾರಿ.
  • ವಿದೇಶಾಂಗ ಇಲಾಖೆಯ ವಕ್ತಾರರಿಂದ ಸುದ್ದಿಗೋಷ್ಠಿ
India On Afghanistan Crisis: ಅಫ್ಘಾನಿಸ್ತಾನದ ಸ್ಥಿತಿಯ ಮೇಲೆ ಭಾರತ ನಿಗಾವಹಿಸಿದೆ, ತುರ್ತು ದೂರವಾಣಿ ಸಂಖ್ಯೆ ಜಾರಿಗೊಳಿಸಿದ ವಿದೇಶಾಂಗ ಇಲಾಖೆ title=
India On Afghanistan Crisis (File Photo)

ನವದೆಹಲಿ: Indian Government On Afghanistan Crisis - ತಾಲಿಬಾನ್ (Taliban Updates) ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ವಿಶ್ವಾದ್ಯಂತದ ದೇಶಗಳು ಪ್ರಸ್ತುತ ಅಫ್ಘಾನಿಸ್ತಾನದ (Afghanistan News) ಪರಿಸ್ಥಿತಿಯ ಮೇಲೆ ತಮ್ಮ ಗಮನ ಕೆನ್ದ್ರೀಕರಿಸಿವೆ. ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಮತ್ತು ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಲ್ಲಿ ನಿರತವಾಗಿವೆ. ಏತನ್ಮಧ್ಯೆ, ಭಾರತ ಸರ್ಕಾರವು (Government Of India) ಅಫ್ಘಾನಿಸ್ತಾನದ ಕುರಿತು ಒಂದು ಹೇಳಿಕೆಯನ್ನು ನೀಡಿದೆ. ಭಾರತವು ಅಫ್ಘಾನಿಸ್ತಾನದಲ್ಲಿನ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of Foreign Affairs) ಹೇಳಿದೆ.

ಈ ಕುರಿತು ಹೇಳಿಕೆ ನೀಡದಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಅಫ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಗಮನಿಸಲಾಗುತ್ತಿದ್ದು, ಅಲ್ಲಿನ ನಾಗರಿಕರ ಸುರಕ್ಷತೆಗಾಗಿ ಸರ್ಕಾರವು ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಗುತ್ತಿದೆ ಎಂದು ಹೇಳಿದ್ದಾರೆ. ಈ ಸೂಚನೆಯು ಅಫ್ಘಾನಿಸ್ತಾನದಿಂದ ಭಾರತಕ್ಕೆ ತಕ್ಷಣವೇ ಹಿಂದಿರುಗುವ ಕರೆಯನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಭದ್ರತೆಯ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Imran Khan On Afghanistan Crisis - ತಾಲಿಬಾನ್ ಗೆ ಪಾಕ್, ಚೀನಾ ಹಾಗೂ ಇರಾನ್ ಗಳ ಬಹಿರಂಗ ಬೆಂಬಲ, 'ಗುಲಾಮಗಿರಿಯ ಬಲೆಯಿಂದ ಮುಕ್ತಿ' ಎಂದ 'ತಾಲಿಬಾನ್ ಖಾನ್'

ಸಂಪರ್ಕಕ್ಕಾಗಿ ತುರ್ತು ದೂರವಾಣಿ ಸಂಖ್ಯೆ ಜಾರಿ
ಅಫ್ಘಾನಿಸ್ತಾನದ ಎಲ್ಲಾ ನಗರಗಳಲ್ಲಿರುವ ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದಲ್ಲಿರಲು ನಾವು ತುರ್ತು ಸಂಖ್ಯೆಗಳನ್ನು ಜಾರಿ ಮಾಡಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.  ಪ್ರಸ್ತುತ, ಅಫ್ಘಾನಿಸ್ತಾನದಲ್ಲಿರುವ ಕೆಲವು ನಾಗರಿಕರು ಭಾರತಕ್ಕೆ ಮರಳಲು ಬಯಸಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಭಯ ಯಾವ ರೀತಿ ಇದೆ ಗೊತ್ತಾ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ (Talibani Rule) ಮರಳಿದ ನಂತರ, ಮತ್ತೊಮ್ಮೆ ಎರಡು ದಶಕಗಳ ಹಿಂದಿನ ಹಳೆಯ ಭಯ ಜನರ ಮನಸ್ಸಿನಲ್ಲಿ ಬೇರೂರಿದೆ. ದೇಶದ ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ನಂತರ, ಹಿಂಸಾತ್ಮಕ ಘಟನೆಗಳು ಸಹ ಅನೇಕ ಸ್ಥಳಗಳಿಂದ ಮುಂಚೂಣಿಗೆ ಬಂದಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ತಾಲಿಬಾನ್ ಪರವಾಗಿ ಅದು ಶಾಂತಿಯುತವಾಗಿ ಅಧಿಕಾರದ ವರ್ಗಾವಣೆಯನ್ನು ಬಯಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Video ನೋಡಿ: ಅಫ್ಘಾನ್ ತೊರೆಯಲು ಕಾಬೂಲ್‌ ಏರ್‌ಪೋರ್ಟ್‌ನತ್ತ ಜನಜಾತ್ರೆ, ವಿಮಾನವೇರಲು ನೂಕುನುಗ್ಗಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News