BIG BREAKING : ಮುರಿದುಬಿತ್ತು ಜೆಡಿಯು-ಬಿಜೆಪಿ ಮೈತ್ರಿ.. ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ!?

Bihar Political Crisis: ಇಂದು ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಮುರಿದು ಬಿದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಜನತಾ ದಳ ಯುನೈಟೆಡ್ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ನಿತೀಶ್ ಕುಮಾರ್ ಬಿಜೆಪಿ ತೊರೆಯುತ್ತಾರೆ ಎಂಬ ಊಹಾಪೋಹಗಳು ನಿರಂತರವಾಗಿ ಹರಿದಾಡುತ್ತಿದೆ. ಆದರೆ, ಜೆಡಿಯು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

Written by - Chetana Devarmani | Last Updated : Aug 9, 2022, 02:16 PM IST
  • ಬಿಹಾರದಲ್ಲಿ ಮುರಿದುಬಿತ್ತು ಜೆಡಿಯು-ಬಿಜೆಪಿ ಮೈತ್ರಿ
  • ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ!?
  • ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಸಿಎಂ ನಿತೀಶ್‌ ಕುಮಾರ್‌
BIG BREAKING : ಮುರಿದುಬಿತ್ತು ಜೆಡಿಯು-ಬಿಜೆಪಿ ಮೈತ್ರಿ.. ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ!?  title=
ಸಿಎಂ ನಿತೀಶ್‌ ಕುಮಾರ್‌

Bihar Political Crisis: ಇಂದು ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಮುರಿದು ಬಿದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಜನತಾ ದಳ ಯುನೈಟೆಡ್ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಬಿಜೆಪಿಯನ್ನು ನಿತೀಶ್ ಕುಮಾರ್ ತೊರೆಯುತ್ತಾರೆ ಎಂಬ ಊಹಾಪೋಹ ನಿರಂತರವಾಗಿ ಇತ್ತು, ಇದೀಗ ಅದು ನಿಜವಾದಂತಿದೆ. ಆದರೆ, ಜೆಡಿಯು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಎರಡೂ ಪಕ್ಷಗಳ ಮೈತ್ರಿ ಮುರಿದು ಬಿದ್ದಿದೆ. ಸಿಎಂ ನಿತೀಶ್ ಕುಮಾರ್ ಅವರು ಆರ್‌ಜೆಡಿ, ಎಡ ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾಮೈತ್ರಿಕೂಟದೊಂದಿಗೆ ಸರ್ಕಾರ ರಚಿಸಲಿದ್ದಾರೆ. ಸಂಜೆ ರಾಜ್ಯಪಾಲರನ್ನು ಭೇಟಿಯಾದಾಗ ಅವರೊಂದಿಗೆ ಮಹಾಮೈತ್ರಿಕೂಟದ ನಾಯಕರೂ ಉಪಸ್ಥಿತರಿದ್ದು ರಾಜ್ಯಪಾಲರಿಗೆ ಬೆಂಬಲ ಪತ್ರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಜೆಡಿಯು ಶಾಸಕರು, ಸಂಸದರು ಮತ್ತು ಮುಖಂಡರು ನಿತೀಶ್ ಕುಮಾರ್ ಅವರ ಜೊತೆಗಿದ್ದೇವೆ ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅವರೆಲ್ಲರೂ ಒಟ್ಟಿಗೆ ಇರುತ್ತಾರೆ ಎನ್ನಲಾಗಿದೆ. 

