ಮುಂಬೈನಲ್ಲಿ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥ

ಹವಾಮಾನ ಇಲಾಖೆ ಧಾರಾಕಾರ ಮಳೆಯಾಗುವ ಬಗ್ಗೆ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಸೆಪ್ಟೆಂಬರ್ 23 ರಂದು ಬಿಎಂಸಿ ತುರ್ತು ಸೇವೆಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ.

Last Updated : Sep 23, 2020, 11:58 AM IST
  • ಮುಂಬೈನಲ್ಲಿ ಭಾರಿ ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ತುಂಬಿ ಹರಿದ ನೀರು
  • ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ
  • ತುರ್ತು ಸೇವೆಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಲು ಬಿಎಂಸಿ ನಿರ್ಧಾರ
ಮುಂಬೈನಲ್ಲಿ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥ title=

ಮುಂಬೈ: ವಾಣಿಜ್ಯ ನಗರಿ ಮುಂಬೈ (Mumbai)ನಲ್ಲಿ ಇಂದು ಧಾರಾಕಾರ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಅಗತ್ಯ ಸೇವೆಗಳ ಹೊರತಾಗಿ ಇತರ ಎಲ್ಲ ಕಚೇರಿಗಳು ಮತ್ತು ಕಂಪನಿಗಳನ್ನು ಸ್ಥಗಿತಗೊಳಿಸುವಂತೆ ಬಿಎಂಸಿ ಇಂದು ಕರೆ ನೀಡಿದೆ. ಜನರು ಸಂಪೂರ್ಣವಾಗಿ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಹೋಗುವಂತೆ ಮನವಿ ಮಾಡಲಾಗಿದೆ.

ಹವಾಮಾನ ಇಲಾಖೆ(IMD)ಯಿಂದ ಧಾರಾಕಾರ ಮಳೆಯಾಗುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಸೆಪ್ಟೆಂಬರ್ 23 ರಂದು ಬಿಎಂಸಿ ತುರ್ತು ಸೇವೆಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ. ಅದಾಗ್ಯೂ ಎಲ್ಲಾ ಅಗತ್ಯ ಸೇವೆಗಳು ತಮ್ಮ ನೌಕರರ ಪರವಾಗಿ ಮುಂದುವರಿಯುತ್ತದೆ ಎಂದು ಬಿಎಂಸಿ ಪರವಾಗಿ ಹೇಳಲಾಗಿದೆ.

ಸೆಪ್ಟೆಂಬರ್ 22 ರ ಬೆಳಿಗ್ಗೆ ಎಂಟು ಗಂಟೆಯಿಂದ ಸೆಪ್ಟೆಂಬರ್ 23ರ ಬೆಳಿಗ್ಗೆ ಎಂಟು ಗಂಟೆಯವರೆಗೆ ಮುಂಬಯಿಯಲ್ಲಿ ಸರಾಸರಿ ಮಳೆಯಾಗಿದೆ.

ಮಳೆ ಹಾನಿಗೆ ಕ್ಷೇತ್ರವಾರು ಪ್ರತ್ಯೇಕ ಸಭೆ: ಸಚಿವ ಎಸ್.ಟಿ. ಸೋಮಶೇಖರ್

CT- 267.62 ಮಿ.ಮೀ.
ES- 173.22 ಮಿ.ಮೀ.
WS- 251.48 ಮಿಮೀ

ಈ ಪ್ರದೇಶಗಳಲ್ಲಿ ಹೆಚ್ಚಿನ ಪರಿಣಾಮ:-
ವಿಶೇಷವೆಂದರೆ ಮಂಗಳವಾರ ತಡರಾತ್ರಿ ಮುಂಬೈನಲ್ಲಿ ಪ್ರಾರಂಭವಾದ ಮಳೆಯು ದಿನವಿಡೀ ಸಮಸ್ಯೆಯನ್ನು ಹೆಚ್ಚಿಸಿದೆ. ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ನೀರು ಹರಿಯುತ್ತಿದೆ. ಮುಂಬೈನ ಸಿಯಾನ್, ಮಾಟುಂಗಾ, ಕಿಂಗ್ ಸರ್ಕಲ್, ದಾದರ್, ತಗ್ಗು ಪ್ರದೇಶಗಳಲ್ಲಿ ನೀರು ಲಾಗಿಂಗ್ ಆಗಿದ್ದರಿಂದ ಜನರು ತೊಂದರೆಗೆ ಸಿಲುಕಿದರು ಮತ್ತು ಇಂದಿಗೂ ಸಹ ಕೆಲಸಗಾರರು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಮಂಗಳವಾರ ಸುರಿದ ಭಾರಿ ಮಳೆ (Heavy Rain)ಯಿಂದಾಗಿ ಕಚೇರಿಗೆ ಹೋಗುವವರ ಸ್ಥಿತಿಯೂ ತೊಂದರೆಗೀಡಾಗಿತ್ತು. ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ನೀರು ತುಂಬಿದ್ದರಿಂದ ಪ್ರಯಾಣಿಕರು ತಡರಾತ್ರಿಯವರೆಗೆ ಶೆಡ್ ಅಡಿಯಲ್ಲಿ ಆಶ್ರಯ ಪಡೆಯುವಂತಾಯಿತು. ಹಳಿಗಳಲ್ಲಿ ನೀರು ತುಂಬಿದ್ದರಿಂದ ಪ್ರಯಾಣಿಕರು ರೈಲುಗಾಗಿ ಬಹಳ ಸಮಯ ಕಾಯಬೇಕಾಯಿತು.

ವಿಶೇಷವೆಂದರೆ ಮಳೆಯ ನಂತರ ಮುಳುಗುವುದು ಮುಂಬೈಗೆ ಹೊಸತಲ್ಲ. ಪ್ರತಿ ಬಾರಿಯೂ ಮಳೆ ಮುಂಬೈ (Mumbai Rain) ಜನರಿಗೆ ಇದೇ ರೀತಿಯ ಸಮಸ್ಯೆಗಳನ್ನು ತರುತ್ತದೆ.

Trending News