“EWS Reservation ಕಾನೂನು ಬಾಹಿರವಲ್ಲ”: Supreme ಐತಿಹಾಸಿಕ ತೀರ್ಪು

Supreme Court Verdict on EWS: ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ನ್ಯಾಯಮೂರ್ತಿ ಬೇಲಾ ತ್ರಿವೇದಿ, ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಜೆಬಿ ಪಾಸ್ಟೋರ್ವಾಲಾ ಸಾಮಾನ್ಯ ವರ್ಗದ ಜನರಿಗೆ ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವ ನಿರ್ಧಾರವನ್ನು ಸಮರ್ಥಿಸಿದರು.

Written by - Bhavishya Shetty | Last Updated : Nov 7, 2022, 11:32 AM IST
    • ಸಾಮಾನ್ಯ ವರ್ಗದ ಜನರಿಗೆ 10 ಪ್ರತಿಶತ ಮೀಸಲಾತಿ ನೀಡುವ ಪರವಾಗಿ ತೀರ್ಪು
    • ಸೋಮವಾರ ಮಹತ್ವದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್
    • ಐದು ನ್ಯಾಯಾಧೀಶರ ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ಇಡಬ್ಲ್ಯೂಎಸ್ ಪರವಾಗಿದ್ದರು
“EWS Reservation ಕಾನೂನು ಬಾಹಿರವಲ್ಲ”: Supreme ಐತಿಹಾಸಿಕ ತೀರ್ಪು title=
EWS

Supreme Court decision on EWS Reservation: ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ವಿಚಾರಣೆ ನಡೆಸಿದ್ದು, ಆರ್ಥಿಕ ಆಧಾರದ ಮೇಲೆ ಸಾಮಾನ್ಯ ವರ್ಗದ ಜನರಿಗೆ 10 ಪ್ರತಿಶತ ಮೀಸಲಾತಿ ನೀಡುವ ಪರವಾಗಿ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ಇಡಬ್ಲ್ಯೂಎಸ್ (Economically Weaker Section) ಮೀಸಲಾತಿ ಪರವಾಗಿ ತೀರ್ಪು ನೀಡಿದ್ದಾರೆ. ಇಡಬ್ಲ್ಯೂಎಸ್‌ಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವುದರ ವಿರುದ್ಧ 30 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಐವರು ಸದಸ್ಯರ ಪೀಠವು ಸೆಪ್ಟೆಂಬರ್ 27 ರಂದು ನಡೆದ ಕೊನೆಯ ವಿಚಾರಣೆಯಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.

ಇದನ್ನೂ ಓದಿ: ಟ್ರೆಂಡ್ ಬದಲಾಯಿಸಿ, ಬಿಜೆಪಿಗೆ ಮತ ಹಾಕಿ ಮತ್ತೆ ಅಧಿಕಾರಕ್ಕೆ ತನ್ನಿ: ಪ್ರಧಾನಿ ಮೋದಿ

5 ರಲ್ಲಿ 4 ನ್ಯಾಯಾಧೀಶರು ಮೀಸಲಾತಿ ಪರವಾಗಿ ತೀರ್ಪು:

ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ನ್ಯಾಯಮೂರ್ತಿ ಬೇಲಾ ತ್ರಿವೇದಿ, ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಜೆಬಿ ಪಾಸ್ಟೋರ್ವಾಲಾ ಸಾಮಾನ್ಯ ವರ್ಗದ ಜನರಿಗೆ ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವ ನಿರ್ಧಾರವನ್ನು ಸಮರ್ಥಿಸಿದರು. ಅದೇ ಸಮಯದಲ್ಲಿ, ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಮೀಸಲಾತಿ ವಿರುದ್ಧ ತೀರ್ಪು ನೀಡಿದರು. ಇದು ಮೂಲಭೂತ ಮನೋಭಾವಕ್ಕೆ ಅನುಗುಣವಾಗಿಲ್ಲ ಎಂದು ಅವರು ಹೇಳಿದರು. ಎಸ್‌ಟಿ, ಎಸ್‌ಸಿ ಮತ್ತು ಒಬಿಸಿಯನ್ನು ಮೀಸಲಾತಿಯಿಂದ ದೂರವಿಡುವುದು ಸರಿಯಲ್ಲ ಎಂದರು.

ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ:

ಆಗಿನ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ಹಿರಿಯ ವಕೀಲರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಇಡಬ್ಲ್ಯೂಎಸ್ ಮೀಸಲಾತಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿದೆಯೇ ಎಂಬ ಕಾನೂನು ಪ್ರಶ್ನೆಗೆ ಸೆಪ್ಟೆಂಬರ್ 27 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಶಿಕ್ಷಣ ತಜ್ಞ ಮೋಹನ್ ಗೋಪಾಲ್ ಅವರು ಸೆಪ್ಟೆಂಬರ್ 13 ರಂದು ಪೀಠದ ಮುಂದೆ ಈ ವಿಷಯವನ್ನು ವಾದಿಸಿದ್ದರು. ಜೊತೆಗೆ ಇಡಬ್ಲ್ಯೂಎಸ್ ಕೋಟಾ ತಿದ್ದುಪಡಿಯನ್ನು ವಿರೋಧಿಸಿದರು, ಇದು ಮೀಸಲಾತಿ ಪರಿಕಲ್ಪನೆಯನ್ನು "ಹಿಂಬಾಗಿಲಿನ ಮೂಲಕ" ನಾಶಪಡಿಸುವ ಪ್ರಯತ್ನ ಎಂದು ಅವರು ಕರೆದಿದ್ದರು.

ಇದನ್ನೂ ಓದಿ: BJP Manifesto : ಹಿಮಾಚಲ ಪ್ರದೇಶ ಚುನಾವಣೆ : ಬಿಜೆಪಿ ಪ್ರಣಾಳಿಕೆ ಬಿಡುಗಡೆ ; ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ 33% ಮೀಸಲಾತಿ

2019ರಲ್ಲಿ ಮೀಸಲಾತಿ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ:

ಜನವರಿ 2019 ರಲ್ಲಿ, 103 ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕ ಆಧಾರದ ಮೇಲೆ ಸಾಮಾನ್ಯ ವರ್ಗದ ಜನರಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು (EWS ಮೀಸಲಾತಿ) ನೀಡಲು ನಿರ್ಧರಿಸಲಾಗಿದೆ. ಕೇಂದ್ರದ ಈ ನಿರ್ಧಾರವನ್ನು ವಿರೋಧಿಸಿದ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News