ಇದನ್ನೂ ಓದಿ : UGC-NET Examination Postponed : ಯುಜಿಸಿ ನೆಟ್ ಪರೀಕ್ಷೆಯ ಹಂತ-2ನ್ನು ಮುಂದೂಡಿದ NTA, ಹೊಸ ದಿನಾಂಕದ ವಿವರ ಇಲ್ಲಿದೆ

2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 43 ಸ್ಥಾನಗಳಿಗೆ ಸೀಮಿತವಾಗಿದ್ದ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ ನಂತರ ಬಿಜೆಪಿಯ ವರ್ತನೆಯನ್ನು ನಿತೀಶ್ ಕುಮಾರ್ ಎಂದಿಗೂ ಇಷ್ಟಪಡಲಿಲ್ಲ. ಬಿಜೆಪಿ ಮತ್ತು ಜೆಡಿಯು ವಿವಿಧ ವಿಷಯಗಳಲ್ಲಿ ವಿಭಿನ್ನ ರಾಗಗಳನ್ನು ಜಪಿಸುತ್ತಿದ್ದರು. ಹೀಗಿರುವಾಗ ಕೇಂದ್ರದ ಮಾಜಿ ಸಚಿವ ಆರ್.ಸಿ.ಪಿ.ಸಿಂಗ್ ರಾಜೀನಾಮೆ ನೀಡಿದ ಬಳಿಕ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ‘ಚಿರಾಗ್ ಮಾಡೆಲ್’ ಕುರಿತು ಮಾತನಾಡಿದ ರೀತಿ, ಜೆಡಿಯು ವಿಭಿನ್ನ ಹಾದಿ ಹಿಡಿದಿದೆ.

ಮೂಲಗಳ ಪ್ರಕಾರ, ಇಂದು ನಡೆದ ಮಹಾಮೈತ್ರಿಕೂಟದ ಸಭೆಯಲ್ಲಿ, ಆರ್‌ಜೆಡಿ ಶಾಸಕರು, ಎಂಎಲ್‌ಸಿಗಳು ಮತ್ತು ರಾಜ್ಯಸಭಾ ಸಂಸದರು ತೇಜಸ್ವಿ ಯಾದವ್‌ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದು, ನಾವು ಅವರೊಂದಿಗಿದ್ದೇವೆ ಎಂದು ಹೇಳಿದರು. ಆದರೆ ಕಾಂಗ್ರೆಸ್ ಮತ್ತು ಎಡ ಶಾಸಕರು ತೇಜಸ್ವಿ ಯಾದವ್ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿಯವರ ಹೇಳಿಕೆ :

ಅದೇ ಸಮಯದಲ್ಲಿ, ಕೇಂದ್ರ ಸಚಿವ ಕೌಶಲ್ ಕಿಶೋರ್, "ಬಿಹಾರದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ" ಎಂದು ಹೇಳಿದರು. "ಆದರೆ ಬಿಜೆಪಿ ಯಾವುದೇ ವಿವಾದ ಅಥವಾ ಅಹಿತಕರ ಪರಿಸ್ಥಿತಿಯನ್ನು ಸೃಷ್ಟಿಸಲು ಏನನ್ನು ಮಾಡಲಿಲ್ಲ. ಜೆಡಿಯು ನಿರ್ಧಾರ ತೆಗೆದುಕೊಳ್ಳುತ್ತದೆ ಆದರೆ ಬಿಜೆಪಿಯು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಉಳಿಯಬೇಕೆಂದು ಬಯಸುತ್ತದೆ. ಬಿಹಾರದ ಜನರ ಒಳಿತಿಗಾಗಿ ಜೆಡಿಯು-ಬಿಜೆಪಿ ಮತ್ತು ಇತರ ಪಕ್ಷಗಳು ನಿತೀಶ್ ಕುಮಾರ್ ನಾಯಕತ್ವದಲ್ಲಿ ದೃಢವಾಗಿ ಕೆಲಸ ಮಾಡುವುದನ್ನು ಬಿಜೆಪಿ ಬಯಸುತ್ತದೆ" ಎಂದರು.

ಇದನ್ನೂ ಓದಿ : Viral Video : ನಾಯಿಯನ್ನು ರಕ್ಷಿಸಲು ಬೃಹತ್ ಹೆಬ್ಬಾವಿನ ಜೊತೆ ಪುಟ್ಟ ಮಕ್ಕಳ ಫೈಟ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News