ಲಖೀಂಪುರ ಹಿಂಸಾಚಾರ ಒಂದು ಯೋಜಿತ ಪಿತೂರಿ ಎಂದ SIT

ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಎಸ್‌ಐಟಿ ಮತ್ತು ಯುಪಿ ಸರ್ಕಾರದ ಆಯೋಗ ಎರಡೂ ತನಿಖೆ ನಡೆಸುತ್ತಿವೆ. ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ.  

Written by - Ranjitha R K | Last Updated : Dec 14, 2021, 01:39 PM IST
  • ಲಖಿಂಪುರ ಹಿಂಸಾಚಾರವನ್ನು ಯೋಜಿತ ಪಿತೂರಿ -ಎಸ್‌ಐಟಿ
  • ಆಕಸ್ಮಿಕ ಘಟನೆಯಲ್ಲ, ಬದಲಾಗಿ ಇದೊಂದು ಯೋಜಿತ ಕೊಲೆ ಸಂಚು
  • ತನಿಖೆ ನಡೆಸುತ್ತಿವೆ ಎಸ್‌ಐಟಿ, ಯುಪಿ ಸರ್ಕಾರದ ಆಯೋಗ
ಲಖೀಂಪುರ ಹಿಂಸಾಚಾರ ಒಂದು ಯೋಜಿತ ಪಿತೂರಿ ಎಂದ SIT  title=
ಲಖಿಂಪುರ ಹಿಂಸಾಚಾರವನ್ನು ಯೋಜಿತ ಪಿತೂರಿ -ಎಸ್‌ಐಟಿ (file photo)

ಲಖಿಂಪುರ : ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ಹಿಂಸಾಚಾರ (Lakhimpur Violence) ಪ್ರಕರಣದಲ್ಲಿ, ಎಸ್‌ಐಟಿ (SIT) ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದೆ. ಎಸ್‌ಐಟಿ ವರದಿಯ ಪ್ರಕಾರ, ಲಖಿಂಪುರ ಹಿಂಸಾಚಾರವನ್ನು ಯೋಜಿತ ಪಿತೂರಿ ಎಂದು ಹೇಳಲಾಗಿದೆ.  ಇದು ಆಕಸ್ಮಿಕ ಘಟನೆಯಲ್ಲ, ಬದಲಾಗಿ ಇದೊಂದು ಯೋಜಿತ ಕೊಲೆ ಸಂಚಿಗೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು  ಎಸ್‌ಐಟಿ ಹೇಳಿದೆ. 

ಇದೀಗ ಸೆಕ್ಷನ್ ಗಳನ್ನು ತೆಗೆದು ಹಾಕಿ, ಇತರ ಸೆಕ್ಷನ್ ಗಳನ್ನು ಸೇರಿಸಲಾಗಿದೆ. ಐಪಿಸಿಯ 120ಬಿ, 307, 34 ಮತ್ತು 326 ಸೆಕ್ಷನ್‌ಗಳನ್ನು ಹೆಚ್ಚಿಸಲಾಗಿದೆ. ಅಕ್ಟೋಬರ್ 3 ರಂದು ಲಖಿಂಪುರದ ಟಿಕುನಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ : Srinagar Terrorist Attack: ಶ್ರೀನಗರ ಭಯೋತ್ಪಾದನಾ ದಾಳಿಯ ನಂತರ ಭಾರತೀಯ ಸೇನೆಯ ದೊಡ್ಡ ಕಾರ್ಯಾಚರಣೆ, ಪೂಂಚ್‌ನಲ್ಲಿ ಮುಂದುವರೆದ ಎನ್‌ಕೌಂಟರ್

ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ (Ajay Mishra Teni) ಅವರ ಪುತ್ರ ಆಶಿಶ್ ಮಿಶ್ರಾ ಲಖಿಂಪುರ ಹಿಂಸಾಚಾರದ (Lakhimpur Violence) ಆರೋಪಿಯಾಗಿದ್ದಾರೆ. ಸದ್ಯ ಅವರು ಜೈಲಿನಲ್ಲಿದ್ದಾರೆ. ವಿಚಾರಣೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮತ್ತೊಂದೆಡೆ, ಘಟನೆಯ ಸಮಯದಲ್ಲಿ ತನ್ನ ಮಗ ಆಶಿಶ್ ಮಿಶ್ರಾ ಇರಲಿಲ್ಲ ಎಂದು ಅಜಯ್ ಮಿಶ್ರಾ ಟೆನಿ ಹೇಳಿಕೊಂಡಿದ್ದರು. 

ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಎಸ್‌ಐಟಿ (SIT) ಮತ್ತು ಯುಪಿ ಸರ್ಕಾರದ ಆಯೋಗ ಎರಡೂ ತನಿಖೆ ನಡೆಸುತ್ತಿವೆ. ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ. ಸಿಜೆಎಂ ನ್ಯಾಯಾಲಯದಲ್ಲಿ ಎಸ್‌ಐಟಿ ಪರವಾಗಿ ಅರ್ಜಿ ಸಲ್ಲಿಸಲಾಗಿದ್ದು, ಕೊಲೆ ಮಾಡುವ ಉದ್ದೇಶದಿಂದ ಈ ಘಟನೆ ನಡೆದಿರುವುದರಿಂದ ಸೆಕ್ಷನ್‌ಗಳನ್ನು ಬದಲಾಯಿಸುವಂತೆ ಕೋರಲಾಗಿದೆ. ಈ ಘಟನೆಯನ್ನು ಯೋಜಿತ ರೀತಿಯಲ್ಲಿ ಮಾಡಲಾಗಿದೆ. ನ್ಯಾಯಾಲಯಕ್ಕೆ (Court) ಸಂಪೂರ್ಣ ವರದಿ ಸಲ್ಲಿಕೆಯಾದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ. 

ಇದನ್ನೂ ಓದಿ : Omicronನ ಮೂರು ಹೊಸ ಪ್ರಕರಣ ಪತ್ತೆ, ಭಾರತದಲ್ಲಿ ವೇಗವಾಗಿ ಹರಡುತ್ತಿದೆ ಹೊಸ ರೂಪಾಂತರ

ಲಖೀಂಪುರ ಹಿಂಸಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ,  ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಲಖಿಂಪುರ ಹಿಂಸಾಚಾರ ಪ್ರಕರಣ ಸುಪ್ರೀಂ ಕೋರ್ಟ್ (Supreme court) ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಯುಪಿ ಸರ್ಕಾರವೂ (UP Government) ಅಫಿಡವಿಟ್ ಸಲ್ಲಿಸಬೇಕಿತ್ತು.

ಲಖಿಂಪುರ ಹಿಂಸಾಚಾರಕ್ಕೆ ಎರಡು ಆಯಾಮಗಳಿವೆ. ಒಂದು ಪ್ರಕರಣದಲ್ಲಿ ರೈತ ಪ್ರತಿಭಟನಾಕಾರರು ಬಿಜೆಪಿ (BJP) ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ರೈತ ಚಳವಳಿಗಾರರನ್ನು ಜೀಪಿನಿಂದ ಹತ್ತಿಕ್ಕಲಾಗಿದೆ. ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ. ಹಿಂಸಾಚಾರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಚಾಲಕ ಕೂಡ ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News