COVID-19 ಬಿಕ್ಕಟ್ಟು ನಮಗೆ ಸ್ವಾವಲಂಬಿಗಳಾಗಿರಲು ಕಲಿಸಿದೆ: ಪ್ರಧಾನಿ ನರೇಂದ್ರ ಮೋದಿ

ಕರೋನವೈರಸ್ ಸಾಂಕ್ರಾಮಿಕವು ನಾವು ಹಿಂದೆಂದೂ ಎದುರಿಸದ ಹೊಸ ಸವಾಲುಗಳನ್ನು ಎಸೆದಿದೆ, ಆದರೆ ಇದು ಹೊಸ ವಿಷಯಗಳನ್ನು ಕಲಿಯುವಂತೆ ಮಾಡಿದೆ.

Last Updated : Apr 24, 2020, 12:32 PM IST
COVID-19 ಬಿಕ್ಕಟ್ಟು ನಮಗೆ ಸ್ವಾವಲಂಬಿಗಳಾಗಿರಲು ಕಲಿಸಿದೆ: ಪ್ರಧಾನಿ ನರೇಂದ್ರ ಮೋದಿ title=

ನವದೆಹಲಿ: ಪ್ರತಿಯೊಬ್ಬರಿಗೂ ಸ್ವಾವಲಂಬಿಗಳಾಗಿರುವುದನ್ನು ಕೊರೋನಾವೈರಸ್ ಕೋವಿಡ್-19 (Covid-19) ನಮಗೆ ಕಲಿಸಿದೆ. ಇಲ್ಲದಿದ್ದರೆ ಇಂತಹ ಸಮಸ್ಯೆಗಳನ್ನು ಎದುರಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಪಂಚಾಯತಿ ರಾಜ್ ದಿವಾಸ್ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರದಾದ್ಯಂತದ ಗ್ರಾಮ ಮುಖ್ಯಸ್ಥರೊಂದಿಗೆ ಸಂವಹನ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೋನಾವೈರಸ್ (Coronavirus)  COVID-19 ಬಿಕ್ಕಟ್ಟು ಸ್ವಾವಲಂಬಿಗಳಾಗಿರಲು ನಮಗೆ ಕಲಿಸಿದೆ ಎಂದು  ಹೇಳಿದ್ದಾರೆ.

Coronavirus: ಚೀನಾದ ವಂಚನೆಗೆ ಪ್ರತ್ಯುತ್ತರ ಭಾರತೀಯ ವಿಜ್ಞಾನಿಗಳ ಕಮಾಲ್

ಗ್ರಾಮದ ಮುಖ್ಯಸ್ಥರೊಂದಿಗಿನ  ಸಂವಾದದ ಸಮಯದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲು ನಾವು ಮುಖಾಮುಖಿಯಾಗಿ ಸಂವಹನ ನಡೆಸುತ್ತಿದ್ದೆವು. ಆದರೆ ನಾವು ಈಗ ಕೊರೊನಾವೈರಸ್ ಕಾರಣದಿಂದಾಗಿ ತಂತ್ರಜ್ಞಾನದ ಸಹಾಯದೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಹಳ್ಳಿಗಳು, ಜಿಲ್ಲೆಗಳು ಮತ್ತು ನಗರಗಳು ಅವಲಂಬಿತವಾಗಿರಬೇಕು ಎಂದು ಪಿಎಂ ಹೇಳಿದರು.

Lockdown: ಮನೆ ತಲುಪಲು 1000 KM ದೋಣಿಯಲ್ಲಿ ಸಾಗಿದ ಕಾರ್ಮಿಕರು, ಮುಂದೆ...!

ಕರೋನವೈರಸ್ ಸಾಂಕ್ರಾಮಿಕವು ನಾವು ಹಿಂದೆಂದೂ ಎದುರಿಸದ ಹೊಸ ಸವಾಲುಗಳನ್ನು ಎಸೆದಿದೆ ಆದರೆ ಇದು ಹೊಸ ವಿಷಯಗಳನ್ನು ಕಲಿಯುವಂತೆ ಮಾಡಿದೆ.  ತಮ್ಮ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಭಾರತೀಯರು ಕರೋನಾಗೆ ತಲೆಬಾಗುತ್ತಿಲ್ಲ, ಆದರೆ ಸಾಂಪ್ರದಾಯಿಕ ಜ್ಞಾನದಿಂದಾಗಿ ಅದನ್ನು ದೃಢ ನಿಶ್ಚಯದಿಂದ ಎದುರಿಸುತ್ತಿದ್ದೇವೆ. ಅದಕ್ಕಾಗಿ ಪ್ರತಿಯೊಬ್ಬ ಭಾರತೀಯನಿಗೂ ಧನ್ಯವಾದಗಳು ಎಂದರು.

ಪಂಚಾಯತಿ ರಾಜ್ ದಿವಾಸ್ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇ-ಗ್ರಾಮಸ್ವರಾಜ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಿದರು. ಪ್ರಧಾನಿ ಮತ್ತು ಗ್ರಾಮದ ಮುಖ್ಯಸ್ಥರ ನಡುವಿನ ಸಂವಾದದ ಸಂದರ್ಭದಲ್ಲಿ ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಉಪಸ್ಥಿತರಿದ್ದರು.

ಸ್ವಾಮಿತ್ವಾ ಆ್ಯಪ್‌ನ (Swamitva App) ಅನುಕೂಲಗಳನ್ನು ವಿವರಿಸಿದ ಪ್ರಧಾನಿ ಮೋದಿ ಇದು ಗ್ರಾಮದ ಜನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.

ರಂಜಾನ್ ಮಾಸಾಚರಣೆ ಪಾಲಿಸಬೇಕಾದ ಮಾರ್ಗಸೂಚಿಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪೋರ್ಟಲ್ ಪಂಚಾಯತ್ ರಾಜ್ ಸಚಿವಾಲಯದ ಹೊಸ ಉಪಕ್ರಮವಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ತಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ಯನ್ನು ತಯಾರಿಸಲು ಮತ್ತು ಕಾರ್ಯಗತಗೊಳಿಸಲು ಒಂದೇ ಇಂಟರ್ಫೇಸ್ ಅನ್ನು ಒದಗಿಸುತ್ತದೆ.

ಈ ಯೋಜನೆಯು ಗ್ರಾಮೀಣ ಭಾರತಕ್ಕೆ ಸಮಗ್ರ ಆಸ್ತಿ ಮೌಲ್ಯಮಾಪನ ಪರಿಹಾರವನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಭೂಮಿಯನ್ನು ಗುರುತಿಸುವುದು ಇತ್ತೀಚಿನ ಸಮೀಕ್ಷೆ ವಿಧಾನಗಳ ಬಳಕೆಯಿಂದ ಮಾಡಲ್ಪಡುತ್ತದೆ - ಪಂಚಾಯತಿ ರಾಜ್ ಸಚಿವಾಲಯ, ರಾಜ್ಯ ಪಂಚಾಯತಿ ರಾಜ್ ಇಲಾಖೆಗಳು, ರಾಜ್ಯ ಕಂದಾಯ ಇಲಾಖೆಗಳು ಮತ್ತು ಭಾರತದ ಸಮೀಕ್ಷೆಯ ಸಹಯೋಗದೊಂದಿಗೆ ಡ್ರೋನ್ ತಂತ್ರಜ್ಞಾನ ಇದಕ್ಕೆ ಸಹಕಾರಿಯಾಗಿದೆ.

Trending News